Asianet Suvarna News Asianet Suvarna News

ಕೊರೋನಾ ಭಯಾನೇ ಇಲ್ವಾ ಜನಕ್ಕೆ? ಸಾಮಾಜಿಕ ಅಂತರಕ್ಕೆ ಡೋಂಟ್ ಕೇರ್‌..!

ತಿರುಗಿಯೂ ನೋಡದ ಪುರಸಭೆಯ ಅಧಿಕಾರಿಗಳು|ಮೈಮರೆತ ಸಾರ್ವಜನಿಕರು|ಸರ್ಕಾರ ಕೊರೋನಾ ಜಾಗೃತಿಗಾಗಿ ಸಾಕಷ್ಟು ಮುಂ​ಜಾ​ಗ್ರ​ತಾ ಕ್ರಮಗಳನ್ನು ಅನುಸರಿಸಿ ಎಂದು ಸಾಕಷ್ಟು ಪ್ರಚಾರ ಮತ್ತು ಜಾಗೃತಿ ಮೂಡಿಸುತ್ತಿದ್ದರೂ ಸಾರ್ವಜನಿಕರು ಮಾತ್ರ ಈ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿಲ್ಲ|

People Did Not Maintain Social distance in Kushtagi in Koppal District
Author
Bengaluru, First Published Jun 22, 2020, 7:38 AM IST

ಅನಿಲ ಎಸ್‌. ಆಲಮೇಲ

ಕುಷ್ಟಗಿ(ಜೂ.22): ಜಗ​ತ್ತಿ​ನಾ​ದ್ಯಂತ ಕೊರೋನಾ ವೈರಸ್‌ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ಒಂದು ಕಡೆಯಾದರೆ ಪಟ್ಟಣದಲ್ಲಿ ಭಾನುವಾರದ ಸಂತೆ ಮೈದಾನದಲ್ಲಿ ಸಂತೆ ಮಾರಾಟ ಮತ್ತು ಕೊಳ್ಳುವವರ ಮುಖದಲ್ಲಿ ಮಾಸ್ಕ್‌ ಮತ್ತು ಸಾಮಾಜಿಕ ಅಂತರ ಮಾಯ​ವಾ​ಗಿ​ದೆ.

ಭಾನುವಾರ ಇಲ್ಲಿನ ತರಕಾರಿ ಮಾರುಕಟ್ಟೆ ಆವರಣದಲ್ಲಿ ವಹಿವಾಟು ನಡೆಯಿತು. ಈ ಸಂದರ್ಭದಲ್ಲಿ ತರಕಾರಿ ವ್ಯಾಪಾರಿಗಳು ಮತ್ತು ಕೊಳ್ಳವವರು ಸೇರಿದಂತೆ ಇತರೆ ವ್ಯಾಪಾರಿಗಳು ಮಾಸ್ಕ್‌ ಹಾಕಿಕೊಂಡಿ​ರ​ಲಿ​ಲ್ಲ. ಅಲ್ಲದೆ ಸಾಮಾಜಿಕ ಅಂತರವನ್ನೂ ಕಾಯ್ದು​ಕೊಂಡಿ​ರ​ಲಿ​ಲ್ಲ.

ಸರ್ಕಾರ ಕೊರೋನಾ ಜಾಗೃತಿಗಾಗಿ ಸಾಕಷ್ಟು ಮುಂ​ಜಾ​ಗ್ರ​ತಾ ಕ್ರಮಗಳನ್ನು ಅನುಸರಿಸಿ ಎಂದು ಸಾಕಷ್ಟುಪ್ರಚಾರ ಮತ್ತು ಜಾಗೃತಿ ಮೂಡಿಸುತ್ತಿದ್ದರೂ ಸಾರ್ವಜನಿಕರು ಮಾತ್ರ ಈ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿಲ್ಲ. ಇದ​ಕ್ಕೆ ಪಟ್ಟಣದಲ್ಲಿ ಭಾನುವಾರ ​ನ​ಡೆ​ದ ವಹಿವಾಟು ಸಾಕ್ಷಿ ಯಾಗಿತ್ತು.

ಕೊಪ್ಪಳ: ಕೊರೋನಾ ಪೀಡಿತರ ಚಿಕಿತ್ಸೆಗೆ 9 ಖಾಸಗಿ ಆಸ್ಪತ್ರೆ

ಇಲ್ಲಿನ ಪುರಸಭೆಯ ಅಧಿಕಾರಿಗಳು ಇತ್ತೀಚಿಗೆ ಕೊರೋನಾ ವೈರಸ್‌ ತಡೆಗಟ್ಟುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದ್ದ​ರು. ಅಲ್ಲದೇ, ಮಾಸ್ಕ್‌ ದಿನವನ್ನೂ ಆಚರಿಸಿದ್ದರು. ಆದರೆ, ಇದು ದಿನಾಚರಣೆಗೆ ಮಾತ್ರ ಸಿಮೀತವಾಗಿತ್ತು.

ಪಟ್ಟಣ ಸೇರಿದಂತೆ ಕೆಲ ಗ್ರಾಮೀಣ ಪ್ರದೇಶದ ಸಾರ್ವಜನಿಕರು ಸಂತೆಗೆ ಆಗಮಿಸಿದ್ದರು. ಆದರೆ, ಅಲ್ಲಲ್ಲಿ ಒಬ್ಬಿಬ್ಬರ ಮುಖದಲ್ಲಿ ಮಾಸ್ಕ್‌ ಕಂಡಿ​ದ್ದು ಬಿಟ್ಟರೆ ಬಹುತೇಕ ಸಾರ್ವಜನಿಕರ ಮಾಸ್ಕ್‌ ಧರಿ​ಸಿ​ರ​ಲಿ​ಲ್ಲ. ಇಲ್ಲಿನ ಕೃಷಿ ಮಾರುಕಟ್ಟೆ ಸಮಿತಿ ಆವರಣದಲ್ಲಿ ಸದ್ಯ ಬೇವಿನ ಬೀಜ ಖರೀದಿ ಮತ್ತು ಮಾರಾಟ ಜೋರಾಗಿದ್ದು, ಭಾನುವಾರ ಅಲ್ಲೂ ಸಾಮಾ​ಜಿಕ ಅಂತರ ಮತ್ತು ಮಾಸ್ಕ್‌ ಮಾಯ​ವಾ​ಗಿ​ತ್ತು. ಪಕ್ಕದ ಮಹಾರಾಷ್ಟ್ರದಿಂದ ಬೇವಿನ ಬೀಜಗಳನ್ನು ಖರೀದಿಸುವವರು ಮತ್ತು ಲಾರಿಗಳ ಚಾಲಕರು, ಮಾಲೀಕರು ಸೇರಿದಂತೆ ನೂರಾರು ಜನ ಇಲ್ಲಿಗೆ ಆಗಮಿಸು​ತ್ತಾ​ರೆ. ಆದರೆ, ಸಾರ್ವ​ಜ​ನಿ​ಕರು ಮುಂಜಾ​ಗ್ರ​ತೆ ವಹಿ​ಸ​ದಿ​ರು​ವುದು ಆತಂಕಕ್ಕೆ ಕಾರ​ಣ​ವಾ​ಗಿ​ದೆ.
 

Follow Us:
Download App:
  • android
  • ios