Asianet Suvarna News Asianet Suvarna News

ಮನೆಗೆ ರೈಲು ಓಡಿಸಿಕೊಂಡ್ರೆ ಅನ್ಯರು ಮನೆಗೆ ಹೋಗೋದ್ಯಾಗೆ ಅಂಗಡಿಯವರೇ?

ರೇಲ್ವೆ ಸವಲತ್ತು ಹೊಂದುವಲ್ಲಿ ಸದಾ ಅನ್ಯಾಯಕ್ಕೊಳಗಾಗುತ್ತಿರುವ ಹೈ- ಕ ಜಿಲ್ಲೆಗಳು ಇದೀಗ 'ಗಣೇಶ ಚೌತಿ'ಗೆ ಬೆಂಗಳೂರಿನಿಂದ ಬಂದು ಹೋಗಲು 'ವಿಶೇಷ ರೈಲು'  ಹೊಂದುವಲ್ಲಿಯೂ ಅಲಕ್ಷಕ್ಕೊಳಗಾಗಿವೆ.ಕೇಂದ್ರ ರೇಲ್ವೆ ರಾಜ್ಯ ಸಚಿವ ಸುರೇಶ ಅಂಗಡಿ ಅವರು ತಮ್ಮ ಜಿಲ್ಲೆಗೆ ಮಾತ್ರ ಗಣೇಶ ಚತುರ್ಥಿಗೆ ವಿಶೇಷ ರೈಲು ಬಿಟ್ಟುಕೊಂಡಿದ್ದಾರೆ.

People demands State railway minister Suresh Angadi to let train to Kalaburagi
Author
Bengaluru, First Published Aug 28, 2019, 2:50 PM IST

ಕಲಬುರಗಿ, (ಆ.28): ರೇಲ್ವೆ ಇಲಾಖೆ (ನೈರುತ್ಯ ವಲಯ) ಆ. 30 ಹಾಗೂ ಸೆ. 2ರ ಅವಧಿಯಲ್ಲಿ ಬೆಂಗಳೂರು, ಮೈಸೂರು, ಹುಬ್ಬಳ್ಳಿಯಿಂದ ಧಾರವಾಡ, ಬೆಳಗಾವಿ, ವಿಜಯಪುರ, ಬಾಗಲಕೋಟೆ, ಬಾದಾಮಿ, ಕೊಪ್ಪಳ, ಗದಗ, ಬಳ್ಳಾರಿಗೆ ಜನ ಬಂದು ಹೋಗಲು 3 ವಿಶೇಷ ರೈಲುಗಳನ್ನೇ ಓಡಿಸುತ್ತಿದೆ. 

ಆದರೆ ಹೈದ್ರಾಬಾದ್ ಕರ್ನಾಟಕ ಭಾಗದ ಕಲಬುರಗಿ, ಯಾದಗಿರಿ, ರಾಯಚೂರು, ಬೀದರ್ ಜಿಲ್ಲೆಗಳಿಗೆ ಈ ಭಾಗ್ಯವಿಲ್ಲ. ರೇಲ್ವೆ ಇಲಾಖೆಯ ಈ ಧೋರಣೆ  ಹೈ- ಕ ಭಾಗದವರನ್ನು ಕೆರಳಿಸಿದೆ. 

ಗೌರಿ ಗಣೇಶ್ ಹಬ್ಬದ ವಿಶೇಷ: KSRTCಯಿಂದ ಹೆಚ್ಚುವರಿ ಬಸ್, ರಿಯಾಯಿತಿಯೂ ಉಂಟು

ಪಾರ್ಲಿಮೆಂಟ್ ಇಲೆಕ್ಷನ್‍ ಸಮಯದಲ್ಲಿ ಕೇಳದೆ ರೈಲು ಓಡಿಸ್ದೋರು ಗಣೇಶ್ ಚೌತಿಗ್ಯಾಕೆ ನಮ್ಮನ್ನ ಮರೆತರೋ? ಎಂದು ಪ್ರಶ್ನಿಸುತ್ತಿದ್ದಾರೆ. ಚುನಾವಣೆ ಬಂದಾಗ ನೆನಪಾಗುವ ಹೈ-ಕ ಮಂದಿಗೆ ಹಬ್ಬದ ಸವಲತ್ತು ಕೊಡವಾಗ ನೆನಪಾಗೋದಿಲ್ಲವೆ? ಎಂದು ಜನ ರೇಲ್ವೆ ಇಲಾಖೆಯ ಮಲತಾಯಿ ಧೋರಣೆಗೆ ಶಪಿಸುತ್ತಿದ್ದಾರೆ.

ಗಣೇಶ ಚೌತಿ ವಿಶೇಷ ರೈಲುಗಳಿವು
1) ಬೆಂಗಳೂರು- ಬೆಳಗಾವಿ
2) ಮೈಸೂರು- ಬೆಂಗಳೂರು- ವಿಜಯಪೂರ ಎಕ್ಸಪ್ರೆಸ್
3) ಹುಬ್ಬಳ್ಳಿ- ವಿಜಯಪುರ
ಈ ಮೂರು ರೈಲುಗಳು ಆ. 30 ರಂದು ಮೈಸೂರು, ಬೆಂಗಳೂರು ಹುಬ್ಬಳ್ಳಿಯಿಂದ ಹೊರಡುತ್ತವೆ, ನಂತರ ಸೆ. 2 ರ ರಾತ್ರಿ ಮತ್ತೆ ಆಯಾ ನಿಗದಿಪಡಿಸಿದ ಊರುಗಳಿಂದ ಹೊರಟು ಮೈಸೂರು, ಬೆಂಗಳೂರು ಸೇರಲಿವೆ. ಈ ರೈಲುಗಳಿಗೆ ವಿಶೇಷ ದರ ಹಾಗೂ ವಿಶೇಷ ಕೋಚಿಂಗ್ ಸವಲತ್ತೂ ಮಾಡಲಾಗಿದ್ದು, ಈಗಾಗಲೇ ಬುಕಿಂಗ್ ಆರಂಭವಾಗಿದೆ.

ಕೇಂದ್ರ ರೇಲ್ವೆ ರಾಜ್ಯ ಸಚಿವರು ಸುರೇಶ ಅಂಗಡಿ ಬೆಳಗಾವಿ ಸಂಸದ. ಸಹಜವಾಗಿಯೇ ಬೆಳಗಾವಿಗೆ ಇಲಾಖೆ ಪ್ರಾಮುಖ್ಯತೆ ನೀಡೋದು. ಆದರೆ ಬೆಳಗಾವಿ ಸೇರಿದಂತೆ ಉ- ಕ ಜಿಲ್ಲೆಗಳಿಗೆಲ್ಲ ರೈಲು ಓಡಿಸಿರೋ ಇಲಾಖೆ ಹೈ- ಕ 4 ಜಿಲ್ಲೆಗಳನ್ನೇ ಯಾಕೆ ದೂರ ಇಡಬೇಕು? ಈ ಕ್ರಮದ ಹಿಂದಿನ ತರ್ಕ ಏನಿರಬಹುದು? ಎನ್ನುವುದು ಈ ಭಾಗದ ಜನರ ಪ್ರಶ್ನೆ.

ಹಿಂದೆ ಕಲಬುರಗಿಯಿಂದ ಕಾಂಗ್ರೆಸ್‍ನ ಡಾ. ಖರ್ಗೆ ಸಂಸದರಾಗಿದ್ದಾಗ ಕೇಂದ್ರದಲ್ಲಿ ಬಿಜೆಪಿ ಸರಕಾರವಿತ್ತು. ಈ ಭಾಗದಲ್ಲಿ ಯಾವುದೇ ರೈಲು ಓಡದಿದ್ದರೂ ಇದು ರಾಜಕೀಯ ಪ್ರೇರಿತ ಅಂದುಕೊಂಡು ಜನ ತೆಪ್ಪಗಿರುತ್ತಿದ್ದರು.

ಈಗ ಪರಿಸ್ಥಿತಿ ಬದಲಾಗಿದೆ. ಕಲಬುರಗಿ ಸೇರಿದಂತೆ ಹೈ- ಕ ಭಾಗದ 5 ಸಂಸತ್ ಸ್ಥಾನಗಳು ಬಿಜೆಪಿ ಪಾಲಾಗಿವ., ಆದಾಗ್ಯೂ  ಮಲತಾಯಿ ಧೋರಣೆ ಮುಂದುವರಿದಿರೋದೇ ಜನರನ್ನು ಕಂಗಾಲಾಗಿಸಿದೆ. ಯಾಕೆ ರೇಲ್ವೆಗೆ ಹೈ- ಕ ಜಿಲ್ಲೆಗಳೆಂದರೆ ಅಪಥ್ಯ? ಎಂಬ ಪ್ರಶ್ನೆ ಕಾಡುತ್ತಿದೆ.

ವೇಟಿಂಗ್ ಲಿಸ್ಟ್  ಎಂಬ ಹನುಮನ ಬಾಲ!
ಗಣಪತಿ ಹಬ್ಬಕ್ಕಾಗಿ ಬೆಂಗಳೂರಿನಿಂದ ಹೈ- ಕ ಜಿಲ್ಲೆಗಳತ್ತ ಬರುವವರು ಅಧಿಕ. ರೇಲ್ವೆ ವೇಟಿಂಗ್ ಲಿಸ್ಟ್ ಹನುಮನ ಬಾಲವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಆಸಕ್ತ ಪ್ರಯಾಣಿಕರು ಉದ್ಯಾನ, ಬಸವ, ಕರ್ನಾಟಕ, ಸೊಲ್ಲಾಪುರ ಎಕ್ಸಪ್ರೆಸ್‍ನ ಆ. 27 ರ ವರೆಗಿನ ವೆಟಿಂಗ್ ಲಿಸ್ಟ್ ಮಾಹಿತಿ ಕ್ರೂಢೀಕರಿಸಿದ್ದು ಅದು ಈಗಲೇ 1, 392 ತಲುಪಿದೆ. 

ಈ ಪ್ರಮಾಣ 2 ಸಾವಿರ ದಾಟಿದರೂ ಅಚ್ಚರಿ ಪಡಬೇಕಾಗಿಲ್ಲ. ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಜನ ರೈಲು ಟಿಕೆಟ್‍ಗಾಗಿ ಕಾಯುತ್ತಿದ್ದರೂ ಸಹ ರೇಲ್ವೆಯವರ ಜಾಣ ಕುರುಡುತನ ಯಾಕೋ? ಎಂಬುದೇ ಗೊತ್ತಾಗುತ್ತಿಲ್ಲ. ಈ ಬಗ್ಗೆ ಮಾನ್ಯ ಸಚಿವರು ಸರೇಶ್ ಅಂಗಡಿ ಅವರು ಗಮನಹರಿಸಬೇಕಿದೆ.

ಮತ್ತೊಂದೆಡೆ ಗಣೇಶ ಚತುರ್ಥಿ ಪ್ರಯುಕ್ತ ಕೆಎಸ್‌ಆರ್‌ಟಿಸಿ ಹೆಚ್ಚುವರಿಯಾಗಿ 1800 ಬಸ್‌ಗಳನ್ನು ಬಿಟ್ಟಿದೆ. ಅದು ಮುಂಗಾಡ ಟಿಕೆಟ್ ಕಾಯ್ದಿರಿಸಿದರೆ ರಿಯಾಯಿತಿ ಆಫರ್ ಕೂಡ ನೀಡಿದೆ. ಒಂದು ವೇಳೆ ಈ ಭಾಗದ ಜನರಿಗೆ ರೈಲ್ವೆ ಸಿಗಲಿಲ್ಲ ಅಂದ್ರೆ ಕೆಎಸ್‌ಆರ್‌ಟಿಸಿ ಬಸ್‌ಗಳ ಹೋಗಬಹುದು.

Follow Us:
Download App:
  • android
  • ios