Asianet Suvarna News Asianet Suvarna News

ಬೀದರ್‌: ಮಳೆ​ಯಲ್ಲೇ ರಸ್ತೆ ಗುಂಡಿ ಮುಚ್ಚಿದ ಬಾಲಕ, ಸಾರ್ವ​ಜ​ನಿ​ಕ​ರಿಂದ ಶ್ಲಾಘನೆ

7 ವರ್ಷದ ಬಾಲಕನ ಕಳ​ಕ​ಳಿಗೆ ಸಾರ್ವ​ಜ​ನಿ​ಕ​ರಿಂದ ಶ್ಲಾಘನೆ| ಚರಂಡಿ ಸ್ವಚ್ಛ​ಗೊ​ಳಿಸಿ ಗುಂಡಿ ಮುಚ್ಚಿದ ಬಾಲ​ಕ|ಬಾಲಕ ಮಾಡಿದ ಕಾರ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ| ಚರಂಡಿ ಸ್ವಚ್ಛಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ಮಾಡಿದ ಬಾಲಕ| 

People Appreciation for Young Boy Social Work in Bidar
Author
Bengaluru, First Published Aug 22, 2020, 1:24 PM IST

ಬೀದರ್‌(ಆ.22): ಸುರಿಯುತ್ತಿರುವ ಮಳೆಗೆ ರಸ್ತೆಗಳು ತನ್ನ ನಿಜ ಬಣ್ಣ ಬಯಲು ಮಾಡಿ, ಜನರ ಸಂಚಾರಕ್ಕೆ ಸಂಚಕಾರವಾದರೂ ಇವುಗಳತ್ತ ಕ್ಯಾರೆ ಎನ್ನದ ನಗರಸಭೆಯ ನಿರ್ಲಕ್ಷ್ಯವನ್ನು ಬಯಲು ಮಾಡಿದೆ. ಇದರ ಬನ್ನಲ್ಲೆ 7 ವರ್ಷದ ಬಾಲಕನೊಬ್ಬ ರಸ್ತೆ ಗುಂಡಿಗಳನ್ನು ಮುಚ್ಚುವ ಮೂಲಕ ಸಾಮಾಜಿಕ ಕಳಕಳಿ ಮೆರೆದರೆ, ಇದು ಆಡಳಿತ ವರ್ಗಕ್ಕೆ ಪರೋಕ್ಷ ಛೀಮಾರಿ ಹಾಕುವಂತಿತ್ತು.

ಜಿಲ್ಲೆಯಾದ್ಯಂತ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆಗಳೆಲ್ಲವೂ ಜಲಾವೃತವಾಗಿ ರಸ್ತೆ ಮಧ್ಯ ಬಿದ್ದ ಗುಂಡಿಗಳಲ್ಲಿ ಬೈಕ್‌ ಸವಾರರು ಅಪಘಾತಕ್ಕೀಡಾಗುತ್ತಿದ್ದರು. ಈ ಸಮಸ್ಯೆ ಅರಿತ 7 ವರ್ಷದ ಬಾಲಕ ಕಂಕರ್‌ ಹಾಕಿ ಗುಂಡಿಗಳನ್ನು ಮುಚ್ಚಿದ ಸಾಮಾ​ಜಿಕ ಕಳಕ​ಳಿಗೆ ಸಾರ್ವ​ಜ​ನಿ​ಕರು ಮೆಚ್ಚುಗೆ ವ್ಯಕ್ತ​ಪ​ಡಿ​ಸಿ​ದ್ದಾ​ರೆ.

ಬಸವಕಲ್ಯಾಣ: ಬಿಜೆಪಿ ಪ್ರಧಾನ ಕಾರ್ಯದರ್ಶಿ ಮೇಲೆ ಪೋಸ್ಟ್‌ ಮ್ಯಾನ್‌ ಹಲ್ಲೆ

ಅಧಿ​ಕಾ​ರಿ​ಗಳ ನಿರ್ಲಕ್ಷ್ಯ ಧೋರ​ಣೆ:

ನಗರದ ಅಶೋಕಾ ಹೊಟೇಲ್‌ನಿಂದ ಮೈಲೂರು ಕ್ರಾಸ್‌ಗೆ ಹೋಗುವ ದಾರಿ ಮಧ್ಯ ರೈಲ್ವೆ ಸೇತುವೆ ಕೆಳ ಭಾಗದಲ್ಲಿ ಮಳೆ ನೀರು ನಿಂತು ಹೊಂಡದಂತೆ ನಿರ್ಮಾಣವಾಗಿತ್ತು. ಕಳೆದ ವರ್ಷವಷ್ಟೇ ಲಕ್ಷಾಂತರ ರುಪಾಯಿ ವೆಚ್ಚ ಮಾಡಿ ಅರೆಬರೆ ರಿಪೇರಿ ಮಾಡಿದ್ದ ಚರಂಡಿ ಹಾಳಾ​ಗಿದ್ದು, ಜನರ ಪ್ರಾಣ ಸಂಕಟಕ್ಕೆ ಕಾರಣವಾಗಿದೆ. ಇದೆಲ್ಲ ನಗರಸಭೆಯ ಗಮನಕ್ಕೆ ಇದ್ದರೂ, ಈ ರಸ್ತೆಯ ಹೊಣೆ ಲೋಕೋಪಯೋಗಿ ಇಲಾಖೆಯದ್ದು ಎಂದು ಕೈಚೆಲ್ಲುವ ಮೂಲಕ ನಿರ್ಲಕ್ಷ್ಯ ಧೋರ​ಣೆ​ಯನ್ನೇ ಮುಂದು​ವ​ರಿ​ಸಿ​ದೆ.

ಚರಂಡಿ ಸ್ವಚ್ಛ​ಗೊ​ಳಿಸಿ, ಗುಂಡಿ ಮುಚ್ಚಿದ ಬಾಲ​ಕ:

ಇಲ್ಲಿನ ಸಮ​ಸ್ಯೆ​ಯನ್ನು ಅರಿತ ಬಾಲಕ ಗುಂಡಿಗಳನ್ನು ಮುಚ್ಚುವ ಕಾರ್ಯಕ್ಕೆ ಮುಂದಾಗಿದ್ದು ವಿಶೇಷ. ಇದೇ ರಸ್ತೆಯಿಂದ ಕಾಲ್ನಡಿಗೆಯಲ್ಲಿ ಮನೆಗೆ ಹೋಗು​ತ್ತಿದ್ದ ಬಾಲಕ, ಬೈಕ್‌ ಸವಾರರು ಈ ಮಾರ್ಗದಲ್ಲಿ ಸಂಚ​ರಿ​ಸಲು ಸಂಕಷ್ಟ ನೋಡಿ, ಚರಂಡಿ ಸ್ವಚ್ಛಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ಮಾಡಿದ್ದಾನೆ. ನಂತರ ಜಿಟಿ ಜಿಟಿ ಮಳೆಯಲ್ಲಿಯೇ ಗುಂಡಿ ಪಕ್ಕದಲ್ಲೇ ಇದ್ದ ಜಲ್ಲಿಕಲ್ಲು ಹಾಗೂ ಮರಳನ್ನು ಹಾಕಿ ಗುಂಡಿಯನ್ನು ಮುಚ್ಚಿ ಹಾಕಿ ಸುಗಮ ಸಂಚಾರಕ್ಕೆ ದಾರಿ ಮಾಡಿಕೊಟ್ಟಿದ್ದಾನೆ.

ಈ ಬಾಲಕ ಮಾಡಿದ ಕಾರ್ಯ ನಿಧಾನವಾಗಿ ಜಿಲ್ಲೆಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ರಸ್ತೆ ಕಾಮಗಾರಿಯನ್ನು ಅಧಿಕಾರಿಗಳು ಮಾಡಿಸ್ತಾರೆ ನೀನ್ಯಾಕೆ ಮಾಡ್ತಿಯಾ ಅಂದ್ರೆ, ಬೈಕ್‌ ಸವಾರರು ಬೀಳುತ್ತಿದ್ದಾರೆ. ಅದಕ್ಕಾಗಿ ಹೀಗೆ ಮಾಡಿದೆ ಎನ್ನುವ ಮೂಲಕ ಬಾಲಕನ ಸಮಾಜಮುಖಿ ಚಿಂತನೆಗೆ ಭೇಷ್‌ ಹೇಳಿದ್ದಾರೆ.
 

Follow Us:
Download App:
  • android
  • ios