Asianet Suvarna News Asianet Suvarna News

ಇಳಿ​ವ​ಯ​ಸ್ಸಲ್ಲಿ ನೋಡಿಕೊಳ್ಳದ ಮಕ್ಕಳಿಂದ ಆಸ್ತಿ ಹಿಂಪಡೆದ ತಂದೆ-ತಾಯಿ..!

ಇಳಿ​ವ​ಯ​ಸ್ಸಲ್ಲಿ ಕಷ್ಟ,​ ಸು​ಖ​ಕ್ಕಾ​ಗದ ಮಕ್ಕ​ಳಿಗೆ ಪಾಠ ಕಲಿ​ಸಿದ ಪೋಷ​ಕ​ರು| ಹಾವೇರಿ ಜಿಲ್ಲೆಯ ಹಾನ​ಗ​ಲ್‌​ನಲ್ಲಿ 2 ಪ್ರತ್ಯೇಕ ಪ್ರಕ​ರ​ಣ​ಗ​ಳಲ್ಲಿ ಮಕ್ಕ​ಳಿಂದ ಆಸ್ತಿ ಪಡೆದ ಪೋಷ​ಕ​ರು| ಹಿರಿ​ಯ ನಾಗರಿಕರ ರಕ್ಷಣಾ ಕಾಯ್ದೆ-2007ರ ಅನ್ವಯ ದಾಖ​ಲಾ​ಗಿ​ದ್ದ​ ಎರಡೂ ಪ್ರಕ​ರ​ಣ​ಗ​ಳು| 

Parents Who Has Inherited Property From Children grg
Author
Bengaluru, First Published Feb 6, 2021, 8:21 AM IST

ಹಾನಗಲ್ಲ(ಫೆ.06): ಇಳಿ​ವ​ಯ​ಸ್ಸಲ್ಲಿ ಸುಖ, ದುಃಖ​ ಕೇಳ​ದ, ಕನಿಷ್ಠ ಆರೋಗ್ಯವನ್ನೂ ವಿಚಾ​ರಿ​ಸದ ಮಕ್ಕಳಿಗೆ, ಪೋಷ​ಕರು ಬೇಡ, ಅವರು ಕೂಡಿಟ್ಟ ಆಸ್ತಿ ಮಾತ್ರ ಬೇಕು ಎನ್ನುವವರಿಗೆ ಹಾನ​ಗಲ್ಲ ತಾಲೂ​ಕಿನ ಈ ಎರಡು ಪ್ರಕ​ರಣಗಳು ಬಹು​ದೊಡ್ಡ ಪಾಠ. ಮೊದಲ ಪ್ರಕ​ರ​ಣ​ದಲ್ಲಿ ತಾಲೂ​ಕಿನ ಹಿರಿ​ಯಜ್ಜಿಯೊಬ್ಬರು ಕೊನೇ​ಗಾ​ಲ​ದಲ್ಲಿ ತನ್ನ ಕಷ್ಟ​ ಸು​ಖ​ಕ್ಕಾ​ಗದ ದತ್ತು ಮಗನಿಗೆ ಬರೆ​ದು​ಕೊ​ಟ್ಟಿದ್ದ ಆಸ್ತಿ​ಯನ್ನು ವಾಪಸ್‌ ಪಡೆ​ದರೆ, ಮನೆ ಬರೆ​ದು​ಕೊ​ಟ್ಟರೂ ಸರಿ​ಯಾಗಿ ನೋಡಿ​ಕೊ​ಳ್ಳದ ಪುತ್ರ​ನಿಂದ ಮಹಿ​ಳೆ​ಯೊ​ಬ್ಬ​ರನ್ನು ತಮ್ಮ ಆಸ್ತಿ ಮರ​ಳಿ ಪಡೆ​ಯು​ವಲ್ಲಿ ಯಶ​ಸ್ವಿ​ಯಾ​ಗಿ​ದ್ದಾ​ರೆ.

ಪ್ರಕ​ರ​ಣ-1: 

ಹಾನಗಲ್ಲ ತಾಲೂಕಿನ ಚಿಕ್ಕಾಂಶಿ ಹೊಸೂರು ಗ್ರಾಮದ ರತ್ನವ್ವ ಹಾಗೂ ಬಸಪ್ಪ ಬ್ಯಾಡಗಿ ದಂಪತಿಗೆ ನಾಲ್ವರು ಹೆಣ್ಣು ಮಕ್ಕಳು. ಆದರೆ ತಮ್ಮನ್ನು ನೋಡಿ​ಕೊ​ಳ್ಳಲು ಮಗ​ನೊಬ್ಬ ಇರಲಿ ಎಂದು ಸ್ವಂತ ಮಗಳ ಮಗ (ಮೊಮ್ಮಗ)ನನ್ನೇ ದತ್ತು ​ಪ​ಡೆ​ದಿದ್ದು, ಆತ​ನಿಗೆ ಆಸ್ತಿ​ಯನ್ನೂ ಬರೆ​ದು​ಕೊ​ಟ್ಟಿ​ದ್ದ​ರು. ಆದರೆ ಕೊನೇ​ಗಾ​ಲ​ದಲ್ಲಿ ಆತ ಇವರ ನೋವಿಗೆ ಸ್ಪಂದಿ​ಸದ ಕಾರಣ ಆಸ್ತಿ ಮರ​ಳಿ​ಪ​ಡೆ​ಯಲು ಕಾನೂನು ಹೋರಾಟ ಆರಂಭಿ​ಸಿ​ದ್ದ​ರು. ಈ ಮಧ್ಯೆ, ಬಸಪ್ಪ ಅವರು ಕಾಲವಾಗಿ ರತ್ನವ್ವ ಬ್ಯಾಡಗಿ(70) ಒಂಟಿಯಾಗಿ ದಿನ ಸಾಗಿಸುತ್ತಿದ್ದರು. ಇಂಥ ಸಂದರ್ಭದಲ್ಲಿ ಸವಣೂರು ಉಪವಿಭಾಗಾಧಿಕಾರಿಗಳು ಪ್ರಕ​ರ​ಣ​ವನ್ನು ಇತ್ಯ​ರ್ಥ​ಪ​ಡಿಸಿ ಆಸ್ತಿ ಮರಳಿ ಕೊಡಿ​ಸಿ​ದ್ದಾ​ರೆ.

ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನ ಮುಂದಕ್ಕೆ..ಹೊಸ ದಿನಾಂಕ ಯಾವಾಗ?

2ನೇ ಕೇಸ್‌: 

ತಾಲೂಕಿನ ನಿಸ್ಸೀಮ ಆಲದಕಟ್ಟಿಯ ಪಕ್ಕೀರವ್ವ ಪಕ್ಕೀರಪ್ಪ ಹನಕನಹಳ್ಳಿಗೆ 8 ಗಂಡು ಮಕ್ಕಳು. ಇವರ 17 ಎಕರೆ ಪಿತ್ರಾರ್ಜಿತ ಆಸ್ತಿಯನ್ನು ಸಮನಾಗಿ ಹಂಚಿದ್ದರು. ಪಕ್ಕೀರವ್ವ ಅವರ ಮನೆಯನ್ನು 5ನೇ ಪುತ್ರ ಭಕ್ಷೀಸ ಪತ್ರ ಮಾಡಿಕೊಂಡಿದ್ದ. ಆದರೆ ಆ ಪುತ್ರ ಸರಿ​ಯಾಗಿ ತಮ್ಮ​ನ್ನು ನೋಡಿ​ಕೊ​ಳ್ಳದ ಕಾರಣ ಪಕ್ಕೀರವ್ವ (90)ಆ ಮನೆ ಮರಳಿ ಪಡೆಯಲು ಸವಣೂರು ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣದ ವಿಚಾರಣೆ ನಡೆದು ಈಗ ಮನೆ ಪಕೀ​ರಮ್ಮ ಪಾಲಾ​ಗಿ​ದೆ. ಈ ಎರಡೂ ಪ್ರಕ​ರ​ಣ​ಗ​ಳು ಹಿರಿ​ಯ ನಾಗರಿಕರ ರಕ್ಷಣಾ ಕಾಯ್ದೆ-2007ರ ಅನ್ವಯ ದಾಖ​ಲಾ​ಗಿ​ದ್ದ​ವು.
 

Follow Us:
Download App:
  • android
  • ios