Asianet Suvarna News Asianet Suvarna News

ಕುಖ್ಯಾತ ಗೂಬೆ ಗ್ಯಾಂಗ್​- ಹಾಲಿ ಸಚಿವರಿಗೂ ಇದ್ಯಾ ಲಿಂಕ್​..?

ಗೂಬೆಯನ್ನೇ ಬಂಡವಾಳ ಮಾಡಿಕೊಂಡು ರಾಜಕಾರಣಿಗಳು ಹಾಗೂ ಶ್ರೀಮಂತರನ್ನು  ವಂಚಿಸಿ ಹಣ ದೋಚುತ್ತಿದ್ದ ಕುಖ್ಯಾತ ವಂಚಕರ ತಂಡವನ್ನ  ಸುವರ್ಣ ನ್ಯೂಸ್​​​ ಕವರ್ ಸ್ಟೋರಿ ತಂಡ ಬಯಲಿಗೆಳೆದಿದೆ. ಆದ್ರೆ ಈ ಪ್ರಕರಣದಲ್ಲಿ ಹಾಲಿ ಸಚಿವರೊಬ್ಬರ ಹೆಸರು ಕೇಳಿಬಂದಿದೆ.

Owl trafficking racket busted in Tumakur District
Author
Bengaluru, First Published Dec 8, 2018, 10:17 PM IST

ತುಮಕೂರು, [ಡಿ.08]: ಜನರು ಅಪಶಕುನ ಎಂದು ನಂಬುವ ಗೂಬೆಯನ್ನೇ ಬಂಡವಾಳ ಮಾಡಿಕೊಂಡು ರಾಜಕಾರಣಿಗಳು ಹಾಗೂ ಶ್ರೀಮಂತರನ್ನು  ವಂಚಿಸಿ ಹಣ ದೋಚುತ್ತಿದ್ದ ಕುಖ್ಯಾತ ವಂಚಕರ ತಂಡವನ್ನ  ಸುವರ್ಣ ನ್ಯೂಸ್​​​ ಕವರ್ ಸ್ಟೋರಿ ತಂಡ ಬಯಲಿಗೆಳೆದಿದೆ. 

ಐದು  ಬೆರಳುಳ್ಳ  ವಿಶೇಷ ಗೂಬೆಯನ್ನ  ಎರಡು  ಲಕ್ಷ  ರೂಪಾಯಿಗೆ ಮಾರುತಿದ್ದ ಖದೀಮರನ್ನ ಕೊರಟಗೆರೆಯ ಕಾಶಾಪುರದ ಬಳಿ ತಮ್ಮ ತಂಡ ರೆಡ್​ ಹ್ಯಾಂಡ್​ ಆಗಿ  ಸೆರೆಹಿಡಿದಿದೆ.

ಇನ್ನು  ಗೂಬೆ ಗ್ಯಾಂಗ್  ತನಿಖೆ ವೇಳೆ  ರಾಜ್ಯದ ಕೃಷಿ ಸಚಿವ ಶಿವಶಂಕರ್​ ರೆಡ್ಡಿ ಅವರು ಸಹ ಗೂಬೆಯನ್ನ ಖರೀದಿಸಿಯೇ  ಗೆದ್ದಿದ್ದು  ಎಂದು  ಬಂಧಿತ  ತಿಮ್ಮ ಅಲಿಯಾಸ್ ಆನಂದ್, ದೀಪು  ಮತ್ತು ಜಯಕುಮಾರ್ ಹೇಳಿಕೊಂಡಿದ್ದು, ಗೂಬೆ ಗ್ಯಾಂಗ್​ ಗೂ ಹಾಲಿ ಸಚಿವರಿಗೂ ಲಿಂಕ್ ಇದ್ಯಾ​ ಎನ್ನುವ ಅನುಮಾನಗಳು ಶುರುವಾಗಿವೆ.

ಈ ಪ್ರಕರಣದ ಕುರಿತು ಸುವರ್ಣನ್ಯೂಸ್​ ಸಚಿವ ಶಿವಶಂಕರ್​ ರೆಡ್ಡಿ ಅವರ ಬಳಿ ಹೋಗಿ ಕೇಳಿದ್ರೆ,  ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದು, ಪ್ರಶ್ನೆ ಕೇಳುತ್ತಿದ್ದಂತೆ ಅದು ಬೇಡ ಎಂದು ಗಾಬರಿಯಿಂದ ಕಾರು ಹತ್ತಿ ನಿರ್ಗಮಿಸಿದ್ದಾರೆ.

ಒಟ್ಟಿನಲ್ಲಿ ಈ ಗೂಬೆ ಗ್ಯಾಂಗ್ ಸದಸ್ಯನ ಹೇಳಿಕೆ ಈಗ ಹಾಲಿ ಸಚಿವರ ಕುತ್ತಿಗೆಗೆ ಬಂದಿದ್ದು, ಮುಂದಿನ ದಿನಗಳಲ್ಲಿ ಈ ಪ್ರಕರಣ ಯಾವ ರೀತಿ ಪಡೆದುಕೊಳ್ಳುತ್ತೆ ಎನ್ನುವುದನ್ನ ಕಾದುನೋಡಬೇಕಿದೆ.

Follow Us:
Download App:
  • android
  • ios