Asianet Suvarna News Asianet Suvarna News

ಉಡುಪಿ: ಕೃಷ್ಣಮಠದಲ್ಲಿ ಭಕ್ತರಿಗೆ ದೇವರ ದರ್ಶನ ಸದ್ಯಕ್ಕಿಲ್ಲ

ದೇಶದಲ್ಲಿ ಕೊರೋನಾ ಸೋಂಕಿನ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಉಡುಪಿ ಕೃಷ್ಣಮಠದಲ್ಲಿ ಇನ್ನೂ ಕೆಲವು ದಿನ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ನೀಡದಿರಲು ನಿರ್ಧರಿಸಲಾಗಿದೆ.

No entry for devotees to Udupi krishna mutt soon
Author
Bangalore, First Published Jul 3, 2020, 8:44 AM IST

ಉಡುಪಿ(ಜು.03): ದೇಶದಲ್ಲಿ ಕೊರೋನಾ ಸೋಂಕಿನ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಉಡುಪಿ ಕೃಷ್ಣಮಠದಲ್ಲಿ ಇನ್ನೂ ಕೆಲವು ದಿನ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ನೀಡದಿರಲು ನಿರ್ಧರಿಸಲಾಗಿದೆ.

ಕೃಷ್ಣಮಠದ ಪರಂಪರೆಯನ್ನು ಉಳಿಸಿಕೊಳ್ಳಬೇಕಾಗಿದೆ. ದೇಶದಲ್ಲಿ ಕೊರೋನಾ ಪರಿಸ್ಥಿತಿಯನ್ನು ಅವಲೋಕಿಸುತಿದ್ದೇವೆ, ದೇಶಾ​ದ್ಯಂತ ಅನ್‌ಲಾಕ್‌ ಆದ ಮೇಲೆ ಕೃಷ್ಣಮಠದಲ್ಲಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು. ಅಲ್ಲಿವರೆಗೆ ಭಕ್ತರು ತಂತಮ್ಮ ಮನೆಗಳಲ್ಲಿಯೇ ಪ್ರಾರ್ಥನೆ ಸಲ್ಲಿಸಬೇಕು. ಮಠದಲ್ಲಿಯೂ ಋುತ್ವಿಜರು ಕೊರೋನಾ ನಿವಾರಣೆಗೆ ನಿತ್ಯ ಪ್ರಾರ್ಥನೆ ಸಲ್ಲಿಸುತಿದ್ದಾರೆ ಎಂದು ಪರ್ಯಾಯ ಅದಮಾರು ಮಠದ ಶ್ರೀ ಈಶ​ಪ್ರಿಯ ತೀರ್ಥ ಸ್ವಾಮೀಜಿ ಹೇಳಿ​ದರು.

ಗಲ್ಫ್‌ ಕನ್ನಡಿಗರಿಗೆ ಸಂಕಷ್ಟ: ಕೊರೋನಾ ನೆಗೆಟಿವ್ ಆದ್ರೆ ಮಾತ್ರ ರಾಜ್ಯಕ್ಕೆ ಪ್ರವೇಶ

ಎಲ್ಲ ರೋಗಗಳಿಗೆ ರಾಗ, ಮೋಹ ಇತ್ಯಾದಿ ಮನಸ್ಸಿನ ದೋಷಗಳೇ ಕಾರಣ ಎಂದು ಆಯುರ್ವೇದದಲ್ಲಿ ಹೇಳಲಾಗಿದೆ. ಮನಸ್ಸನ್ನು ಚೆನ್ನಾಗಿಟ್ಟುಕೊಂಡರೆ ಎಂತಹ ರೋಗವನ್ನಾದರೂ ಜಯಿಸಬಹುದು, ಒಳ್ಳೆಯ ಚಿಂತನೆಗಳನ್ನು ಬೆಳೆಸಿಕೊಂಡರೆ ರೋಗ ನಿರೋಧಕ ಶಕ್ತಿ ವೃದ್ಧಿಯಾ​ಗು​ತ್ತದೆ. ಆದ್ದರಿಂದ ಎಲ್ಲರೂ ಮನಸ್ಸನ್ನು ಚೆನ್ನಾಗಿಟ್ಟುಕೊಳ್ಳೋಣ ಎಂದು ಶ್ರೀಗ​ಳು ಕರೆ ನೀಡಿದ್ದಾರೆ.

ದೆಹಲಿಯಲ್ಲಿ ದೇಶದ ಮೊದಲ ಪ್ಲಾಸ್ಮಾ ಬ್ಯಾಂಕ್ ಕಾರ್ಯಾರಂಭ..! ಹೀಗಿದೆ ರೂಲ್ಸ್

ಅಲ್ಲದೇ ನಮ್ಮ ದೇಶದ ಔಷಧಿ ಪದ್ಧತಿ ಕೊರೋನಾಕ್ಕೆ ಫಲಕಾರಿ ಎಂದು ಕಂಡುಬರುತ್ತಿದೆ. ಆದ್ದರಿಂದ ಈ ಪದ್ಧತಿಯನ್ನು ಬಳಸುವುದಕ್ಕೆ ಮತ್ತು ಬೆಳೆಸುವುದಕ್ಕೆ ಇದು ಒಳ್ಳೆಯ ಕಾಲ ಎಂದು ಶ್ರೀಗಳು ಅಭಿ​ಪ್ರಾ​ಯ​ಪ​ಟ್ಟಿ​ದ್ದಾ​ರೆ.

Follow Us:
Download App:
  • android
  • ios