Asianet Suvarna News Asianet Suvarna News

ಕೊರೋನಾ: 45 ದಿನ​ಗ​ಳಿಂದ ಈ ಜಿಲ್ಲೆಯಲ್ಲಿ ಒಂದೂ ಸಾವಿ​ಲ್ಲ..!

21 ಸೋಂಕಿ​ತ​ರಿಗೆ ಮಾತ್ರ ಚಿಕಿ​ತ್ಸೆ| ನಿತ್ಯ 1500 ಮಾದ​ರಿ​ಗಳ ಸಂಗ್ರ​ಹ| ಗದಗ ಜಿಲ್ಲೆಯಾದ್ಯಂತ ಕೋವಿಡ್‌ ನಿಯಂತ್ರಣಕ್ಕೆ ನಡೆಸಿದ ಹೋರಾಟಕ್ಕೆ ಫಲ| ಚಳಿ​ಗಾಲ​ದಲ್ಲಿ ಸೋಂಕು ಹೆಚ್ಚಾ​ಗುವ ಸಾಧ್ಯತೆ ಇದ್ದು ಸಾರ್ವ​ಜ​ನಿ​ಕರು ಎಚ್ಚರಿಕೆ ವಹಿ​ಸಬೇಕು| 

No Corona Patients Dead Last 45 Days in Gadag District grg
Author
Bengaluru, First Published Dec 3, 2020, 10:56 AM IST

ಶಿವಕುಮಾರ ಕುಷ್ಟಗಿ

ಗದಗ(ಡಿ.03):  ಇಡೀ ವಿಶ್ವ​ವನ್ನೆ ತಲ್ಲ​ಣ​ಗೊ​ಳಿ​ಸಿ​ರುವ ಕೊರೋನಾವನ್ನು ನಿಯಂತ್ರಿಸುವಲ್ಲಿ ಗದ​ಗ ಜಿಲ್ಲೆ ರಾಜ್ಯಕ್ಕೆ ಮಾದ​ರಿ​ಯಾ​ಗಿದ್ದು ಕಳೆದ 45 ದಿನ​ಗ​ಳಿಂದ ಜಿಲ್ಲೆ​ಯಲ್ಲಿ ಸೋಂಕಿ​ನಿಂದ ಒಬ್ಬರೂ ಅಸುನೀಗಿಲ್ಲ! ಜಿಲ್ಲೆ​ಯಲ್ಲಿ ಕೊರೋನಾ ಸೋಂಕು ಇಳಿ​ಮು​ಖ​ವಾ​ಗು​ತ್ತಿ​ದ್ದರೂ ಆರೋಗ್ಯ ಇಲಾಖೆ ಪರೀ​ಕ್ಷೆ​ ಸಂಖ್ಯೆ ಹೆಚ್ಚಿ​ಸಿದೆ. ನಿತ್ಯ 1500ಕ್ಕೂ ಅಧಿಕ ಜನ​ರನ್ನು ಕೊರೋನಾ ಪರೀ​ಕ್ಷೆಗೆ ಒಳ​ಪ​ಡಿ​ಸು​ತ್ತಿದ್ದು ಶೇ. 99.90ರಷ್ಟು ವರ​ದಿ​ಗಳು ನೆಗೆಟಿವ್‌ ಬರು​ತ್ತಿದ್ದು ಜನತೆ ನಿರಾ​ಳ​ರಾ​ಗಿ​ದ್ದಾರೆ.

ಕೋವಿಡ್‌ ಕೇಂದ್ರ ಖಾಲಿ:

ಜಿಲ್ಲೆ​ಯಲ್ಲಿ ಒಟ್ಟು 21 ಕೊರೋನಾ ಸಕ್ರಿಯ ಪ್ರಕ​ರ​ಣಗಳಿದ್ದು, ಕೋವಿಡ್‌ ಆಸ್ಪ​ತ್ರೆ​ಯಲ್ಲಿ 16 ಜನರು, ಉಳಿ​ದ​ವರು ಮನೆ​ಯ​ಲ್ಲಿಯೇ ಚಿಕಿತ್ಸೆ ಪಡೆ​ಯು​ತ್ತಿ​ದ್ದಾರೆ. ಏ. 6ರಂದು ಜಿಲ್ಲೆಯಲ್ಲಿ ಮೊದಲ ಸೋಂಕಿನ ಪ್ರಕರಣ ವರದಿಯಾಗಿ ಆ ವೃದ್ಧೆ ಮರಣ ಹೊಂದಿದ ಆನಂತರ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಭಾರೀ ಏರಿಕೆಯಾಯಿತು. ಜಿಲ್ಲೆಯ 7 ತಾಲೂಕು ಕೇಂದ್ರಗಳಲ್ಲಿ ಸ್ಥಾಪಿಸಿದ್ದ ಕೋವಿಡ್‌ ಕೇಂದ್ರ​ಗಳು ಭರ್ತಿ​ಯಾ​ಗಿ​ದ್ದವು. ಇದೀಗ ಎಲ್ಲವೂ ಖಾಲಿ​ಯಾ​ಗಿದೆ.

ಗಣ​ನೀಯ ಇಳಿ​ಕೆ:

ಕೇಂದ್ರ ಸರ್ಕಾರ ದೀಪಾವಳಿ ಆನಂತರ ಸೋಂಕು ಹೆಚ್ಚಾಗಬಹುದು ಮತ್ತು 2ನೇ ಅಲೆ ಕಾಣಿಸಿಕೊಳ್ಳಬಹುದು ಎಂದು ಎಚ್ಚರಿಸಿತ್ತು. ಅಕ್ಕಪಕ್ಕದ ಜಿಲ್ಲೆಗಳಲ್ಲಿ ಅಲ್ಪ ಪ್ರಮಾಣದಲ್ಲಿ ಸೋಂಕು ಹೆಚ್ಚಳವಾಗುತ್ತಿದ್ದರೂ ಗದಗ ಜಿಲ್ಲೆಯಲ್ಲಿ ಮಾತ್ರ ಸೋಂಕು ದಿನ ಕಳೆದಂತೆ ಕಡಿಮೆಯಾಗುತ್ತಿದೆ. ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲ ಇಲಾಖೆಗಳು ಸಮ​ನ್ವ​ಯ​ತೆ​ಯಿಂದ ಕಾರ್ಯ​ನಿ​ರ್ವ​ಹಿಸುತ್ತಿವೆ.

ಗದಗ; ಅನುಮಾನಕ್ಕೆ ಮದ್ದಿಲ್ಲ... ಮಲಗಿದ್ದ ಗಾರ್ಡ್ ಹೆಣವಾಗಿದ್ದ

ಒಟ್ಟು 1.34 ಲಕ್ಷ ಮಾದರಿ ಸಂಗ್ರ​ಹ:

ದೇಶ​ದಲ್ಲಿ ಕೊರೋನಾ ಪ್ರಕ​ರಣ ಪತ್ತೆ​ಯಾ​ಗು​ತ್ತಿ​ದ್ದಂತೆ ಜಿಲ್ಲೆ​ಯಲ್ಲೂ ಸೋಂಕು ಪತ್ತೆ​ಯಾಗಿತ್ತು. ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 1,34,921 ಮಾದ​ರಿ​ಗಳನ್ನು ಸಂಗ್ರಹಿಸಿದ್ದು, 1,23,521 ವರ​ದಿ​ಗಳು ನೆಗೆ​ಟಿವ್‌ ಬಂದಿವೆ. ಅದ​ರಲ್ಲಿ 10,750 ಸೋಂಕಿ​ತರು ಪತ್ತೆ​ಯಾಗಿ 141 ಜನರು ಅಸು​ನೀ​ಗಿ​ದ್ದಾರೆ. ಈ ವರೆಗೆ ಒಟ್ಟು 10,565 ಆಸ್ಪ​ತ್ರೆ​ಗ​ಳಲ್ಲಿ ಚಿಕಿತ್ಸೆ ಪಡೆದು ಗುಣ​ಮು​ಖ​ರಾಗಿ ಬಿಡು​ಗ​ಡೆ​ಯಾ​ಗಿ​ದ್ದಾ​ರೆ.

ಜಿಲ್ಲೆ​ಯಲ್ಲಿ 45 ದಿನ​ಗ​ಳಿಂದ ಕೊರೋನಾಕ್ಕೆ ಯಾರೂ ಬಲಿ​ಯಾ​ಗದೆ ಇರು​ವುದು ನೆಮ್ಮದಿ ವಿಷಯ. ಸೋಂಕು ತಡೆ​ಯು​ವಲ್ಲಿ ಶ್ರಮಿ​ಸಿದ ಎಲ್ಲ ಕೊರೋನಾ ವಾರಿ​ಯ​ರ್ಸ್‌ಗ​ಳನ್ನು ಅಭಿ​ನಂದಿ​ಸು​ತ್ತೇನೆ. ಚಳಿ​ಗಾಲ​ದಲ್ಲಿ ಸೋಂಕು ಹೆಚ್ಚಾ​ಗುವ ಸಾಧ್ಯತೆ ಇದ್ದು ಸಾರ್ವ​ಜ​ನಿ​ಕರು ಎಚ್ಚರಿಕೆ ವಹಿ​ಸಬೇಕು. ಮಾಸ್ಕ್‌ ಧರಿಸಿ ಸಾಮಾ​ಜಿಕ ಅಂತರ ಪಾಲಿ​ಸ​ಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ತಿಳಿಸಿದ್ದಾರೆ. 

ಜಿಲ್ಲೆಯಾದ್ಯಂತ ಕೋವಿಡ್‌ ನಿಯಂತ್ರಣಕ್ಕೆ ನಡೆಸಿದ ಹೋರಾಟಕ್ಕೆ ಫಲ ದೊರೆತಿದೆ. ಈಗಾಗಲೇ 78,609ಕ್ಕೂ ಹೆಚ್ಚು ಜನರಿಗೆ ಕೋವಿಡ್‌ ಟೆಸ್ಟ್‌ ಮಾಡಿದ್ದು, ಸದ್ಯ ಪ್ರತಿದಿನ 1500ಕ್ಕೂ ಅಧಿಕ ಜನರನ್ನು ಪರೀ​ಕ್ಷೆಗೆ ಒಳ​ಪ​ಡಿ​ಸ​ಲಾ​ಗು​ತ್ತಿದೆ. ಕೋವಿಡ್‌ ಕೇರ್‌ ಸೆಂಟರ್‌ಗಳಲ್ಲಿ ಯಾವುದೇ ಕೋವಿಡ್‌ ರೋಗಿ​ಗ​ಳಿಲ್ಲ. ಈ ಮೊದಲು 200ಕ್ಕೂ ಅಧಿಕ ಜನರು ಆಸ್ಪ​ತ್ರೆಗೆ ದಾಖ​ಲಾ​ಗಿದ್ದು ಸದ್ಯ 16 ಜನ ಮಾತ್ರ ಕೋವಿಡ್‌ ಆಸ್ಪ​ತ್ರೆ​ಯಲ್ಲಿ ಚಿಕಿತ್ಸೆ ಪಡೆ​ಯು​ತ್ತಿ​ದ್ದಾರೆ ಎಂದು ಗದಗ ಜಿಮ್ಸ್‌ ನಿರ್ದೇಶಕ ಡಾ. ಪಿ.ಎಸ್‌. ಭೂಸರಡ್ಡಿ ಹೇಳಿದ್ದಾರೆ. 
 

Follow Us:
Download App:
  • android
  • ios