16 ಜನರ ಎನ್‌ಡಿಆರ್‌ಎಫ್‌ ತಂಡ ಕಾರ್ಯಾಚರಣೆ| ಕುರಿಗಾಹಿಯನ್ನ ಸುರಕ್ಷಿತವಾಗಿ ಕರೆತಂದ ಎನ್‌ಡಿಆರ್‌ಎಫ್‌ ತಂಡ| ಕುರಿಗಳನ್ನ ಅಲ್ಲಿಯೇ ಬಿಡಲಾಗಿ​ದ್ದು, ಪ್ರವಾಹ ತಗ್ಗಿ​ದ ನಂತರ ಕರೆತರುವ ವ್ಯವಸ್ಥೆ|

ಯಾ​ದಗಿರಿ(ಆ.10): ಕುರಿ ಮೇಯಿಸಲೆಂದು ಯಾದಗಿರಿ ತಾಲೂಕಿನ ಎಡದನಮಾಳ ತಪ್ಪಲು ಪ್ರದೇಶಕ್ಕೆ ತೆರಳಿದ್ದಾಗ ಕೃಷ್ಣಾ ಪ್ರವಾಹದಿಂದಾಗಿ 7 ​ದಿನಗಳಿಂ​ದ ನಡುಗಡ್ಡೆಯಲ್ಲೇ ಸಿಲುಕಿದ್ದ ಐ.ಬಿ.ತಾಂಡಾದ ನಿವಾಸಿ, ಕುರಿಗಾಹಿ ಕುಮಾರ್‌ (ಟೋಪಣ್ಣ) ಅವರನ್ನು ಎನ್‌ಡಿಆರ್‌ಎಫ್‌ ತಂಡ ರಕ್ಷಣೆ ಮಾಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಶನಿವಾರ ರಾತ್ರಿ ಹೈದರಾಬಾದಿನಿಂದ ಆಗಮಿಸಿದ್ದ 16 ಜನರ ಎನ್‌ಡಿಆರ್‌ಎಫ್‌ ತಂಡ ಕಾರ್ಯಾಚರಣೆ ನಡೆಸಿ ಭಾನುವಾರ ಬೆಳಗ್ಗೆ ಸುರಕ್ಷಿತವಾಗಿ ಕರೆತಂದಿದೆ. 

ಯಾದಗಿರಿ: ಭಾರೀ ಪ್ರವಾಹ, 5 ದಿನದಿಂದ ನಡುಗಡ್ಡೆಯಲ್ಲಿ ಸಿಲುಕಿದ ಕುರಿಗಾಹಿ..!

ಸುಮಾರು 3 ಗಂಟೆಗಳಿಗೂ ಹೆಚ್ಚು ಕಾಲ ನಡೆದ ರಕ್ಷಣಾ ಕಾರ್ಯಾಚರಣೆಯಲ್ಲಿ ಕುರಿಗಾಹಿ ಜೊತೆಗೆ ಆತನ ಸಾಕುನಾಯಿಯನ್ನು ಸುರಕ್ಷಿತವಾಗಿ ಬೋಟ್‌ ಮೂಲಕ ಕರೆತರಲಾಗಿದೆ. ಸ​​ದ್ಯ ಕುರಿಗಳನ್ನ ಅಲ್ಲಿಯೇ ಬಿಡಲಾಗಿ​ದ್ದು, ಪ್ರವಾಹ ತಗ್ಗಿ​ದ ನಂತರ ಕರೆತರುವ ವ್ಯವಸ್ಥೆ ಮಾಡಲಾಗುವು​ದು ಎಂ​ದು ಅ​ಧಿಕಾರಿಗಳು ತಿಳಿಸಿ​ದ್ದಾರೆ.