Asianet Suvarna News Asianet Suvarna News

ದಸರಾ ಗಜಪಯಣಕ್ಕೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಚಾಲನೆ

ಮೈಸೂರಿನಲ್ಲಿ ಗಜಪಯಣ ಆರಂಭವಾಗಿದ್ದು ನೂತನ ಡಿಸಿ ರೋಹಿಣಿ ಸಿಂಧೂರಿ ಚಾಲನೆ ನೀಡಿದ್ದಾರೆ

Mysuru  Dasara 2020 Gajapayana Begins snr
Author
Bengaluru, First Published Oct 2, 2020, 7:53 AM IST

ಬಿ.ಶೇಖರ್‌ ಗೋಪಿನಾಥಂ 

ಮೈಸೂರು (ಅ.02):  ಕೊರೋನಾ ಆತಂಕ ನಡುವೆಯೂ ಮೈಸೂರು ದಸರಾ ಮಹೋತ್ಸವ ಆಚರಣೆಗೆ ಸಿದ್ಧತೆಗಳು ನಡೆಯುತ್ತಿದೆ. ದಸರಾ ಮೊದಲ ಅತಿಥಿಗಳಾದ ಗಜಪಡೆಯು ಗುರುವಾರ ಕಾಡಿನಿಂದ ನಾಡಿಗೆ ಆಗಮಿಸಿದ್ದು, ಮೈಸೂರಿನ ಅಶೋಕಪುರಂನಲ್ಲಿರುವ ಅರಣ್ಯ ಭವನ ಆವರಣದಲ್ಲಿ ಬಿಡಾರ ಹೂಡಿವೆ.

ಈ ಬಾರಿಯ ನಾಡಹಬ್ಬ ದಸರಾ ಮಹೋತ್ಸವದಲ್ಲಿ ಭಾಗವಹಿಸಲು 5 ಆನೆಗಳು ಮಾತ್ರ ಆಗಮಿಸಿವೆ. ಹುಣಸೂರು ತಾಲೂಕು ವೀರನಹೊಸಹಳ್ಳಿಯಲ್ಲಿಯ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಗೇಟ್‌ ಬಳಿ ಗುರುವಾರ ಬೆಳಗ್ಗೆ ದಸರಾ ಗಜಪಯಣಕ್ಕೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಚಾಲನೆ ನೀಡಿದರು.

'ದಸರೆಗೆ ಹೋಗಬೇಕಂದ್ರೆ 5 ದಿನ ಮುಂಚೆ ಕೋವಿಡ್ ಟೆಸ್ಟ್ ಅಗತ್ಯ' ...

ಇದೇ ಮೊದಲ ಬಾರಿಗೆ 750 ಕೆ.ಜಿ. ಚಿನ್ನದ ಅಂಬಾರಿ ಹೊರಲಿರುವ ಅಭಿಮನ್ಯು ಆನೆಯೊಂದಿಗೆ ವಿಕ್ರಮ, ಗೋಪಿ, ವಿಜಯ ಮತ್ತು ಕಾವೇರಿ ಆನೆಗಳನ್ನು ಲಾರಿಗಳ ಮೂಲಕ ಮೈಸೂರಿಗೆ ಕರೆ ತರಲಾಗಿದೆ. 2020ರ ದಸರಾಗೆ ಕೋವಿಡ್‌-19 ಮಹಾಮಾರಿ ಅಡ್ಡಿಯಾಗಿರುವ ಕಾರಣ ಆನೆಗಳ ಸಂಖ್ಯೆಯನ್ನು 5ಕ್ಕೆ ಇಳಿಸಲಾಗಿದೆ. ಅರ್ಜುನ ಆನೆಗೆ 60 ವರ್ಷ ಆಗಿರುವ ಹಿನ್ನೆಲೆಯಲ್ಲಿ ಅಂಬಾರಿ ಹೊರುವ ಜವಾಬ್ದಾರಿಯನ್ನು ಈ ಬಾರಿ ಅಭಿಮನ್ಯು ಆನೆ ನಿರ್ವಹಿಸಲಿದೆ.

ಇಂದು ಆನೆಗಳಿಗೆ ಪೂಜೆ: ಮೈಸೂರಿನ ಅಶೋಕಪುರಂನಲ್ಲಿರುವ ಅರಣ್ಯ ಭವನದಲ್ಲಿ ಅ.2ರ ಬೆಳಗ್ಗೆ 9 ರಿಂದ 9.30ಕ್ಕೆ 5 ಆನೆಗಳಿಗೆ ಅರಣ್ಯ ಇಲಾಖೆ ವತಿಯಿಂದ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಲಾಗುತ್ತದೆ. ನಂತರ ಲಾರಿಯಲ್ಲಿ 5 ಆನೆಗಳನ್ನು ಅರಣ್ಯ ಭವನದಿಂದ ಅರಮನೆಗೆ ಕರೆದುಕೊಂಡು ಹೋಗಲಾಗುವುದು. ನಂತರ ಮಧ್ಯಾಹ್ನ 12.18ಕ್ಕೆ ಮೈಸೂರು ಅರಮನೆ ಮಂಡಳಿಯಿಂದ ಗಜಪಡೆಗೆ ಸ್ವಾಗತ ಕಾರ್ಯಕ್ರಮವನ್ನು ಅರಮನೆ ಜಯಮಾರ್ತಾಂಡ ದ್ವಾರದಲ್ಲಿ ಆಯೋಜಿಸಿದೆ.

ದಸರಾ ಆನೆಗಳ ವಿವರ

ಆನೆ ವಯ​​ಸ್ಸು ​ತೂ​ಕ (ಕೇ.​ಜಿ​ಗ​ಳ​ಲ್ಲಿ​)

ಅಭಿ​ಮ​ನ್ಯು 54 5000-5290

ವಿಕ್ರ​ಮ 47 3820

ಗೋಪಿ 38 3710

ವಿಜ​ಯ 61 3250

ಕಾವೇ​ರಿ 42 3000-3220

Follow Us:
Download App:
  • android
  • ios