Asianet Suvarna News Asianet Suvarna News

ಬಿಜೆಪಿ ತೊರೆದು ಕಾಂಗ್ರೆಸ್‌ ಸೇರ್ಪಡೆ

ರಾಜ್ಯದಲ್ಲಿ ಮತ್ತೆ ಪಕ್ಷಾಂತರ ಪರ್ವ ಆರಂಭವಾಗಿದೆ. ಬಿಜೆಪಿ ಮುಖಂಡರು ಇದೀಗ ಕೈ ಪಾಳಯದತ್ತ ನಡೆದಿದ್ದಾರೆ. ಕಮಲ ತೊರೆದು ಕಾಂಗ್ರೆಸ್  ಸೇರಿದ್ದಾರೆ. 

More Than 100 BJP workers Join Congress in Kanakagiri snr
Author
Bengaluru, First Published Mar 9, 2021, 1:32 PM IST

ಕನಕಗಿರಿ (ಮಾ.09):  ತಾಲೂಕಿನ ಗುಡದೂರು ಗ್ರಾಮದಲ್ಲಿ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಶಿವರಾಜ ತಂಗಡಗಿ ಸಮ್ಮುಖದಲ್ಲಿ ನೂರಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಸೋಮವಾರ ಕಾಂಗ್ರೆಸ್‌ಗೆ ಸೇರ್ಪಡೆಯಾದರು.

ಡಿಸಿಸಿ ಅಧ್ಯಕ್ಷ ಶಿವರಾಜ ತಂಗಡಗಿ ಮಾತನಾಡಿ, ಬಿಜೆಪಿಯ ಜನವಿರೋಧಿ ನೀತಿಯನ್ನು ಖಂಡಿಸಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಭಿವೃದ್ಧಿ ಕಾರ್ಯಗಳನ್ನು ಹಾಗೂ ಸಾಮಾಜಿಕ ನ್ಯಾಯವನ್ನು ಮೆಚ್ಚಿ ಗುಡದೂರು ಗ್ರಾಮದ ನೂರಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್‌ ಸೇರಿದ್ದು, ಕನಕಗಿರಿ ಕ್ಷೇತ್ರದ ಹಲವು ಗ್ರಾಮ ಹಾಗೂ ನಗರಗಳಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಲಿದ್ದಾರೆ.

ಮಮತಾಗೆ ಮತ್ತೆ ಶಾಕ್‌: ಐವರು ಟಿಎಂಸಿ ಶಾಸಕರು ಬಿಜೆಪಿ ಸೇರ್ಪಡೆ!

 ದೇಶ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್‌ ಅಲೆ ಎದ್ದಿದೆ. ಕಾಂಗ್ರೆಸ್‌ ಸರ್ಕಾರದಲ್ಲಿ ಗ್ರಾಮ ಗ್ರಾಮಕ್ಕೂ, ವ್ಯಕ್ತಿಯಿಂದ ವ್ಯಕ್ತಿಗೆ ಸೌಲಭ್ಯ ತಲುಪಿವೆ. ಈ ನಿಟ್ಟಿನಲ್ಲಿ ಮುಂಬರುವ ತಾಪಂ, ಜಿಪಂ, ಪಪಂ ಹಾಗೂ ಪುರಸಭೆ ಚುನಾವಣೆಯೊಳಗಾಗಿ ಬಿಜೆಪಿಯೊಳಗಿರುವ ಪ್ರಭಾವಿ ನಾಯಕರು ಕಾಂಗ್ರೆಸ್‌ ಸೇರಲಿದ್ದಾರೆ ಎಂದು ತಿಳಿಸಿದರು.

ಬ್ಲಾಕ್‌ ಅಧ್ಯಕ್ಷ ರೆಡ್ಡಿ ಶ್ರೀನಿವಾಸ, ಪ್ರಮುಖರಾದ ರಮೇಶ ನಾಯಕ, ಸಿದ್ದಪ್ಪ ನೀರಲೂಟಿ, ರಾಮನಗೌಡ ಬುನ್ನಟ್ಟಿ, ಜಡಿಯಪ್ಪ ಮುಕ್ಕುಂದಿ, ಬಸವಂತಗೌಡ ಪಾಟೀಲ್‌, ನಾಗಪ್ಪ ಹುಗ್ಗಿ, ಭೀಮನಗೌಡ ಹೊಸಕೇರಾ, ಹಿರೇ ಹನುಮಂತ ಗುಡುದೂರು, ಬಾರೇಶ ಹಿರೇಖೇಡ ಹಾಗೂ ಪಕ್ಷದ ಕಾರ್ಯಕರ್ತರು ಇದ್ದರು.

Follow Us:
Download App:
  • android
  • ios