ಯಾರ ಅನುಮತಿ ಪಡೆದು ಊರತುಂಬ ದೀಪಾಲಂಕಾರ ಹಾಕಿದ್ದೀರಾ? ಆರೋಗ್ಯ ಇಲಾಖೆಯ ಅನುಮತಿ ಪಡೆದಿದ್ದೀರಾ? ಏಕೆ ಈ ರೀತಿ ಹಠಕ್ಕೆ ಬಿದ್ದಿದ್ದೀರಾ? ಕೊರೋನಾ ಮಹಾಸ್ಫೋಟವಾದರೆ ಯಾರು ಹೊಣೆ? ಎಂದು ವಾಗ್ದಾಳಿ ನಡೆಸಿದ ವಿಶ್ವನಾಥ್‌| ಯಾವುದೇ ಕಾರಣಕ್ಕೂ ದಸರಾಗೆ ಹೆಚ್ಚಿನ ಜನಸಂದಣಿ ಬೇಡ. ಏನಾದರೂ ಆದಲ್ಲಿ ದಸರಾಗೂ ಕಳಂಕ ಬರಲಿದೆ, ಯಾವುದೇ ಕಾರಣಕ್ಕೂ ಈ ರೀತಿ ಮಾಡಬೇಡಿ ಎಂದು ಸರ್ಕಾರಕ್ಕೆ ಸಲಹೆ ನೀಡಿದ ವಿಶ್ವನಾಥ್‌|  

ಮೈಸೂರು(ಅ.08): ಮೈಸೂರು ದಸರಾ ಆಚರಿಸಿ ಕೊರೋನಾ ಹೆಚ್ಚಾದರೆ ಜನರೇ ಸರ್ಕಾರದ ವಿರುದ್ಧ ಪ್ರಕರಣ ದಾಖಲಿಸುತ್ತಾರೆ ಎಂದು ವಿಧಾನ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ಎಚ್ಚರಿಸಿದ್ದಾರೆ. 

Add Asianetnews Kannada as a Preferred SourcegooglePreferred

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರ ಅನುಮತಿ ಪಡೆದು ಊರತುಂಬ ಲೈಟ್‌ (ದೀಪಾಲಂಕಾರ) ಹಾಕಿದ್ದೀರಾ? ಆರೋಗ್ಯ ಇಲಾಖೆಯ ಅನುಮತಿ ಪಡೆದಿದ್ದೀರಾ? ಏಕೆ ಈ ರೀತಿ ಹಠಕ್ಕೆ ಬಿದ್ದಿದ್ದೀರಾ? ಕೊರೋನಾ ಮಹಾಸ್ಫೋಟವಾದರೆ ಯಾರು ಹೊಣೆ? ಎಂದು ವಾಗ್ದಾಳಿ ನಡೆಸಿದರು. ಯಾವುದೇ ಕಾರಣಕ್ಕೂ ದಸರಾಗೆ ಹೆಚ್ಚಿನ ಜನಸಂದಣಿ ಬೇಡ. ಏನಾದರೂ ಆದಲ್ಲಿ ದಸರಾಗೂ ಕಳಂಕ ಬರಲಿದೆ. ಯಾವುದೇ ಕಾರಣಕ್ಕೂ ಈ ರೀತಿ ಮಾಡಬೇಡಿ ಎಂದು ಸರ್ಕಾರಕ್ಕೆ ಸಲಹೆ ನೀಡಿದರು.

'ಬಂಬೂ' ಸವಾರಿ ಮಾಡಲು ಹೊರಟ್ಟಿದ್ದೀರಾ: ವಿಶ್ವನಾಥ್‌ ಆಕ್ರೋಶ

ಶಾಲೆಯ ಆರಂಭಕ್ಕೆ ಆತುರ ಬೇಡ:

ರಾಜ್ಯದಲ್ಲಿ ಶಾಲೆಗಳ ಆರಂಭಕ್ಕೆ ಆತುರ ಬೇಡ, ಈ ವಿಚಾರದಲ್ಲಿ ಅಧಿಕಾರಿಗಳು, ಜನಪ್ರನಿಧಿಗಳ ಸಲಹೆ ಮುಖ್ಯ ಅಲ್ಲ. ಪೋಷಕರ ಸಲಹೆ ಮುಖ್ಯ. ಅವರೊಂದಿಗೆ ಸುದೀರ್ಘವಾಗಿ ಚರ್ಚಿಸಿ, ನಂತರ ನಿರ್ಧರಿಸಿ ಎಂದರು.