ಶಾಸಕ ಸಂಗಮೇಶ್ ಪುತ್ರ ಬಸವನನ್ನ ಬಂಧಿಸಿದ ಭದ್ರಾವತಿ ಪೊಲೀಸರು| ಪ್ರೋ ಕಬ್ಬಡಿ ಪಂದ್ಯಾವಳಿಯಲ್ಲಿ ನಡೆದಿದ್ದ ಗಲಾಟೆ| ಸಂಗಮೇಶ್ವರ ಪುತ್ರರಾದ ಬಸವ ಮತ್ತು ಗಣೇಶ ವಿರುದ್ಧ ಎಫ್ಐಆರ್ ದಾಖಲು| ದೂರು ದಾಖಲಾದ ನಂತರ ನಾಪತ್ತೆಯಾಗಿದ್ದ ಸಂಗಮೇಶ್ವರ ಪುತ್ರರಾದ ಗಣೇಶ ಮತ್ತು ಬಸವ|
ಚಿತ್ರದುರ್ಗ(ಮಾ.06): ಪ್ರೋ ಕಬ್ಬಡಿ ಪಂದ್ಯಾವಳಿಯಲ್ಲಿ ಗಲಾಟೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಸಂಗಮೇಶ್ ಅವರ ಪುತ್ರ ಬಸವನನ್ನ ಭದ್ರಾವತಿ ಪೊಲೀಸರು ಇಂದು(ಶನಿವಾರ) ಬಂಧಿಸಿದ್ದಾರೆ. ಜಿಲ್ಲೆಯ ಚಳ್ಳಕೆರೆ ಬಳಿ ಬಸವನನ್ನ ಪೊಲೀಸರು ಬಂಧಿಸಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
"
ಫೆ 28 ರಂದು ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ನಡೆದ ಪ್ರೋ ಕಬ್ಬಡಿ ಪಂದ್ಯಾವಳಿಯಲ್ಲಿ ಗಲಾಟೆ ನಡೆದಿತ್ತು. ಈ ಸಂಬಂಧ ಶಾಸಕ ಸಂಗಮೇಶ್ವರ ಪುತ್ರರಾದ ಬಸವ ಮತ್ತು ಗಣೇಶ ವಿರುದ್ಧ ಎಫ್ಐಆರ್ ದಾಖಲಾಗಿತ್ತು.

ಸದನದಲ್ಲಿ ಶರ್ಟ್ ಹೈಡ್ರಾಮಾ ಮಾಡಿ, ಸ್ಪೀಕರ್ ಆಡಳಿತ ಪಕ್ಷದ ಕೈಗೊಂಬೆ ಅಂದ್ರು ಸಂಗಮೇಶ್!
ದೂರು ದಾಖಲಾದ ನಂತರ ಸಂಗಮೇಶ್ವರ ಪುತ್ರರಾದ ಗಣೇಶ ಮತ್ತು ಬಸವ ನಾಪತ್ತೆಯಾಗಿದ್ದರು.
