Asianet Suvarna News Asianet Suvarna News

ಸಂಸದ ಡಿ.ಕೆ.ಸುರೇಶ್ ವಿರುದ್ಧ ಆಕ್ರೋಶ : 'ಕಾಲ ಬಂದಾಗ ಉತ್ತರ ಕೊಡ್ತೀನಿ'

ಸಂಸದ ಡಿಕೆ ಸುರೇಶ್  ಸುರೇಶ್ ವಿರುದ್ಧ ವಾಗ್ದಾಳಿ ನಡೆಸಲಾಗಿದೆ.  ಸಮಯ ಬಂದಾಗ ಉತ್ತರ ಕೊಡುತ್ತೇನೆ ಎಂದು ಜೆಡಿಎಸ್ ಮುಖಂಡ ಹೇಳಿದ್ದಾರೆ. 

MLA Manjunath Slams Congress MP DK Shivakumar snr
Author
Bengaluru, First Published Nov 6, 2020, 2:23 PM IST

ರಾಮ​ನ​ಗ​ರ (ನ.06): ಬಿಡದಿ ಪುರಸಭೆ ಅಧ್ಯಕ್ಷ - ಉಪಾಧ್ಯಕ್ಷ ಚುನಾವಣೆಯಲ್ಲಿ ಜೆಡಿಎಸ್‌ ಕುದುರೆ ವ್ಯಾಪಾರ ಮಾಡಿದೆ ಎಂದು ಸಂಸದ ಡಿ.ಕೆ.ಸುರೇಶ್‌ ಮಾಡಿದ ಆರೋಪಕ್ಕೆ ಶಾಸಕ ಎ.ಮಂಜು​ನಾಥ್‌ ಪರೋ​ಕ್ಷ​ವಾಗಿ ವಾಗ್ದಾಳಿ ನಡೆ​ಸಿ​ದರು.

ಸುದ್ದಿಗಾರರೊಂದಿಗೆ ಮಾತ​ನಾ​ಡಿದ ಮಂಜು​ನಾಥ್‌, ಜೆಡಿಎಸ್‌ ಎಲ್ಲಯೂ ಕುದುರೆ ವ್ಯಾಪಾರ ಮಾಡಿಲ್ಲ. ಬದಲಾಗಿ ರಾಮನಗರ ತಾಪಂ ಹಾಗೂ ಎಪಿಎಂಸಿ ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್‌ ಹೇಗೆ ನಡೆದುಕೊಂಡಿದೆ ಎಂಬುದು ಗೊತ್ತಿದೆ. 

ಸಂಸದ ಡಿ.ಕೆ.​ಸು​ರೇಶ್‌ ವಿರುದ್ಧ ಹೆಚ್‌ಡಿಕೆ ಏಕ​ವ​ಚ​ನ​ದಲ್ಲಿ ವಾಗ್ದಾಳಿ ...

ಸಂಸದ ಸುರೇಶ್‌ ಅವರು ಕುದುರೆ ವ್ಯಾಪಾರಕ್ಕೆ ಸಂಬಂಧಿಸಿದಂತೆ ಮಾಡಿರುವ ಆರೋಪಕ್ಕೆ ಸದ್ಯಕ್ಕೆ ಏನೂ ಹೇಳುವುದಿಲ್ಲ. ಕಾಲ ಬಂದಾಗ ಉತ್ತರ ಕೊಡುತ್ತೇನೆ. ಈಗ ಏನಿದ್ದರೂ ಅಭಿವೃದ್ಧಿಯೇ ನಮ್ಮ ಮೂಲ ಮಂತ್ರ ಎಂದರು.

Follow Us:
Download App:
  • android
  • ios