Asianet Suvarna News Asianet Suvarna News

ತಮ್ಮ ಅನಾರೋಗ್ಯ ಸಮಸ್ಯೆ ಬಗ್ಗೆ ತಿಳಿಸಿದ ಅನಿತಾ ಕುಮಾರಸ್ವಾಮಿ : ವೈದ್ಯರ ಸೂಚನೆ ಇತ್ತೆಂದ ಶಾಸಕಿ

ತಮ್ಮ ಕ್ಷೇತ್ರಕ್ಕೆ ಅಷ್ಟು ಪ್ರಮಾಣದಲ್ಲಿ ಭೇಟಿ ನೀಡದ ಶಾಸಕಿ ಅನಿತಾ ಕುಮಾರಸ್ವಾಮಿ ಇದೀಗ ತಮ್ಮ ಅನಾರೋಗ್ಯ ಸಮಸ್ಯೆ ಬಗ್ಗೆ ಹೇಳಿಕೊಂಡಿದ್ದಾರೆ

MLA Anitha Kumaraswamy Visits Ramanagara snr
Author
Bengaluru, First Published Nov 19, 2020, 3:52 PM IST

ರಾಮ​ನ​ಗರ (ನ.19):  ಕೊರೋನಾ ಲಾಕ್‌ಡೌನ್‌ ನಂತರ ಕಳೆದ ಆರೇ​ಳು ತಿಂಗಳ ಕಾಲ ರಾಮನಗರ ಕ್ಷೇತ್ರದತ್ತ ಮುಖಮಾಡದ ಶಾಸಕಿ ಅನಿತಾ ಕುಮಾರಸ್ವಾಮಿ ಅವರು, ಬುಧವಾರ ಕ್ಷೇತ್ರಕ್ಕೆ ಆಗಮಿಸಿ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.

ಶಾಸಕರು ಆಗ​ಮಿ​ಸದ ಕಾರಣ ಕಚೇರಿಗಳಲ್ಲಿ ಅಧಿಕಾರಿಗಳ್ಳದೇ ದರ್ಬಾರ್‌ ನಡೆ​ದಿತ್ತು. ಕ್ಷೇತ್ರ​ದ​ಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳಾಗುತ್ತಿಲ್ಲ ಎಂದು ಮತದಾರರು ತಮ್ಮ ಆಕ್ರೋಶವನ್ನ ಹೊರಹಾಕಿದ್ದರು. ಮತ್ತೊಂದೆಡೆ ತಮ್ಮದೇ ಪಕ್ಷದ ಕಾರ್ಯಕರ್ತರ ಸಮಸ್ಯೆಗಳನ್ನು ಆಲಿಸುತ್ತಿಲ್ಲ ಎಂದು ಕಾರ್ಯಕರ್ತರಲ್ಲೇ ಅಸಮಾಧಾನವೂ ಉಂಟಾಗಿತ್ತು. ಇದೆಲ್ಲವನ್ನು ಪ್ರಶ್ನೆ ಮಾಡಿದರೆ ಅರೋಗ್ಯದ ಸಮಸ್ಯೆ ನೆಪ ನೀಡಿ ಶಾಸಕಿ ಅನಿತಾ ಕುಮಾ​ರ​ಸ್ವಾಮಿ ಜಾರಿ​ಕೊಂಡರು.

ಕ್ಷೇತ್ರಕ್ಕೆ ತಿಂಗಳುಗಟ್ಟಲೆ ಬರ​ಲಿಲ್ಲ ಎಂದು ನಾಗ​ರೀ​ಕರು ಆಕ್ರೋ​ಶ​ಗೊಂಡಿ​ದ್ದಾರೆ ಎಂದು ಸುದ್ದಿ​ಗಾ​ರರು ಗಮನ ಸೆಳೆ​ದಾಗ ಪ್ರತಿ​ಕ್ರಿ​ಯಿ​ಸಿದ ಅನಿತಾ, ತಮಗೆ ಸೈನಸ್‌ ಸಮಸ್ಯೆ ಇದ್ದಿ​ದ್ದ​ರಿಂದ ವೈದ್ಯರು ಮೂರು ತಿಂಗ​ಳು​ಗಳ ಕಾಲ ವಿಶ್ರಾಂತಿ ಪಡೆ​ಯು​ವಂತೆ ಸೂಚಿ​ಸಿ​ದ್ದ​ರಿಂದ ಕ್ಷೇತ್ರಕ್ಕೆ ಬರ​ಲಾ​ಗ​ಲಿಲ್ಲ. ಆದರೆ, ಕ್ಷೇತ್ರದ ಅವ​ಶ್ಯ​ಕ​ತೆ​ಗಳ ಬಗ್ಗೆ ತಾವು ಅಧಿ​ಕಾ​ರಿ​ಗ​ಳೊಂದಿಗೆ ಸಂಪ​ರ್ಕ​ದಲ್ಲಿ ಇದ್ದ​ದ್ದಾಗಿ ತಿಳಿ​ಸಿ​ದರು. ಜೆಡಿ​ಎಸ್‌ ಮುಖಂಡ​ರಾದ ರಾಜ​ಶೇ​ಖರ್‌, ಬಿ.ಉ​ಮೇಶ್‌, ಅಜಯ್‌ ದೇವೇ​ಗೌ​ಡ, ಪಿ.ಅ​ಶ್ವಥ್‌, ಜಯ​ಕು​ಮಾರ್‌ , ರಾಜ​ಶೇ​ಖರ್‌ , ಕುಮಾರ್‌ ಗೌಡ ಮತ್ತಿತ​ರರು ಹಾಜ​ರಿ​ದ್ದರು.

ಶಾಸಕಿ ಅನಿತಾ ಕುಮಾರಸ್ವಾಮಿ ಚುನಾವಣೆಯಲ್ಲಿ ಗೆದ್ದ ಬಳಿಕ ಕ್ಷೇತ್ರದತ್ತ ಮುಖ ಮಾಡಿದ್ದು ಸ್ವಲ್ಪ ಕಡಿಮೆ. ಅದರಲ್ಲೂ ಪ್ರಮುಖವಾಗಿ ಸರ್ಕಾರದ ಕೆಲಸ ಹಾಗೂ ಕಾಮಗಾರಿಗಳ ಶಂಕುಸ್ಥಾಪನೆಗೆ ಮಾತ್ರ ಶಾಸಕರು ಸೀಮಿತ ಎಂಬ ಚರ್ಚೆಗಳು ಕ್ಷೇತ್ರದಲ್ಲಿ ನಡೆ​ದಿ​ದ್ದವು. ಪ್ರಮುಖವಾಗಿ ಕೋವಿಡ್‌ ಶುರುವಾದಗಿನಿಂದ ಶಾಸಕಿ ಅನಿತಾ ಕುಮಾರಸ್ವಾಮಿ ಕ್ಷೇತ್ರದತ್ತ ಬರಲೇ ಇಲ್ಲ. ಇನ್ನು ಕ್ಷೇತ್ರದಲ್ಲಿ ಯಾವುದೇ ಕೆಲಸ ಕಾರ್ಯಗಳು ನಡೆಯುತ್ತಿಲ್ಲ. ಸಮಸ್ಯೆಗಳನ್ನು ಹೇಳಿಕೊಳ್ಳಲು ಶಾಸಕರು ಸಂಪರ್ಕಕ್ಕೆ ಸಿಗುತ್ತಿಲ್ಲ ಎಂಬ ಆರೋಪಗಳು ಕೇಳಿ ಬಂದಿ​ದ್ದವು.

'ನಿಖಿಲ್ ಕುಮಾರಸ್ವಾಮಿ ವಿರುದ್ಧ ಗರಂ : ಅನಿತಾ ವಿರುದ್ಧವೂ ಅಸಮಾಧಾನ' .

ಕ್ಷೇತ್ರವನ್ನು ಪುತ್ರ ನಿಖಿಲ್ಗೆ ಬಿಟ್ಟು ಕೊಡಲು ಎಲ್ಲ ರೀತಿಯ ಸಿದ್ಧತೆಗಳನ್ನು ಒಳಗೊಳಗೆ ಜೆಡಿಎಸ್‌ ಪಕ್ಷ ಮಾಡಿಕೊಳ್ಳುತ್ತಿದೆ. ಅದಕ್ಕೆ ಪುಷ್ಠಿ ನೀಡುವಂತೆ ರಾಮನಗರಲ್ಲಿ ನಿಖಿಲ್ ಕುಮಾರಸ್ವಾಮಿ ತಮ್ಮ ಕಾರ್ಯ ಚಟುವಟಿಕೆಗಳನ್ನು ಶುರು ಮಾಡಿಕೊಂಡಿದ್ದಾರೆ. ಈಗಾಗಲೇ ಸಿದ್ಧತೆಯಲ್ಲಿ ತೊಡ​ಗಿ​ರುವ ಅವರು ಜನರನ್ನು ಭೇಟಿ ಮಾಡಿ ಸಮಸ್ಯೆಗಳನ್ನು ಕುಮಾರಣ್ಣನ ಜತೆ ಮಾತನಾಡಿ ಬಗೆಹರಿಸಿಕೊಡುತ್ತೇನೆ ಎಂಬ ಭರವಸೆ ಕೊಡುತ್ತಿದ್ದಾರೆ.

ಕುಟುಂಬ ರಾಜಕಾರಣಕ್ಕೆ ಪುಷ್ಠಿ ನೀಡುವಂತೆ ಮಾಜಿ ಪ್ರಧಾನಿ ದೇವೇಗೌಡರ ಕಾಲದಿಂದಲೂ ರಾಮನಗರ ಕ್ಷೇತ್ರದಲ್ಲಿ ಜೆಡಿ​ಎಸ್‌ ನಿಂದ ಸ್ಥಳೀ​ಯ​ರು ಚುನಾವಣೆ ಎದುರಿಸಲು ಅವ​ಕಾಶ ನೀಡಿಲ್ಲ. ಈಗ ಪುತ್ರ ನಿಖಿಲ್ ಕುಮಾರಸ್ವಾಮಿಗೆ ಕ್ಷೇತ್ರ ಬಿಟ್ಟುಕೊಟ್ಟು ಗೆಲುವು ಸಾಧಿಸಲು ಜೆಡಿಎಸ್‌ ಮಾಸ್ಟರ್‌ ಪ್ಲಾನ್‌ ಮಾಡಿಕೊಂಡಿದೆ.

Follow Us:
Download App:
  • android
  • ios