ಫೆ. 21ರಂದು ಕ್ಯಾನ್ಸರ್ ರೋಗದಿಂದ ಸಾವಿಗೀಡಾಗಿದ್ದ ವ್ಯಕ್ತಿ| ಮೃತ ವೃದ್ಧನನ್ನು ಅಮಾವಾಸ್ಯೆಯ ದಿನವೇ ತಮ್ಮ ಒಡೆತನದ ಜಮೀನಿನಲ್ಲಿ ಅಂತ್ಯಕ್ರಿಯೆ ಮಾಡಲಾಗಿತ್ತು| ಐದು ತಿಂಗಳ ಬಳಿಕ ಭೀಮನ ಅಮಾವಾಸ್ಯೆಯ ದಿನವಾದ ಜು. 21ರಂದು ಈ ಶವವನ್ನು ಹೊತ್ತೊಯ್ದಿದ ದುಷ್ಕರ್ಮಿಗಳು|
ಬಾಗಲಕೋಟೆ(ಜು.23): ಅಮಾವಾಸ್ಯೆ ದಿನದಂದು ಹೂತಿದ್ದ ಶವವನ್ನು ದುಷ್ಕರ್ಮಿಗಳು ಹೊರ ತೆಗೆದು ಹೊತ್ತೊಯ್ದ ಘಟನೆ ಜಿಲ್ಲೆಯ ಮುಧೋಳ ತಾಲೂಕಿನ ರೂಗಿ ಗ್ರಾಮದಲ್ಲಿ ಸಂಭವಿಸಿದೆ.
Add Asianetnews Kannada as a Preferred Source

ಶಿವರಾತ್ರಿಯ ಅಮಾವಾಸ್ಯೆಯಾದ ಫೆ. 21ರಂದು ಕ್ಯಾನ್ಸರ್ ರೋಗದಿಂದ ಸಾವಿಗೀಡಾಗಿದ್ದ ರಾಮಪ್ಪ ಎಂಬ 63 ವರ್ಷದ ವೃದ್ಧನನ್ನು ಅಮಾವಾಸ್ಯೆಯ ದಿನವೇ ತಮ್ಮ ಒಡೆತನದ ಜಮೀನಿನಲ್ಲಿ ಅಂತ್ಯಕ್ರಿಯೆ ಮಾಡಲಾಗಿತ್ತು. ಆದರೆ, ಐದು ತಿಂಗಳ ಬಳಿಕ ಮೊನ್ನೆ ಅಂದರೆ ಭೀಮನ ಅಮಾವಾಸ್ಯೆಯ ದಿನವಾದ ಜು. 21ರಂದು ಈ ಶವವನ್ನು ದುಷ್ಕರ್ಮಿಗಳು ಹೊತ್ತೊಯ್ದಿದ್ದಾರೆ.
ಹುಬ್ಬಳ್ಳಿ: ಪಾಕಿಸ್ತಾನ ವಿರುದ್ಧ ಗೆದ್ದು ಕೊರೋನಾಗೆ ಸೋತ ಯೋಧ!
ವಾಮಾಚಾರ, ನಿಧಿ ಆಸೆಗೆಂದು ಹೂತಿದ್ದ ಶವವನ್ನು ಹೊತ್ತೊಯ್ದಿರುವ ಸಾಧ್ಯತೆ ಇದೆ. ಹೂತ ಮೃತದೇಹ ಐದು ತಿಂಗಳವಾಗಿದ್ದರಿಂದ ಅಸ್ಥಿಪಂಜರವಾಗಿರುವ ಸಾಧ್ಯತೆ ಇದ್ದು, ಅದನ್ನು ವಾಮಾಚಾರಕ್ಕೆ ಬಳಸಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ಪ್ರಕರಣ ಲೋಕಾಪೂರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.
