ಬೆಲೂರಲ್ಲಿ ರಾತ್ರಿ ದೇಗುಲದ ಮುಖ್ಯದ್ವಾರ ಒಡೆದು ಒಳನುಗ್ಗಿರುವ ದುಷ್ಕರ್ಮಿಗಳು, ಪುರಾತನ ಕಾಳಿಯ ಮೂರ್ತಿಯನ್ನು ಅರ್ಧಭಾಗಕ್ಕೆ ತುಂಡರಸಿ ಹಾನಿ ಮಾಡಿದ್ದಾರೆ.

ಬೇಲೂರು (ನ.21): ಹಾಸನ ಜಿಲ್ಲೆ ಬೇಲೂರು ತಾಲೂಕಿನ ದೊಡ್ಡಗದ್ದವಳ್ಳಿಯಲ್ಲಿರುವ ಇತಿಹಾಸ ಪ್ರಸಿದ್ಧ ಮಹಾಲಕ್ಷ್ಮೀ ದೇವಾಲಯದ ಕಾಳಿ ವಿಗ್ರಹವನ್ನು ದುಷ್ಕರ್ಮಿಗಳು ಭಗ್ನಗೊಳಿಸಿರುವ ಘಟನೆ ಗುರುವಾರ ರಾತ್ರಿ ನಡೆದಿದೆ. 

Add Asianetnews Kannada as a Preferred SourcegooglePreferred

ದೇವಿಗೆ ಪ್ರತಿದಿನ ಪೂಜೆ ಸಲ್ಲುತ್ತಿದ್ದು, ನಿತ್ಯ ಕೈಂಕರ್ಯಗಳು ಮುಗಿದ ಬಳಿಕ ಅರ್ಚಕರು ತೆರಳುತ್ತಿದ್ದರು. ಗುರುವಾರ ರಾತ್ರಿ ದೇಗುಲದ ಮುಖ್ಯದ್ವಾರ ಒಡೆದು ಒಳನುಗ್ಗಿರುವ ದುಷ್ಕರ್ಮಿಗಳು, ಪುರಾತನ ಕಾಳಿಯ ಮೂರ್ತಿಯನ್ನು ಅರ್ಧಭಾಗಕ್ಕೆ ತುಂಡರಸಿ ಹಾನಿ ಮಾಡಿದ್ದಾರೆ.

ಹಾಸನಾಂಬೆ ಹುಂಡಿಯಲ್ಲಿ ಈ ಬಾರಿ ಸಂಗ್ರಹವಾದ ಹಣವೆಷ್ಟು..? ಆದಾಯದಲ್ಲಿ ಭಾರಿ ಕುಸಿತ ..

 ಸುಮಾರು 800 ವರ್ಷಗಳ ಇತಿಹಾಸವಿರುವ ಈ ದೇವಾಲಯ ಹೊಯ್ಸಳರ ಕಾಲದಲ್ಲಿ ನಿರ್ಮಾಣವಾಗಿದ್ದು ಪ್ರಸ್ತುತ ಭಾರತೀಯ ಪುರಾತತ್ವ ಇಲಾಖೆಯ ಸುಪರ್ದಿಯಲ್ಲಿದೆ. ಈ ದೇವಾಲಯ ಚತುಷ್ಕುಟ(ನಾಲ್ಕು ಗರ್ಭಗೃಹ) ಆಲಯವಾಗಿದ್ದು, ಕಾಳಿ, ವಿಷ್ಣು ಹಾಗೂ ಶಿವಲಿಂಗವನ್ನೂ ಒಳಗೊಂಡಿದೆ. ರಾಷ್ಟ್ರೀಯ ಸ್ಮಾರಕವೂ ಆಗಿರುವ ಈ ದೇವಾಲಯದಲ್ಲಿ ರಾತ್ರಿಪಾಳಿಯ ಭದ್ರತಾ ಸಿಬ್ಬಂದಿ ನಿಯೋಜನೆ ಮಾಡದಿರುವುದೇ ಅನಾಹುತಕ್ಕೆ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.