* ಕಟ್ಟೆಯ ಮೇಲೆ ಮಲಗಿದ್ದ ಚಾಲಕನ ಮೇಲೆ ಮಾರಣಾಂತಿಕ ಹಲ್ಲೆ* ಈಶಾನ್ಯ ಸಾರಿಗೆ ಬಸ್ನ ಚಾಲಕ ನಿದ್ರೆಯಲ್ಲಿರುವಾಗ ಬಸ್ನ ಗಾಜು ಪುಡಿ-ಪುಡಿ* ಈ ಸಂಬಂಧ ಆಂಧ್ರದ ಶ್ರೀಶೈಲ ಠಾಣೆಯಲ್ಲಿ ದೂರು ದಾಖಲು
ರಬಕವಿ-ಬನಹಟ್ಟಿ(ಜೂ.04): ಆಂಧ್ರಪ್ರದೇಶದ ಪವಿತ್ರ ಯಾತ್ರಾ ಕ್ಷೇತ್ರ ಶ್ರೀಶೈಲದಲ್ಲಿ 13-14 ಜನರಿದ್ದ ಗುಂಪೊಂದು ಶುಕ್ರವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಕಲ್ಯಾಣ ಕರ್ನಾಟಕದ ಈಶಾನ್ಯ ಸಾರಿಗೆ ಬಸ್ನ ಚಾಲಕ ನಿದ್ರೆಯಲ್ಲಿರುವಾಗ ಬಸ್ನ ಗಾಜು ಪುಡಿ-ಪುಡಿ ಮಾಡಿ, ಕಟ್ಟೆಯ ಮೇಲೆ ಮಲಗಿದ್ದ ಚಾಲಕನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ನಡೆದಿದೆ.
ಬಸ್ ಚಾಲಕ ಬಸವರಾಜ ಬಿರಾದಾರ ಮೇಲೆ ಹಲ್ಲೆಯಾಗಿದೆ. ಈ ಮೊದಲು ಯುಗಾದಿ ಸಂದರ್ಭದಲ್ಲಿ 2022, ಮಾಚ್ರ್ 31ರಂದು ಹೋಟೆಲ್ ಒಂದರಲ್ಲಿ ನೀರಿನ ವಿಚಾರಕ್ಕೆ ಗಲಾಟೆಯಾಗಿ ಕರ್ನಾಟಕದ ಬಾಗಲಕೋಟೆ ಮೂಲದ ಯುವಕನ ಮೇಲೆ ಮಾರಣಾಂತಿಕ ಹಲ್ಲೆಯಾಗಿತ್ತು. ಆ ಘಟನೆ ಮಾಸುವ ಮುನ್ನವೇ ಮತ್ತೊಂದು ಘಟನೆ ನಡೆದಿದ್ದು ಕನ್ನಡಪರ ಸಂಘಟನೆಗಳು, ಕನ್ನಡಿಗರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಬಾಗಲಕೋಟೆ: ಭೀಕರ ರಸ್ತೆ ಸ್ಥಳದಲ್ಲಿ ನಾಲ್ವರ ದುರ್ಮರಣ, ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
ವಿಜಯಪುರ ಘಟಕದ ಬಸ್ ಅನ್ನು ನಿಯಮಿತ ಶೆಡ್ಯೂಲ್ನಂತೆ ಶ್ರೀಶೈಲಕ್ಕೆ ಕೊಂಡೊಯ್ದಿದ್ದ ಬಸ್ ಚಾಲಕ ಬಸವರಾಜ ಬಿರಾದಾರ, ರಾತ್ರಿ ಊಟ ಮಾಡಿ ಮಲಗಿದ್ದರು. ಆಗ ಏಕಾಏಕಿ ಆಟೋದಲ್ಲಿ ಬಂದ 13-14 ಜನರಿದ್ದ ಗುಂಪೊಂದು ಅಶ್ಲೀಲ ಶಬ್ದಗಳಿಂದ ‘ಕರ್ನಾಟಕದವನು ಇಲ್ಲೇಕೆ?’ ಎನ್ನುತ್ತ ಸಾರಿಗೆ ಬಸ್ನ ಗಾಜುಗಳನ್ನು ಕಲ್ಲಿನಿಂದ ಒಡೆದು ಪುಡಿ-ಪುಡಿ ಮಾಡಿದ್ದಲ್ಲದೆ ಚಾಲಕನ ಮುಖ ಹಾಗೂ ಕಾಲಿಗೆ ಕಲ್ಲಿನಿಂದ ಹೊಡೆದಿದ್ದಾರೆ.
ಪರಿಣಾಮ ಬಸವರಾಜ ತೀವ್ರವಾಗಿ ಗಾಯಗೊಂಡಿದ್ದಾರೆ. ನಂತರ ಸಮೀಪದ ಸುನ್ನಿಪೇಠ ಸರ್ಕಾರಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ. ಘಟನೆ ನಡೆದ ಸಂದರ್ಭದಲ್ಲಿ ಚಾಲಕ ಬಿರಾದಾರ ಓಡಿ ಹೋಗಿ ಅಲ್ಲಿದ್ದ ಸಾರಿಗೆ ನಿಯಂತ್ರಕರಿಗೆ ದೂರು ನೀಡಿದ್ದಾರೆ. ದುಷ್ಕರ್ಮಿಗಳನ್ನು ಪ್ರಶ್ನಿಸಿದ ಸಾರಿಗೆ ನಿಯಂತ್ರಕರನ್ನೂ ದುಷ್ಕರ್ಮಿಗಳು ಥಳಿಸಿದ್ದಾರೆ. ಅಷ್ಟರಲ್ಲಿಯೇ ಎಲ್ಲ ಬಸ್ಗಳ ಚಾಲಕರು, ನಿರ್ವಾಹಕರು ಎದ್ದು ಬಂದಾಗ ದುಷ್ಕರ್ಮಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಈ ಕುರಿತು ಆಂಧ್ರದ ಶ್ರೀಶೈಲ ಠಾಣೆಯಲ್ಲಿ ದೂರು ದಾಖಲಾಗಿದೆ.
