ಮಾಜಿ ಸಿಎಂ ಸಿದ್ದರಾಮಯ್ಯ ಹಗಲು ಹೊತ್ತುನಿದ್ದೆ ಮಾಡುವಾಗ ಕನಸು ಕಂಡಿದ್ದಾರೆ. ಅವರು ಹಗಲು ಹೊತ್ತಲ್ಲೇ ನಿದ್ದೇ ಮಾಡುವುದು ಜಾಸ್ತಿ ಎಂದು  ಮುಖಂಡರೋರ್ವರು ಹೇಳಿದ್ದಾರೆ

ಮಡಿಕೇರಿ (ಅ.02): ಮಾಜಿ ಸಿಎಂ ಸಿದ್ದರಾಮಯ್ಯ ರಾತ್ರಿಗಿಂತ ಹಗಲು ನಿದ್ದೆ ಮಾಡುವುದೇ ಜಾಸ್ತಿ. ಸಿಎಂ ಬಿಎಸ್‌ವೈ ಬದಲಾಗಲಿದ್ದಾರೆ ಎನ್ನುವ ಬಗ್ಗೆ ಅವರಿಗೆ ಅದ್ಯಾವಾಗ ಕನಸು ಬಿದ್ದಿತ್ತೋ ಗೊತ್ತಿಲ್ಲ ಎಂದು ಸಿದ್ದರಾಮಯ್ಯ ಹೇಳಿಕೆಗೆ ಸಚಿವ ವಿ.ಸೋಮಣ್ಣ ತಿರುಗೇಟು ನೀಡಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

 ಭಾಗ​ಮಂಡಲ ಹಾಗೂ ತಲ​ಕಾ​ವೇ​ರಿಗೆ ಪತ್ನಿ ಶೈಲಜಾ ಅವ​ರೊಂದಿ​ಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿ​ಸಿದ ಬಳಿಕ ಸೋಮಣ್ಣ ಸುದ್ದಿ​ಗಾ​ರ​ರೊ​ಂದಿಗೆ ಮಾತ​ನಾ​ಡಿ​ದರು. 

ತಾರಕಕ್ಕೇರಿದ ಸಿದ್ದರಾಮಯ್ಯ-ಅಶೋಕ್ ಮಾತಿನ ಸಮರ ...

‘ಯಡಿಯೂರಪ್ಪ ಅವರೇ ಮುಂದೆಯೂ ಮುಖ್ಯಮಂತ್ರಿ ಆಗಿರುತ್ತಾರೆ. ಸಿಎಂ ಸ್ಥಾನ ಬದಲಾವಣೆ ಬಗ್ಗೆ ಸಿದ್ದರಾಮಯ್ಯ ಹಗಲು ಕನಸನ್ನು ಕಾಣುತ್ತಿದ್ದಾರೆ. 

ಪಕ್ಷ, ಹೈಕಮಾಂಡ್‌ ಹಾಗೂ ಯಡಿಯೂರಪ್ಪ ತಮ್ಮ ಕರ್ತವ್ಯವನ್ನು ಸಮರ್ಥವಾಗಿ ನಿರ್ವಹಣೆ ಮಾಡುತ್ತಿದ್ದಾರೆ’ ಎಂದರು.