Asianet Suvarna News Asianet Suvarna News

ದಲಿತರ ಮನೆಯಲ್ಲಿ ಚಹಾ ಸವಿದ ಅಶೋಕ್‌

ಕಂದಾಯ ಸಚಿವ ಆರ್‌ ಅಶೋಕ್ ಅವರು ತಮ್ಮ ಎರಡನೇ ಗ್ರಾಮ ವಾಸ್ತವ್ಯನ್ನು ಹುಬ್ಬಳ್ಳಿಯ ಹಳ್ಳಿಯಲ್ಲಿ ಮಾಡಿದರು. ಇಲ್ಲಿನ ದಲಿತರ ಮನೆಯೊಂದರಲ್ಲಿ ಚಹಾ ಮಾಡಿಸಿಕೊಂಡು ಕುಡಿದರು. 

Minister R Ashok  2nd Village Visit to hubli chabbi snr
Author
Bengaluru, First Published Mar 21, 2021, 7:16 AM IST

ಹುಬ್ಬಳ್ಳಿ (ಮಾ.21):  ಅಂಬೇಡ್ಕರ್‌ ಕಾಲೋನಿಯ ಕಲ್ಲಪ್ಪ ಯಲ್ಲಪ್ಪ ದೊಡ್ಡಮನಿ ಅವರ ನಿವಾಸದಲ್ಲಿ ಸಚಿವ ಅಶೋಕ್‌ ಅವರೇ ಹೇಳಿ, ಚಹಾ ಮಾಡಿಸಿಕೊಂಡು ಕುಡಿದರು. 

ಕಟ್ಟೆಮೇಲೆ ಕುಳಿತು ಗ್ರಾಮಸ್ಥರ ಸಮಸ್ಯೆ ಆಲಿಸುತ್ತಿದ್ದ ಅಶೋಕ್‌, ಈ ವೇಳೆ ಆ ಮನೆಯ ಯಜಮಾನರನ್ನು ಕರೆದು ಚಹಾ ಮಾಡಿಸುವಂತೆ ಸೂಚಿಸಿದರು. 

ಅಕ್ರಮ ಸಾಗುವಳಿ ಸಕ್ರಮಕ್ಕೆ ಮತ್ತೆ ಅರ್ಜಿ ಆಹ್ವಾನ ...

ಅದರಂತೆ ಅಲ್ಲಿದ್ದವರಿಗೆಲ್ಲ ಮನೆಯವರು ಚಹಾ ಮಾಡಿದರು. ಬಾಗಿಲು ಪಕ್ಕದಲ್ಲೇ ಕುಳಿತಿದ್ದ ಸಚಿವ ಆರ್‌.ಅಶೋಕ್‌ ಮುಂದೆ ಆ ಮನೆಯ ಬಾಲಕಿ ಚಹಾ ತಟ್ಟೆತಂದಿಟ್ಟಳು.

 ಆಗ ಸಚಿವರೇ ಚಹಾದ ತಟ್ಟೆಎತ್ತಿ ಎಲ್ಲರಿಗೂ ಚಹಾ ನೀಡಿದರು. ತಾವೂ ಚಹಾ ಸೇವಿಸಿದರು. ಬಳಿಕ ಆ ಮನೆಯ ಬಾಲಕಿಯನ್ನು ಮುದ್ದು ಮಾಡಿ ಖುಷಿಪಟ್ಟರು. ಇದೇ ವೇಳೆ ಕಾಲೋನಿಯ ವತಿಯಿಂದ ಅಂಬೇಡ್ಕರ್‌ ಭಾವಚಿತ್ರ ಕೊಟ್ಟು ಸಚಿವರನ್ನು ಸನ್ಮಾನಿಸಲಾಯಿತು.

Follow Us:
Download App:
  • android
  • ios