ಕೊರೋನಾ ಹಿನ್ನೆಲೆಯಲ್ಲಿ ಮಕ್ಕಳ ಶೈಕ್ಷಣಿಕ ಪ್ರಗತಿ ಹಾಗೂ ಮಕ್ಕಳ ಆಟ ಪಾಠಗಳ ಕುರಿತು ಕನ್ನಡಪ್ರಭ ಪತ್ರಿಕೆಯ ‘ಸುಳ್ ಸುದ್ದಿ’ ಕಾಲಂ ನೆನಪಿಸಿಕೊಂಡ ಸಚಿವ ಸುರೇಶ್ ಕುಮಾರ್| ಸಾಮಾಜಿಕ ಅಂತರದೊಂದಿಗೆ ಶಾಲಾ ತರಗತಿ ನಡೆಸುವುದು ಹೇಗೆ? ಈ ವಿಚಾರ ಬಂದಾಗ ನನಗೆ ನೆನಪಾಗುವುದು ಸುಳ್ ಸುದ್ದಿ ಕಾಲಂ ಎಂದ ಸಚಿವರು|
ಬಾಗಲಕೋಟೆ(ಜೂ.04): ಕನ್ನಡಪ್ರಭದಲ್ಲಿ ಬರುವ ‘ಸುಳ್ ಸುದ್ದಿ’ ಕಾಲಂ ಬಗ್ಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Add Asianetnews Kannada as a Preferred Source

ನಗರದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೋನಾ ಹಿನ್ನೆಲೆಯಲ್ಲಿ ಮಕ್ಕಳ ಶೈಕ್ಷಣಿಕ ಪ್ರಗತಿ ಹಾಗೂ ಮಕ್ಕಳ ಆಟ ಪಾಠಗಳ ಕುರಿತು ಕನ್ನಡಪ್ರಭ ಪತ್ರಿಕೆಯ ‘ಸುಳ್ ಸುದ್ದಿ’ ಕಾಲಂ ನೆನಪಿಸಿಕೊಂಡರು. ಸಾಮಾಜಿಕ ಅಂತರದೊಂದಿಗೆ ಶಾಲಾ ತರಗತಿ ನಡೆಸುವುದು ಹೇಗೆ? ಈ ವಿಚಾರ ಬಂದಾಗ ನನಗೆ ನೆನಪಾಗುವುದು ಸುಳ್ ಸುದ್ದಿ ಕಾಲಂ ಎಂದರು.
ಬಿಜೆಪಿಯಲ್ಲಿ ಭಿನ್ನಮತ: 'ಸಚಿವ ಸ್ಥಾನ ಸಿಗದೆ ಹೋದ್ರೆ ಕಾರ್ಯಕರ್ತನಾಗಿರುವೆ'
ಇತ್ತೀಚಿಗೆ ಸುಳ್ ಸುದ್ದಿ ಕಾಲಂನಲ್ಲಿ ‘ಕಬಡ್ಡಿ, ಕುಸ್ತಿಗೆ 6 ಅಡಿ ಸಾಮಾಜಿಕ ಅಂತರದೊಂದಿಗೆ ಅನುಮತಿ’ ಎಂಬ ವಾಕ್ಯದೊಂದಿಗೆ ಸುಳ್ ಸುದ್ದಿ ಬಂದಿತ್ತು ಎಂದ ಸಚಿವರು, ಈ ಸುಳ್ ಸುದ್ದಿ ಕಾಲಂ ನಿಜಕ್ಕೂ ಮಜವಾಗಿರುತ್ತೆ. ನೀವು ನೋಡಿರಬಹುದು ಎಂದು ಹೇಳಿದರು.
