Asianet Suvarna News Asianet Suvarna News

'ಸಚಿವರು ನನ್ನ ಬಗ್ಗೆ ಏಕವಚನದಲ್ಲಿ ಮಾತಾಡಿದ್ದಕ್ಕೆ ಬೇಜಾರಿಲ್ಲ'

ಕಾಂಗ್ರೆಸ್ ಪಕ್ಷದ ಬಗ್ಗೆ ನಾನು ಅವಹೇಳನಕಾರಿಯಾಗಿ ಮಾತನಾಡಿಲ್ಲ. ನನ್ನ ಮನಸ್ಸಿನಲ್ಲೂ ಕಾಂಗ್ರೆಸ್ ಪಕ್ಷದ ಬಗ್ಗೆ ಕೆಟ್ಟ ಯೋಚನೆ ಬರಲ್ಲ. ನಾನು ಮತ್ತು ಪುಟ್ಟರಂಗ ಶೆಟ್ಟಿ ಉತ್ತಮ ಸ್ನೇಹಿತರು. ನಾವು ಸಚಿವ ಸಂಪುಟದ ಉತ್ತಮ ಸ್ನೇಹಿತರು - ಎನ್ . ಮಹೇಶ್

Minister N Mahesh Clarify Another Minister C. Puttaranga shetty
Author
Bengaluru, First Published Sep 27, 2018, 5:00 PM IST

ಮೈಸೂರು[ಸೆ.27]: ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ. ಪುಟ್ಟರಂಗಶೆಟ್ಟಿ ಅವರು ಏಕವಚನದಲ್ಲಿ ಮಾತನಾಡಿದ್ದಕ್ಕೆ ನನಗೇನು ಬೇಜಾರಿಲ್ಲ ಎಂದು ಶಿಕ್ಷಣ ಸಚಿವ ಎನ್. ಮಹೇಶ್ ಸ್ಪಷ್ಟಪಡಿಸಿದರು.

ಮೈಸೂರಿನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಹೇಳಿದ್ದನ್ನು ಅವರು ತಪ್ಪಾಗಿ ಗ್ರಹಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಬಗ್ಗೆ ನಾನು ಅವಹೇಳನಕಾರಿಯಾಗಿ ಮಾತನಾಡಿಲ್ಲ. ನನ್ನ ಮನಸ್ಸಿನಲ್ಲೂ ಕಾಂಗ್ರೆಸ್ ಪಕ್ಷದ ಬಗ್ಗೆ ಕೆಟ್ಟ ಯೋಚನೆ ಬರಲ್ಲ. ನಾನು ಮತ್ತು ಪುಟ್ಟರಂಗ ಶೆಟ್ಟಿ ಉತ್ತಮ ಸ್ನೇಹಿತರು. ನಾವು ಸಚಿವ ಸಂಪುಟದ ಉತ್ತಮ ಸ್ನೇಹಿತರು. ಅವರು ಎಲ್ಲರನ್ನೂ ಏಕ ವಚನದಲ್ಲೇ ಮಾತನಾಡಿಸುತ್ತಾರೆ ಎಂದು ಹೇಳಿದರು.

ಖಾಲಿ ಇರುವ ಶಿಕ್ಷಕರ ಹುದ್ದೆಗಳಿಗೆ ನೇಮಕಾತಿಗೆ ಚಾಲನೆ ನೀಡಲಾಗಿದೆ. ಈಗಾಲೇ 3700 ಅರ್ಹ ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ. ಬಾಕಿ ಇರುವ ಶಿಕ್ಷಕರನ್ನು ಎರಡು ಹಂತದಲ್ಲಿ ನೇಮಿಸಲಾಗುವುದು. ದಸರಾ ರಜೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಕೊಡಗು ಜಿಲ್ಲೆ ಹೊರತು ಪಡಿಸಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಏಕಕಾಲದಲ್ಲಿ ರಜೆ ಘೋಷಣೆ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.

Follow Us:
Download App:
  • android
  • ios