Asianet Suvarna News Asianet Suvarna News

ಪ್ರವಾಸೋದ್ಯಮಕ್ಕೆ ಬಂಡವಾಳ ಆಕರ್ಷಣೆ: ಸಚಿವ ಆನಂದ್‌ ಸಿಂಗ್‌

*  ಸರ್ಕಾರ ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆ ಕೂಡ ನಡೆಸಲಿದೆ 
*  ಕೆಎಸ್‌ಟಿಡಿಯಡಿ ಬರುವ ಹೋಟೆಲ್‌ ಖಾಸಗಿಯವರಿಗೆ ಗುತ್ತಿಗೆ 
*  ಆದಾಯದ ಮಾತ್ರ ಹಂಚಿಕೆ, ಆಸ್ತಿಯೆಲ್ಲ ಕೆಎಸ್‌ಡಿಸಿ ಹೆಸರಿನಲ್ಲೇ ಇರಲಿದೆ 
 

Minister Anand Singh Talks Over Karnataka Tourism grg
Author
Bengaluru, First Published Sep 20, 2021, 1:18 PM IST

ಹೊಸಪೇಟೆ(ಸೆ.20):  ವಿಷನ್‌ ಕರ್ನಾಟಕ ಯೋಜನೆಯಡಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಮಾಡುವ ಚಿಂತನೆ ಸರ್ಕಾರ ಹೊಂದಿದ್ದು, ಈ ಮೂಲಕ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಬಂಡವಾಳ ಆಕರ್ಷಿಸಲಾಗುವುದು ಎಂದು ಪ್ರವಾಸೋದ್ಯಮ ಹಾಗೂ ಪರಿಸರ ಸಚಿವ ಆನಂದ್‌ ಸಿಂಗ್‌ ಹೇಳಿದ್ದಾರೆ. 

ಬಳ್ಳಾರಿಯಲ್ಲಿ ಇತ್ತೀಚೆಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಎಸ್‌ಟಿಡಿಯಡಿ ಬರುವ ಹೋಟೆಲ್‌ಗಳನ್ನು ಖಾಸಗಿಯವರಿಗೆ 15ರಿಂದ 30 ವರ್ಷ ಗುತ್ತಿಗೆ ನೀಡುವ ಆಲೋಚನೆ ಹೊಂದಲಾಗಿದೆ. ಈ ಮೂಲಕ ಆರ್ಥಿಕ ಕ್ರೋಡೀಕರಣ ಮಾಡಲಾಗುವುದು ಎಂದು ತಿಳಿಸಿದ್ದಾರೆ. 

ಹಂಪಿ ಬೈ ನೈಟ್‌ ಯೋಜನೆಗೆ ಮರುಜೀವ

ಬರೀ ಆದಾಯದ ಹಂಚಿಕೆ ಮಾತ್ರ ಮಾಡಿಕೊಳ್ಳಲಾಗುವುದು. ಆಸ್ತಿಯೆಲ್ಲ ಕೆಎಸ್‌ಡಿಸಿ ಹೆಸರಿನಲ್ಲೇ ಇರಲಿದೆ. ಹಾಗಾಗಿ ಇದರಲ್ಲಿ ಆತಂಕಪಡುವುದು ಏನಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ. ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದಕ್ಕಾಗಿ ಈ ಕಾರ್ಯ ಮಾಡಲಾಗುತ್ತಿದೆ. ಸರ್ಕಾರ ಈ ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆ ಕೂಡ ನಡೆಸಲಿದೆ ಎಂದೂ ಹೇಳಿದ್ದಾರೆ.
 

Follow Us:
Download App:
  • android
  • ios