ಕೊರೋನಾ ನಿಗ್ರಹಕ್ಕೆ ಭೂ ತಾಯಿಗೆ ಮೊರೆ..!
ಕೊರೋನಾ ಮಹಾಮಾರಿ ಎಲ್ಲೆಡೆ ತನ್ನ ಅಟ್ಟಹಾಸ ಮೆರೆಯುತ್ತಿದ್ದು, ಜನ ಜೀವನ ತತ್ತರಿಸಿದೆ. ಲಕ್ಷಾಂತರ ಜನರಿಗೆ ಕೊರೋನಾ ಮಹಾಮಾರಿ ಎದುರಾಗಿದ್ದು, ಈ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.
ಮಂಡ್ಯ (ಆ.31): ದೇಶದಲ್ಲಿ ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವ ಕೊರೋನಾ ನಿಗ್ರಹಪಡಿಸಲು ತಾಲೂಕಿನ ಮೊತ್ತಹಳ್ಳಿಯ ಯುವಕರು ಭೂ ತಾಯಿಯ ಮೊರೆ ಹೋಗಿ ಭತ್ತದ ಪೈರಿನ ಮೂಲಕ ಕೊರೋನಾ ಜಾಗೃತಿ ಮೂಡಿಸಿದ್ದಾರೆ.
ಕೊರೋನಾ ಭಾರತ ಬಿಟ್ಟು ತೊಲಗು, ಮಾಸ್ಕ್ ಧರಿಸಿ, ಸಾಮಾಜಿಕ ಅಂತರವಿರಲಿ ಎಂಬ ಜಾಗೃತಿ ಸಂದೇಶಗಳನ್ನು ಭತ್ತದ ಪೈರಿನ ಮೂಲಕವೇ ಸೃಷ್ಟಿಸಿ ಎಲ್ಲರ ಗಮನಸೆಳೆದಿದ್ದಾರೆ. ಮೊತ್ತಹಳ್ಳಿಯ ರಾಜು ಕಾಳಪ್ಪ ಅವರ ಜಮೀನಿನಲ್ಲಿ ಕೊರೋನಾ ಜಾಗೃತಿ ಪೈರು ರಚಿಸಿದ್ದಾರೆ.
ಪ್ರಪಂಚದ ವಿವಿಧ ದೇಶಗಳಲ್ಲಿ ಕೊರೋನಾ ಅಬ್ಬರ ಹೇಗಿದೆ?...
ಹರ್ಷಿತ್ ಮುಡೆ, ದಿಲೀಪ್, ಮಹಮ್ಮದ್ ಎಂಬುವರು ವಿನೂತನ ಪ್ರಯತ್ನದೊಂದಿಗೆ ಸೋಂಕಿನ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಪ್ರಯತ್ನ ನಡೆಸಿದ್ದಾರೆ.
ಭಾರತದಲ್ಲಿ ಏರುತ್ತಿದೆ ಸೋಂಕಿತರ ಸಂಖ್ಯೆ: ಇಟಲಿ, ಬ್ರಿಟನ್, ಅಮೆರಿಕ, ಬ್ರೆಜಿಲ್ನಲ್ಲಿ ಹೇಗಿದೆ?.
ದೇಶದಲ್ಲಿ ಈಗಾಗಲೇ ಕೊರೋನಾ ಮಹಾಮಾರಿ ತನ್ನ ಅಟ್ಟಹಾಸ ಮೆರೆಯುತ್ತಿದೆ. ಲಕ್ಷಾಂತರ ಜನರು ಸೋಂಕಿಗೆ ಒಳಗಾಗಿದ್ದು, ಸಾವಿರಾರು ಜನರು ಬಲಿಯಾಗಿದ್ದಾರೆ. ದಿನದಿನಕ್ಕೂ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ.
ಮಂಡ್ಯ ಜಿಲ್ಲೆಯೂ ಕೂಡ ಕೊರೋನಾ ಮಹಾಮಾರಿ ಅಟ್ಟಹಾಸಕ್ಕೆ ನಲುಗಿದೆ. ಸಾವಿರಾರು ಜನರು ಕೊರೋನಾದಿಂದ ಬಳಲಿದ್ದಾರೆ.