ವ್ಯವಹಾರದಲ್ಲಿ ನಷ್ಟದಿಂದ ಕೋಳಿ ಉದ್ಯಮಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ಕೋಳಿ ಸಾಕಣೆ ವೆಚ್ಚವನ್ನು ಭರಿಸಲಾಗದೆ 2 ಲಕ್ಷ ರು. ಮೌಲ್ಯದ 3000 ಕೋಳಿಗಳನ್ನು ಧಪನ ಮಾಡಿದ್ದರು.

ಡುಪಿ(ಏ.23): ಅಮಾಸೆಬೈಲು ಗ್ರಾಮದ ಬೊಳ್ಮನೆ ಎಂಬಲ್ಲಿ ವ್ಯವಹಾರದಲ್ಲಿ ನಷ್ಟದಿಂದ ಕೋಳಿ ಉದ್ಯಮಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ನಡೆದಿದೆ. ಗಣೇಶ ನಾಯ್ಕ (37) ಮೃತರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅವರು ಕೋಳಿ ಪಾರಂ ನಡೆಸುತ್ತಿದ್ದು, ಲಾಕ್‌ಡೌನ್‌ ನಂತರ ಕೋಳಿಗಳ ಆಹಾರ ಸರಬರಾಜು ಆಗಿರಲಿಲ್ಲ. ಈ ಬಗ್ಗೆ ಕೋಳಿ ಪೂರೈಸಿದ ಕಂಪನಿಯವರನ್ನು ಕೇಳಿದಾಗ ಅವರು ಕೋಳಿಗಳನ್ನು ಧಪನ ಮಾಡುವಂತೆ ತಿಳಿಸಿದ್ದು, ಅದರಂತೆ ಗಣೇಶ ನಾಯ್ಕ ಅವರು ಕೋಳಿ ಸಾಕಣೆ ವೆಚ್ಚವನ್ನು ಭರಿಸಲಾಗದೆ 2 ಲಕ್ಷ ರು. ಮೌಲ್ಯದ 3000 ಕೋಳಿಗಳನ್ನು ಧಪನ ಮಾಡಿದ್ದರು.

ಕೊರೋನಾ ವಾರಿಯರ್‌ಗೆ ಜೀವ ಬೆದರಿಕೆ..!

ಆದರೆ ಈಗ ವ್ಯವಹಾರದಲ್ಲಿ ನಷ್ಟಆಗಿದ್ದರಿಂದ ಮನನೊಂದು ಮಂಗಳವಾರ ಸಂಜೆ ಬೊಳ್ಮನೆ ಕ್ರಾಸ್‌ ಬಳಿ ಸರ್ಕಾರಿ ಕಾಡಿನಲ್ಲಿ ನೈಲಾನ್‌ ಹಗ್ಗದಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಅವರ ತಮ್ಮ ದಿನೇಶ್‌ ನೀಡಿದ ದೂರಿನಂತೆ ಅಮಾಸೆಬೈಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

[ಸಮಸ್ಯೆಗಳು ಜೀವನದ ಅವಿಭಾಜ್ಯ ಅಂಗ. ಸಮಸ್ಯೆಯಿಲ್ಲದ ಮನುಷ್ಯನಿಲ್ಲ. ಯಾವುದೇ ಸಮಸ್ಯೆ ಜೀವನದ ಅಂತ್ಯವಲ್ಲ. ಆತ್ಮಹತ್ಯೆ ಆಲೋಚನೆ ಹೊಳೆದರೆ ಸರ್ಕಾರದ ಸಹಾಯವಾಣಿಗೆ ಕರೆ ಮಾಡಿ: 080 25497777 ಅಥವಾ ಆರೋಗ್ಯ ಸಹಾಯವಾಣಿ 104 ಗೆ ಕರೆ ಮಾಡಿ]