Asianet Suvarna News Asianet Suvarna News

ಬಿಡಾಡಿ ದನಗಳಿಗೂ ಒಕ್ಕರಿಸಿದ ಚರ್ಮಗಂಟು ರೋಗ, ಆತಂಕ

ಬಿಡಾಡಿ ದನಗಳ ಆರೈಕೆಯೇ ತೊಡ್ಡ ತೊಂದರೆ, ರೈತರಿಗೆ ಗಾಯದ ಮೇಲೆ ಬರೆ ಎಳೆದ ಮಹಾಮಾರಿ

Lumpy Skin Disease in Stray Cattle too in Gadag grg
Author
First Published Oct 27, 2022, 11:00 AM IST

ಮಹೇಶ ಛಬ್ಬಿ

ಗದಗ(ಅ.27):  ಜಿಲ್ಲೆ​ಯಾ​ದ್ಯಂತ ಜಾನು​ವಾರು​ಗ​ಳಿಗೆ ಚರ್ಮ ಗಂಟು ರೋಗ ವ್ಯಾಪ​ಕ​ವಾಗಿ ಹರ​ಡು​ತ್ತಿದ್ದು, ಮುಂಜಾ​ಗೃತ ಕ್ರಮ​ವಾಗಿ ಜಾನು​ವಾರು​ಗ​ಳಿಗೆ ಲಸಿಕೆ ಹಾಕಿ​ಸಿ​ದರೂ ರೋಗ ಹರ​ಡು​ವಿಕೆ ನಿಯಂತ್ರ​ಣಕ್ಕೆ ಬಾರ​ದಂತಾ​ಗಿದ್ದು, ಗದಗ- ಬೆಟಗೇರಿ ಅವಳಿ ನಗ​ರದಲ್ಲಿ ಬಿಡಾಡಿ ದನ​ಗ​ಳು ಚರ್ಮ ಗಂಟು ರೋಗ ಬಾಧೆಗೆ ತುತ್ತಾಗಿ ಬಳಲುತ್ತಿ​ವೆ.

ಜಿಲ್ಲೆಯ ಶಿರ​ಹಟ್ಟಿ, ಲಕ್ಷ್ಮೇ​ಶ್ವರ, ಮುಂಡ​ರಗಿ, ರೋಣ, ನರ​ಗುಂದ, ಗಜೇಂದ್ರ​ಗ​ಡ ಸೇರಿ​ದಂತೆ ತಾಲೂ​ಕಿನ ಗ್ರಾಮೀಣ ಭಾಗ​ದಲ್ಲಿ ಚರ್ಮ ಗಂಟು ರೋಗ ಬಾಧೆಗೆ ಸಾಕಷ್ಟು ಜಾನು​ವಾ​ರು​ಗಳು ಸಾವನ್ನಪ್ಪಿದ್ದು, ಇದ​ರಿಂದ ಜಾನು​ವಾ​ರು​ಗ​ಳನ್ನು ಹೇಗೆ ರಕ್ಷಿ​ಸ​ಬೇಕು ಎಂಬುದು ರೈತ​ರಲ್ಲಿ ಯಕ್ಷ​ಪ್ರ​ಶ್ನೆ​ಯಾ​ಗಿ ಉಳಿ​ದಿದೆ. ಕೃಷಿ ಚಟು​ವ​ಟಿ​ಕೆ​ಗ​ಳಿಗೆ, ಹೈನು​ಗಾ​ರಿ​ಕೆಗೆ ತಂದ ಜಾನು​ವಾರುಗಳು ಚರ್ಮ​ಗಂಟು ರೋಗ ಬಾಧೆಗೆ ತುತ್ತಾ​ಗು​ತ್ತಿ​ದ್ದು, ರೈತ​ರನ್ನು ಮತ್ತಷ್ಟುಸಂಕ​ಷ್ಟಕ್ಕೆ ದೂಡಿದೆ. ಮೊದಲೇ ರಣ​ಭೀ​ಕರ ಮುಂಗಾರು ಮಳೆಗೆ ಮನೆ, ಹೊಲ, ಬೆಳೆ​ದ ಬೆಳೆ ಕಳೆ​ದು​ಕೊಂಡು ಕಂಗಾ​ಲಾ​ಗಿದ್ದ ರೈತ​ರಿಗೆ ಜಾನು​ವಾರು​ಗ​ಳಿಗೆ ವಕ್ಕ​ರಿ​ಸಿದ ರೋಗ​ದಿಂದ ಗಾಯದ ಮೇಲೆ ಬರೆ ಎಳೆ​ದಂತಾ​ಗಿದೆ.

Lumpy Skin Disease: ರೋಗಕ್ಕೆ ಬಲಿಯಾದ ಜಾನುವಾರುಗಳಿಗೆ ಬಂತು ಪರಿಹಾರ!

ಬಿಡಾಡಿ ದನ​ಗ​ಳಿಗೆ ಆರೈಕೆ ಹೇಗೆ?:

ಚರ್ಮ ಗಂಟು ರೋಗವು ಸಾಂಕ್ರಾಮಿಕ ರೋಗವಾಗಿದ್ದು, ಸಾಕಿದ ಜಾನು​ವಾರು​ಗ​ಳು ರೋಗ ಬಾಧೆ​ಯಿಂದ ಬಳ​ಲು​ತ್ತಿ​ದ್ದರೆ ಅದಕ್ಕೆ ತಕ್ಷ​ಣವೇ ಪಶು ಚಿಕಿ​ತ್ಸಾ​ಲ​ಯಕ್ಕೆ ಕರೆ​ದು​ಕೊಂಡು ಹೋಗಿ ಮುಂಜಾ​ಗೃತ ಲಸಿ​ಕೆ​ಯಾ​ಗಲಿ ಅಥವಾ ಚಿಕಿ​ತ್ಸೆ​ಯಾ​ಗಲಿ ನೀಡಿ ಆರೈಕೆ ಮಾಡು​ತ್ತಾರೆ. ಅಷ್ಟಾ​ದರೂ ಕೂಡಾ ರೋಗದ ತೀವ್ರ​ತೆ​ಯಿಂದ ಜಿಲ್ಲೆ​ಯಲ್ಲಿ ಸಾಕಷ್ಟುಜಾನು​ವಾ​ರ​ಗಳು ಸಾವ​ನ್ನ​ಪ್ಪಿವೆ. ಅಂತ​ದ​ರಲ್ಲಿ ಬಿಡಾಡಿ ದನ​ಗಳಿಗೆ ಯಾರು ಆರೈಕೆ ಮಾಡು​ವರು ಎಂಬ ಪ್ರಶ್ನೆ ಪ್ರಜ್ಞಾ​ವಂತ​ರಲ್ಲಿ ಕಾಡು​ತ್ತಿದೆ. ಬಿಡಾಡಿ ದನ​ಗಳು ಗುಂಪು ಗುಂಪಾ​ಗಿಯೇ ಇರು​ವು​ದ​ರಿಂದ ಒಂದು ಜಾನು​ವಾರು ರೋಗದಿಂದ ಬಳ​ಲು​ತ್ತಿ​ದ್ದರೆ ಇನ್ನು​ಳಿದ ಜಾನು​ವಾ​ರು​ಗ​ಳಿಗೂ ತೀವ್ರ​ವಾಗಿ ರೋಗ ಹರಡು​ತ್ತದೆ. ಜಿಲ್ಲಾ​ಡ​ಳಿ​ತವು ಬಿಡಾಡಿ ದನ​ಗ​ಳಿಗೆ ಮುಂಜಾ​ಗೃತ ಕ್ರಮ​ವಾಗಿ ಲಸಿಕೆ ಹಾಕಲು ಹಾಗೂ ರೋಗ​ದಿಂದ ಬಳ​ಲು​ತ್ತಿ​ರುವ ಜಾನು​ವಾ​ರು​ಗ​ಳಿಗೆ ಚಿಕಿ​ತ್ಸೆಗೆ ಕ್ರಮ ಕೈಗೊ​ಳ್ಳ​ಬೇಕು ಎಂಬುದು ಸಾರ್ವ​ಜ​ನಿ​ಕರ ಆಗ್ರ​ಹ​ವಾ​ಗಿ​ದೆ.

ಚರ್ಮ​ಗಂಟು ರೋಗಕ್ಕೆ ತುತ್ತಾಗಿರುವ ಜಾನು​ವಾ​ರು​ಗ​ಳನ್ನು ಕಳೆ​ದು​ಕೊಳ್ಳುತ್ತಿರುವ ರೈತ ಸಮು​ದಾಯದಲ್ಲಿ ಆತಂಕ ಮೂಡಿ​ಸಿದೆ. ವ್ಯಾಪ​ಕ​ವಾಗಿ ಹರ​ಡು​ತ್ತಿ​ರುವ ರೋಗದ ನಿಯಂತ್ರ​ಣ​ಕ್ಕೆ ಪರಿ​ಣಾ​ಮ​ಕಾ​ರಿ ಚಿಕಿತ್ಸೆ ಒದ​ಗಿ​ಸ​ಬೇಕು. ಜಾನು​ವಾ​ರ​ಗ​ಳನ್ನು ಕಳೆ​ದು​ಕೊಂಡ ರೈತ​ರಿಗೆ ಸರ್ಕಾರ ಕೂಡಲೆ ಪರಿ​ಹಾರ ಒದ​ಗಿ​ಸ​ಬೇಕು. ಬಿಡಾಡಿ ದನ​ಗ​ಳು ರೋಗ​ದಿಂದ ಬಳ​ಲು​ತ್ತಿದ್ದು, ಅವುಗ​ಳ ಚಿಕಿ​ತ್ಸೆಗೆ ಸಂಬಂಧ​ಪಟ್ಟ ಅಧಿ​ಕಾ​ರಿ​ಗಳು ಕೂಡಲೇ ಮುಂದಾ​ಗ​ಬೇ​ಕು ಹಾಗೂ ಜಿಲ್ಲೆಯ ಎಲ್ಲ ಬಿಡಾಡಿ ದನ​ಗ​ಳಿಗೂ ಮುಂಜಾ​ಗೃತ ಕ್ರಮ​ವಾಗಿ ಚುಚ್ಚು​ಮದ್ದು ಹಾಕು​ವು​ದಕ್ಕೆ ಕ್ರಮ ಕೈಗೊ​ಳ್ಳ​ಬೇಕು ಅಂತ ಮುಳ​ಗುಂದ ರೈತ​ ಸಂಘದ ಅಧ್ಯ​ಕ್ಷ ಬಸ​ವ​ರಾಜ ಕರಿ​ಗಾರ ತಿಳಿಸಿದ್ದಾರೆ.  
 

Follow Us:
Download App:
  • android
  • ios