ಟಾನ್ಸ್ಫಾರ್ಮರ್ ರಿಪೇರಿ ಮಾಡುವಾಗ ಏಕಾಏಕಿ ಕರೆಂಟ್ ಬಂದ ಹಿನ್ನಲೆಯಲ್ಲಿ ಮಹದೇವ್ ಮೃತಪಟ್ಟಿದ್ದಾರೆ. ನಾಲ್ವರು ಲೈನ್ಮ್ಯಾನ್ಗಳು ಹಾಗೂ ಅಧಿಕಾರಿಗಳು ರಿಪೇರಿಗೆ ತೆರಳಿದ್ರು. ಈ ವೇಳೆ ಅವಘಡ ಸಂಭವಿಸಿದೆ.
ಚಿಕ್ಕಮಗಳೂರು(ಏ.23): ವಿದ್ಯುತ್ ಶಾಕ್ನಿಂದ ಲೈನ್ಮ್ಯಾನ್ ಸಾವನ್ನಪ್ಪಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಸಮೀಪದ ಸಿಗೋಡು ಗ್ರಾಮದಲ್ಲಿ ಇಂದು(ಮಂಗಳವಾರ) ನಡೆದಿದೆ.
Add Asianetnews Kannada as a Preferred Source

ಮಹದೇವ್ (30) ಎಂಬುವರೇ ವಿದ್ಯುತ್ ಶಾಕ್ ನಿಂದ ಮೃತಪಟ್ಟ ಲೈನ್ ಮ್ಯಾನ್ ಆಗಿದ್ದಾರೆ. ಟಾನ್ಸ್ಫಾರ್ಮರ್ ರಿಪೇರಿ ಮಾಡುವಾಗ ಏಕಾಏಕಿ ಕರೆಂಟ್ ಬಂದ ಹಿನ್ನಲೆಯಲ್ಲಿ ಮಹದೇವ್ ಮೃತಪಟ್ಟಿದ್ದಾರೆ. ನಾಲ್ವರು ಲೈನ್ಮ್ಯಾನ್ಗಳು ಹಾಗೂ ಅಧಿಕಾರಿಗಳು ರಿಪೇರಿಗೆ ತೆರಳಿದ್ರು. ಈ ವೇಳೆ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಜಯಪ್ರಕಾಶ್ ಹೆಗ್ಡೆ VS ಕೋಟ ಶ್ರೀನಿವಾಸ ಪೂಜಾರಿ: ಚಿಕ್ಕಮಗಳೂರಿನಲ್ಲಿ ಮತದಾರನ ಒಲವು ಯಾರ ಕಡೆ ?
ಮೃತಪಟ್ಟ ಮಹದೇವ್ ಹಾಸನ ಜಿಲ್ಲೆಯ ಹೊಳೆನರಸೀಪುರ ಮೂಲದವರು ಎಂದು ತಿಳಿದು ಬಂದಿದೆ.
