ಟಾನ್ಸ್ಫಾರ್ಮರ್ ರಿಪೇರಿ ಮಾಡುವಾಗ ಏಕಾಏಕಿ ಕರೆಂಟ್ ಬಂದ ಹಿನ್ನಲೆಯಲ್ಲಿ ಮಹದೇವ್ ಮೃತಪಟ್ಟಿದ್ದಾರೆ. ನಾಲ್ವರು ಲೈನ್ಮ್ಯಾನ್ಗಳು ಹಾಗೂ ಅಧಿಕಾರಿಗಳು ರಿಪೇರಿಗೆ ತೆರಳಿದ್ರು. ಈ ವೇಳೆ ಅವಘಡ ಸಂಭವಿಸಿದೆ.
ಚಿಕ್ಕಮಗಳೂರು(ಏ.23): ವಿದ್ಯುತ್ ಶಾಕ್ನಿಂದ ಲೈನ್ಮ್ಯಾನ್ ಸಾವನ್ನಪ್ಪಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಸಮೀಪದ ಸಿಗೋಡು ಗ್ರಾಮದಲ್ಲಿ ಇಂದು(ಮಂಗಳವಾರ) ನಡೆದಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಮಹದೇವ್ (30) ಎಂಬುವರೇ ವಿದ್ಯುತ್ ಶಾಕ್ ನಿಂದ ಮೃತಪಟ್ಟ ಲೈನ್ ಮ್ಯಾನ್ ಆಗಿದ್ದಾರೆ. ಟಾನ್ಸ್ಫಾರ್ಮರ್ ರಿಪೇರಿ ಮಾಡುವಾಗ ಏಕಾಏಕಿ ಕರೆಂಟ್ ಬಂದ ಹಿನ್ನಲೆಯಲ್ಲಿ ಮಹದೇವ್ ಮೃತಪಟ್ಟಿದ್ದಾರೆ. ನಾಲ್ವರು ಲೈನ್ಮ್ಯಾನ್ಗಳು ಹಾಗೂ ಅಧಿಕಾರಿಗಳು ರಿಪೇರಿಗೆ ತೆರಳಿದ್ರು. ಈ ವೇಳೆ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಜಯಪ್ರಕಾಶ್ ಹೆಗ್ಡೆ VS ಕೋಟ ಶ್ರೀನಿವಾಸ ಪೂಜಾರಿ: ಚಿಕ್ಕಮಗಳೂರಿನಲ್ಲಿ ಮತದಾರನ ಒಲವು ಯಾರ ಕಡೆ ?
ಮೃತಪಟ್ಟ ಮಹದೇವ್ ಹಾಸನ ಜಿಲ್ಲೆಯ ಹೊಳೆನರಸೀಪುರ ಮೂಲದವರು ಎಂದು ತಿಳಿದು ಬಂದಿದೆ.
