ಪಿಒಪಿ ಗಣಪತಿ ನಿಷೇಧ/ ಬಳಕೆ ಮಾಡಿದರೆ ದಂಡ ಕಟ್ಟಬೇಕಾದೀತು ಹುಷಾರ್/ ಮೂರ್ತಿ ವಿಸರ್ಜನೆಗೆ ಬೆಂಗಳೂರು ನಗರಾದ್ಯಂತ ವಿವಿಧ ಕೆರೆಗಳಲ್ಲಿ ಅವಕಾಶ/ ಯಾವ ಯಾವ ಯಾವ ಕೆರೆಗಳು? ಇಲ್ಲಿದೆ ಮಾಹಿತಿ

ಬೆಂಗಳೂರು[ಆ. 31] ಗಣೇಶ ಹಬ್ಬದ ಸಂಭ್ರಮದಲ್ಲಿ ಈ ಎಲ್ಲ ವಿಚಾರಗಳನ್ನು ಯಾವುದೇ ಕಾರಣಕ್ಕೂ ಮರೆಯಬಾರದು. ಸಾರ್ವಜನಿಕರ ನೆರವಿಗೆ ಬಿಬಿಎಂಪಿ ಸಹ ನಿಂತಿದ್ದು ಜಾಹೀರಾತುಗಳ ಮೂಲಕ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದೆ.

Add Asianetnews Kannada as a Preferred SourcegooglePreferred

ಮನೆಯಲ್ಲಿ ಅಥವಾ ಸಾರ್ವಜನಿಕವಾಗಿ ಗಣೇಶ ಮೂರ್ತಿ ತಂದು ಪ್ರತಿಷ್ಠಾಪನೆ ಮಾಡುವವರು ಗಮನಿಸಲೇಬೇಕಾದ ಅಂಶಗಳು ಇಲ್ಲಿವೆ.

ಪಿಒಪಿ ಗಣೇಶ ವಿಸರ್ಜನೆಗೆ ಕೊನೆಗೂ ಬಿಬಿಎಂಪಿ ನಿಷೇಧ!

* ಜಲಮಾಲಿನ್ಯ [ತಡೆ ಮತ್ತು ನಿಯಂತ್ರಣ] ಕಾಯ್ದೆ 1974ರ ಕಲಂ 33ರ ಅನ್ವಯ ಪಿಒಪಿ ಗಣಪತಿ ನಿಷೇಧ

* ನಿಷೇಧಿತ ವಸ್ತುಗಳಿಂದ ಗಣೇಶ ವಿಗ್ರಹ ತಯಾರಿಕೆ ಮತ್ತು ಮಾರಾಟ ಶಿಕ್ಷಾರ್ಹ ಅಪರಾಧ. 10 ಸಾವಿರ ರೂ. ದಂಡ ವಿಧಿಸಬಹುದು.

* ಬಿಬಿಎಂಪಿ ನಿಗದಿ ಮಾಡಿರುವ ಕೆರೆ ಮತ್ತು ಪುಷ್ಕರಣಿಗಳಲ್ಲಿಯೂ ಪಿಒಪಿ ಗಣೇಶ ವಿಗ್ರಹ ವಿಸರ್ಜನೆಗೆ ಅವಕಾಶ ಇಲ್ಲ.

* ಸಾರ್ವಜನಿಕ ಗಣೇಶೋತ್ಸವಕ್ಕೆ ಬಿಬವಿಎಂಪಿಯಿಂದ ಅನುಮತಿ ಕಡ್ಡಾಯ. ಹೆಚ್ಚಿನ ಮಾಃಇತಿಗೆ 080-22221188

* ಕೆಳಕಂಡ ಕೆರೆಗಳಲ್ಲಿ ನಿರ್ಮಿಸಿರುವ ಕಲ್ಯಾಣಿಗಳಲ್ಲಿ ಮಾತ್ರ ವಿಗ್ರಹ ವಿಸರ್ಜನೆಗೆ ಅವಕಾಶ

ವಾರ್ಡ್-1 ಯಲಹಂಕ ಕೆರೆ
ವಾರ್ಡ್-3 ಅಲ್ಲಾಳಸಂದ್ರ ಕೆರೆ
ವಾರ್ಡ್-3 ಅಟ್ಟೂರು ಕೆರೆ
ವಾರ್ಡ್-5 ಕೋಗಿಲು ಕರೆ
ವಾರ್ಡ್-5 ರಾಚನಹಳ್ಳಿ ಕೆರೆ
ವಾರ್ಡ್-5 ಜಕ್ಕೂರು ಕೆರೆ
ವಾರ್ಡ್-5 ಪಳನಹಳ್ಳಿ ಕೆರೆ
ವಾರ್ಡ್-10 ದೊಡ್ಡಬೊಮ್ಮಸಂದ್ರ ಕೆರೆ
ವಾರ್ಡ್-25 ಚಳ್ಳಕೆರೆ
ವಾರ್ಡ್-35 ಸ್ಯಾಂಕಿ ಕೆರೆ
ವಾರ್ಡ್-39 ಚೊಕ್ಕಸಂದ್ರ ಕೆರೆ
ವಾರ್ಡ್-54 ಸಾದರಮಂಗಳ ಕೆರೆ
ವಾರ್ಡ್-72 ಹೇರೋಹಳ್ಳಿ ಕೆರೆ
ವಾರ್ಡ್-85 ಮೊನ್ನೆಕೊಳಲು ಕೆರೆ
ವಾರ್ಡ್-90 ಹಲಸೂರು ಕೆರೆ
ವಾರ್ಡ್-129 ಮತ್ತು 130- ಉಳ್ಳಾಲ ಕೆರೆ
ವಾರ್ಡ್-130 ಮಲ್ಲತಹಳ್ಳಿ ಕೆರೆ
ವಾರ್ಡ್-150 ಕೈಗೊಂಡನಹಳ್ಳಿ ಕೆರೆ
ವಾರ್ಡ್-150 ಕಸವನಹಳ್ಳಿ ಕೆರೆ
ವಾರ್ಡ್-150 ದೊಡ್ಡಕೋನೆನಹಳ್ಳಿ ಕೆರೆ
ವಾರ್ಡ್-151 ಮೇಸ್ತ್ರಿ ಪಾಳ್ಯ ಕೆರೆ
ವಾರ್ಡ್-167 ಯಡಿಯೂರು ಕೆರೆ
ವಾರ್ಡ್-184 ದೊರೆಕೆರೆ
ವಾರ್ಡ್-191 ಸಿಂಗಸಂದ್ರ ಕೆರೆ