Asianet Suvarna News Asianet Suvarna News

ಲಾಕ್‌ಡೌನ್‌: ಮಂಗಳೂರಿಂದ ನಡೆದು ಹುಬ್ಬಳ್ಳಿಗೆ ಬಂದಿ​ದ್ದ​ವರು ಇಲ್ಲಿಂದರೂ ಕಾಲ್ಕಿತ್ತರು..!

ಮಂಗಳೂರಿನಿಂದ 6 ದಿನಗಳ ಕಾಲ ಕಾಲ್ನಡಿಗೆಯಲ್ಲೇ ಹುಬ್ಬಳ್ಳಿ ಸೇರಿದ್ದ ಕಾರ್ಮಿಕರು| ಕೆಎಸ್‌ಆರ್‌ಟಿಸಿ ಭವನದಲ್ಲಿ 2 ದಿನಗಳ ಕಾಲ ನೆಲೆಸಿದ್ದ ಕೂಲಿ ಕಾರ್ಮಿಕರು| ಮಧ್ಯಪ್ರದೇಶಕ್ಕೆ ತೆರಳಲು ಕಾರ್ಮಿಕ ಇಲಾಖೆಯಿಂದ ಸೇವಾಸಿಂಧು ಅಡಿ ಹೆಸರನ್ನು ನೋಂದಾಯಿಸಿಕೊಳ್ಳಲಾಗಿತ್ತು| ಬಸ್‌ ಮೂಲಕ ತೆರಳಲು ಇ ಪಾಸ್‌ ಒದಗಿಸಲು ಸಿದ್ಧತೆ ನಡೆದಿತ್ತು|

Labors Went to Madhya Pradesh From Hubballi
Author
Bengaluru, First Published May 11, 2020, 7:24 AM IST

ಹುಬ್ಬಳ್ಳಿ(ಮೇ.11): ಮಂಗಳೂರಿನಿಂದ ನಡೆದುಕೊಂಡು ಹುಬ್ಬಳ್ಳಿಗೆ ಬಂದಿದ್ದ ಮಧ್ಯಪ್ರದೇಶ ಮೂಲದ 39 ಕಾರ್ಮಿಕರು ಇಲ್ಲಿಂದಲೂ ಕಾಲ್ಕಿತ್ತಿದ್ದಾರೆ. ಭಾನುವಾರ ಮಧ್ಯಾಹ್ನ ಇಲ್ಲಿನ ಹೊಸ ಬಸ್‌ ನಿಲ್ದಾಣದಿಂದ ಎಲ್ಲರೂ ನಡಿಗೆಯಲ್ಲಿ ತೆರಳಿದ್ದಾರೆ.

ಮಂಗಳೂರಿನಿಂದ 6 ದಿನಗಳ ಕಾಲ ಕಾಲ್ನಡಿಗೆಯಲ್ಲೇ ಹುಬ್ಬಳ್ಳಿ ಸೇರಿದ್ದ ಇವರು ಕೆಎಸ್‌ಆರ್‌ಟಿಸಿ ಭವನದಲ್ಲಿ 2 ದಿನಗಳ ಕಾಲ ನೆಲೆಸಿದ್ದರು. ಆರೋಗ್ಯ ಇಲಾಖೆ ಸಿಬ್ಬಂದಿ ಎಲ್ಲರ ತಪಾಸಣೆ ಮಾಡಿದರು. ಅಲ್ಲದೇ, ಮಧ್ಯಪ್ರದೇಶಕ್ಕೆ ತೆರಳಲು ಕಾರ್ಮಿಕ ಇಲಾಖೆಯಿಂದ ಸೇವಾಸಿಂಧು ಅಡಿ ಹೆಸರನ್ನು ನೋಂದಾಯಿಸಿಕೊಳ್ಳಲಾಗಿತ್ತು. ಬಸ್‌ ಮೂಲಕ ತೆರಳಲು ಇ ಪಾಸ್‌ ಒದಗಿಸಲು ಸಿದ್ಧತೆ ನಡೆದಿತ್ತು. 

ಹುಬ್ಬಳ್ಳಿ  ಸ್ವಾಮೀಜಿ ಅಸಲಿ ರಹಸ್ಯಗಳೆಲ್ಲ ಬಟಾಬಯಲು,  ಎಣ್ಣೆ-ಗಾಂಜಾ-ಬೆತ್ತಲೆ!

ಪ್ರತಿ ಕಿಮೀಗೆ ಕೆಎಸ್‌ಆರ್‌ಟಿಸಿ 41 ಶುಲ್ಕ ವಿಧಿಸುವುದನ್ನು ತಿಳಿದು ಲಕ್ಷಾಂತರ ರು. ಕೊಡುವಷ್ಟು ನಮ್ಮಲ್ಲಿ ಹಣವಿಲ್ಲ. ದಾನಿಗಳು ಸಹಾಯ ಮಾಡಿದರೆ ಹೋಗುತ್ತೇವೆ ಎಂದಿದ್ದರು. ಈ ನಿಟ್ಟಿನಲ್ಲೂ ಇಲಾಖೆ ಅಧಿಕಾರಿಗಳು ಪ್ರಯತ್ನ ನಡೆಸಿದ್ದರು. ಆದರೆ, ಭಾನುವಾರ ಮಧ್ಯಾಹ್ನ ಏಕಾಏಕಿ ಹುಬ್ಬಳ್ಳಿಯಿಂದ ತೆರಳಿದ್ದಾರೆ. ಹೇಗೆ ಹೋಗುತ್ತೇವೆ ಎಂಬುದನ್ನು ತಿಳಿಸಿಲ್ಲ. ಆದರೆ ನಾವು ಊರಿಗೆ ತೆರಳುತ್ತೇವೆ. ಇಲ್ಲಿರುವುದಿಲ್ಲ ಎಂದು ಹೇಳಿ ಎಲ್ಲರೂ ಹೊರಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 

Follow Us:
Download App:
  • android
  • ios