*  ಅಣೆಕಟ್ಟು ಬಹುತೇಕ ಭರ್ತಿ*  ಜ​ಲಾ​ಶ​ಯ​ದಲ್ಲಿ ಭಾ​ನು​ವಾರ ಸಂಜೆಯ ವೇ​ಳೆಗೆ ನೀ​ರಿನ ಮಟ್ಟ 123.10 ಅ​ಡಿಗೆ ಏ​ರಿ​ಕೆ*  ಡ್ಯಾಂನಿಂದ 27,753 ಕ್ಯು​ಸೆಕ್‌ ನೀ​ರನ್ನು ಅ​ಣೆ​ಕ​ಟ್ಟೆ​ಯಿಂದ ಹೊ​ರ​ ಬಿ​ಡ​ಲಾ​ಗು​ತ್ತಿದೆ

ಮಂಡ್ಯ(ಜು.11): ಕಾ​ವೇರಿ ಜ​ಲಾ​ನ​ಯನ ಪ್ರ​ದೇ​ಶ​ದಲ್ಲಿ ಭಾರೀ ಮ​ಳೆ​ಯಾ​ಗು​ತ್ತಿ​ರು​ವು​ದ​ರಿಂದ ಕೃ​ಷ್ಣ​ರಾಜ ಸಾ​ಗ​ರಕ್ಕೆ ಹೆ​ಚ್ಚಿನ ಪ್ರ​ಮಾ​ಣ​ದಲ್ಲಿ ನೀರು ಹ​ರಿ​ದು​ಬ​ರು​ತ್ತಿ​ರು​ವು​ದ​ರಿಂದ ಅಣೆಕಟ್ಟು ಬಹುತೇಕ ಭರ್ತಿ ಹಂತದಲ್ಲಿದೆ. ಜ​ಲಾ​ಶ​ಯ​ದಲ್ಲಿ ಭಾ​ನು​ವಾರ ಸಂಜೆಯ ವೇ​ಳೆಗೆ ನೀ​ರಿನ ಮಟ್ಟ 123.10 ಅ​ಡಿಗೆ ಏ​ರಿ​ಕೆ​ಯಾ​ಗಿದೆ. ಜ​ಲಾ​ಶಯ ಭರ್ತಿಗೆ ಇನ್ನು 1.70 ಅಡಿ ನೀರು ಮಾತ್ರ ಬಾಕಿ ಇದೆ. 42,633 ಕ್ಯು​ಸೆಕ್‌ ನೀರು ಜ​ಲಾ​ಶ​ಯಕ್ಕೆ ಹ​ರಿ​ದು​ಬ​ರು​ತ್ತಿದೆ.

ಜಲಾಶಯದಿಂದ 27,753 ಕ್ಯು​ಸೆಕ್‌ ನೀ​ರನ್ನು ಅ​ಣೆ​ಕ​ಟ್ಟೆ​ಯಿಂದ ಹೊ​ರ​ ಬಿ​ಡ​ಲಾ​ಗು​ತ್ತಿದೆ. ಪ್ರ​ಸ್ತುತ ಜ​ಲಾ​ಶ​ಯ​ದಲ್ಲಿ 47.106 ಟಿಎಂಸಿ ಅ​ಡಿ​ಯಷ್ಟುನೀರು ಸಂಗ್ರ​ಹ​ವಾ​ಗಿದೆ. ಜ​ಲಾ​ಶ​ಯದ ಹೊರ ಹ​ರಿ​ವಿ​ನಲ್ಲಿ ನ​ದಿಗೆ 26,143 ಕ್ಯು​ಸೆಕ್‌ ನೀ​ರನ್ನು ಬಿ​ಡ​ಲಾ​ಗು​ತ್ತಿ​ದ್ದರೆ, 1700 ಕ್ಯುಸೆಕ್‌ ನೀರನ್ನು ನಾಲೆಗಳಿಗೆ ಹರಿಸಲಾಗುತ್ತಿದೆ. 

Mandya: 110 ಅಡಿಯತ್ತ ಕೆಆರ್‌ಎಸ್‌ ಜಲಾಶಯ: ಒಳ ಹರಿವು ಹೆಚ್ಚಳ

ಈಗಾಗಲೇ ನ​ದಿಯ ತಗ್ಗು ಪ್ರ​ದೇ​ಶ​ದ​ಲ್ಲಿ​ರುವ ಹಾಗೂ ಎ​ರಡು ದಂಡೆ​ಗ​ಳ​ಲ್ಲಿ​ರುವ ಸಾರ್ವಜ​ನಿ​ಕರು ತಮ್ಮ ಆಸ್ತಿ ಪಾಸ್ತಿ ಮತ್ತು ಜಾ​ನು​ವಾ​ರು​ಗಳ ರ​ಕ್ಷ​ಣೆಗೆ ಎ​ಚ್ಚರ ವ​ಹಿಸಿ ಮುಂಜಾ​ಗ್ರತಾ ಕ್ರ​ಮ​ದೊಂದಿಗೆ ಸು​ರ​ಕ್ಷಿತಾ ಸ್ಥ​ಳ​ಗ​ಳಿಗೆ ತೆ​ರ​ಳು​ವಂತೆ ಕೃ​ಷ್ಣ​ರಾ​ಜ​ಸಾ​ಗರ ವಿ​ಭಾ​ಗದ ಕಾ​ರ‍್ಯ​ಪಾ​ಲಕ ಎಂಜಿನಿ​ಯರ್‌ ಪ್ರ​ಕ​ಟ​ಣೆ​ಯಲ್ಲಿ ತಿ​ಳಿ​ಸಿ​ದ್ದಾರೆ.