Asianet Suvarna News Asianet Suvarna News

ಲಾಕ್‌ಡೌನ್‌ ಸಡಿಲ: 'ಲಾಲ್‌ಬಾಗ್‌, ಕಬ್ಬನ್‌ಪಾರ್ಕ್‌ನಲ್ಲಿ ವಾಕಿಂಗ್‌ಗೆ ಅವಕಾಶ ಕೊಡಿ'

ಬೆಂಗಳೂರಿನ ಜನರಿಗೆ ಲಾಲ್‌ಬಾಗ್‌ ಮತ್ತು ಕಬ್ಬನ್‌ಪಾರ್ಕ್ ಶ್ವಾಸಕೋಶಗಳಿದ್ದಂತೆ| ಇಲ್ಲಿರುವ ಔಷಧೀಯ ಗುಣಗಳುಳ್ಳ ಸಸ್ಯಗಳು, ಮರಗಳು ಮತ್ತು ಬಳ್ಳಿಗಳಿಂದ ಹೊರ ಬರುವ ಆಮ್ಲಜನಕ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲಿದೆ| ಇದು ಕೊರೋನಾ ಎದುರಿಸಲು ಸಹಕಾರಿ, ಅದ್ದರಿಂದ ವಾಯುವಿಹಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಮನವಿ|

Karnataka Walkers Union Request to CM B S Yediyurappa Allow walking in Lalbagh, Cubbon Park
Author
Bengaluru, First Published May 15, 2020, 9:57 AM IST

ಬೆಂಗಳೂರು(ಮೇ.15): ಲಾಲ್‌ಬಾಗ್‌ ಮತ್ತು ಕಬ್ಬನ್‌ಪಾರ್ಕ್‌ನಲ್ಲಿ ವಾಯು ವಿಹಾರಿಗಳಿಗಾಗಿ ಬೆಳಗ್ಗೆ 6 ಗಂಟೆಯಿಂದ 9 ಗಂಟೆಯವರೆಗೂ ಅವಕಾಶ ಮಾಡಿಕೊಡಬೇಕು ಎಂದು ಕರ್ನಾಟಕ ನಡಿಗೆದಾರರ ಒಕ್ಕೂಟವು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದೆ.

"

ಈ ಕುರಿತು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಒಕ್ಕೂಟದ ಅಧ್ಯಕ್ಷ ಸಿ.ಕೆ.ರವಿಚಂದ್ರ, ಈ ಎರಡೂ ಉದ್ಯಾನವನಗಳಲ್ಲಿ ಎಲ್ಲ ನಡಿಗೆದಾರರು ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂಬ ಷರತ್ತುಗಳನ್ನು ವಿಧಿಸಿ ವಾಯುವಿಹಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಕೋರಿದ್ದಾರೆ.

BDA: 45000 ಅಕ್ರಮ ಮನೆ ಸಕ್ರಮ, 10 ಸಾವಿರ ಕೊಟಿ ಆದಾಯ ನಿರೀಕ್ಷೆ!

ನಗರದ ಜನರಿಗೆ ಲಾಲ್‌ಬಾಗ್‌ ಮತ್ತು ಕಬ್ಬನ್‌ಪಾರ್ಕ್ ಶ್ವಾಸಕೋಶಗಳಿದ್ದಂತೆ. ಇಲ್ಲಿರುವ ಔಷಧೀಯ ಗುಣಗಳುಳ್ಳ ಸಸ್ಯಗಳು, ಮರಗಳು ಮತ್ತು ಬಳ್ಳಿಗಳಿಂದ ಹೊರ ಬರುವ ಆಮ್ಲಜನಕ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲಿದೆ. ಇದು ಕೊರೋನಾ ಎದುರಿಸಲು ಸಹಕಾರಿಯಾಗಲಿದೆ. ಅದ್ದರಿಂದ ವಾಯುವಿಹಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದ್ದಾರೆ.

ರಾಜ್ಯದಲ್ಲಿ ಈವರೆಗೂ ವಿಧಿಸಿದ್ದ ಲಾಕ್‌ಡೌನ್‌ನ್ನು ಹಂತಹಂತವಾಗಿ ಸಡಿಲ ಗೊಳಿಸುತ್ತಿರುವುದು ಸ್ವಾಗತಾರ್ಹ. ಜೊತೆಗೆ, ಜನರ ಬೇಡಿಕೆಗಳಿಗೆ ಸ್ಪಂದಿಸಲಾಗುತ್ತಿದ್ದು, ಅದೇ ರೀತಿ ಲಾಕ್‌ಡೌನ್‌ ತೆರವುಗೊಳಿಸುವವರೆಗೂ ಲಾಲ್‌ಬಾಗ್‌ನಲ್ಲಿ ವಾಯುವಿಹಾರಕ್ಕೆ ಮಾತ್ರ ಅವಕಾಶ ಕಲ್ಪಿಸಬೇಕು. ಈ ಸಂದರ್ಭದಲ್ಲಿ ಎಲ್ಲ ನಡಿಗೆದಾರರು ಕೊರೋನಾ ಹರಡದಂತೆ ಸರ್ಕಾರ ಸೂಚಿಸಿರುವ ಎಲ್ಲ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಿದ್ದಾರೆ. ಕಡ್ಡಾಯವಾಗಿ ಮಾಸ್ಕ್‌ ಧರಿಸುವುದು, ಥರ್ಮೋಸ್ಕಾ್ಯನಿಂಗ್‌ಗೆ ಒಳಗಾಗುವುದು, ಸ್ಯಾನಿಟೈಸರ್‌ ಬಳಕೆ ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಸಿದ್ಧರಿರುವುದಾಗಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

Follow Us:
Download App:
  • android
  • ios