Asianet Suvarna News Asianet Suvarna News

ಡಿಕೆಶಿ ನಾಡಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್

ಕಾಂಗ್ರೆಸ್ ಟ್ರಬಲ್ ಶೂಟರ್ ಎಂದೇ ಕರೆಸಿಕೊಳ್ಳುವ ಡಿಕೆ ಶಿವಕುಮಾರ್ ನಾಡಿಗೆ ಕರ್ನಾಟಕ ಸರ್ಕಾರ ದೊಡ್ಡ ಕೊಡುಗೆಯೊಂದನ್ನು ನೀಡುತ್ತಿದೆ. 

Karnataka govt appoints Bangalore Bidadi Smart City Authority President
Author
Bengaluru, First Published Feb 8, 2020, 1:52 PM IST

ಎಂ.ಅ​ಫ್ರೋಜ್ ಖಾನ್‌

ರಾಮ​ನ​ಗರ [ಫೆ.08]: ವಿಶ್ವ ಪ್ರಸಿದ್ಧ ಕೈಗಾ​ರಿಕಾ ಪ್ರದೇ​ಶ​ವನ್ನು ಹೊಂದಿ​ರುವ ಬಿಡದಿ ಹೋಬ​ಳಿ​ಯನ್ನು ಸಮ​ಗ್ರ​ವಾಗಿ ಅಭಿ​ವೃದ್ಧಿ ಪಡಿ​ಸುವ ಉದ್ದೇ​ಶ​ದಿಂದ ರಚನೆ ಮಾಡ​ಲಾ​ಗಿದ್ದ ಗ್ರೇಟರ್‌ ಬೆಂಗ​ಳೂರು-ಬಿಡದಿ ಸ್ಮಾರ್ಟ್‌ ಸಿಟಿ ಯೋಜನಾ ಪ್ರಾಧಿ​ಕಾ​ರ (ಜಿಬಿ-ಬಿಎಸ್‌ಸಿಪಿಎ)ಕ್ಕೆ ಅಧ್ಯ​ಕ್ಷ ಮತ್ತು ಸದ​ಸ್ಯ​ರನ್ನು ನೇಮಿ​ಸುವ ಮೂಲಕ ರಾಜ್ಯ ಸರ್ಕಾ​ರ ಮರುಜೀವ ನೀಡಿದೆ.

ಈವರೆಗೆ ಯೋಜನಾ ಪ್ರಾಧಿಕಾ​ರಕ್ಕೆ ಬೆಂಗ​ಳೂರು ಮಹಾ​ನ​ಗರ ಪ್ರದೇ​ಶಾ​ಭಿ​ವೃದ್ಧಿ ಪ್ರಾಧಿ​ಕಾ​ರದ ಮಹಾ​ನ​ಗರ ಆಯು​ಕ್ತರು ಅಧ್ಯ​ಕ್ಷ​ರಾಗಿ ಹಾಗೂ ಮಹಾ​ನ​ಗರ ಯೋಜ​ಕರು ಸದ​ಸ್ಯ ಕಾರ್ಯ​ದ​ರ್ಶಿ​ಯಾಗಿ ಕಾರ್ಯ​ನಿ​ರ್ವ​ಹಿ​ಸು​ತ್ತಿ​ದ್ದರು. ಆದ​ರೀಗ ರಾಜ್ಯ ಸರ್ಕಾ​ರವೇ ಪ್ರಾಧಿ​ಕಾ​ರಕ್ಕೆ ಅಧ್ಯ​ಕ್ಷರು ಮತ್ತು ಸದ​ಸ್ಯ​ರನ್ನು ನೇಮಕ ಮಾಡಿ ಆದೇಶ ಹೊರ​ಡಿ​ಸಿದೆ.

ಪ್ರಾಧಿ​ಕಾ​ರದ ಮೊದಲ ಅಧ್ಯ​ಕ್ಷ​ರನ್ನಾಗಿ ಬಿಜೆಪಿ ಯುವ ಘಟಕ ಜಿಲ್ಲಾ​ಧ್ಯಕ್ಷ ವರ​ದ​ರಾ​ಜು​ಗೌಡ (ಬಾ​ಬು​) ಹಾಗೂ ಸದ​ಸ್ಯ​ರ​ನ್ನಾಗಿ ಬೈರ​ಮಂಗಲ ಗ್ರಾಮದ ಮುತ್ತು​ರಾಜು, ಹೊಸೂರು ಗ್ರಾಮದ ಎಚ್‌.ಪ್ರ​ಕಾಶ್‌ ಅವ​ರನ್ನು ನೇಮಕ ಮಾಡಿ ಸರ್ಕಾರ ಆದೇ​ಶಿ​ಸಿದೆ.

ಪ್ರಾಧಿ​ಕಾರ ರಚ​ನೆ ಯಾವಾಗ?

ಈ ಹಿಂದೆ ಮುಖ್ಯ​ಮಂತ್ರಿ​ಯಾ​ಗಿದ್ದ ಕುಮಾ​ರ​ಸ್ವಾ​ಮಿ ಅವರು ಬಿಡದಿ ಪಟ್ಟಣವನ್ನು ಬೆಂಗಳೂರು ನಗರದ ಸ್ಯಾಟ್‌ಲೈಟ್‌ ಸಿಟಿಯನ್ನಾಗಿ ರೂಪಿಸುವ ಚಿಂತನೆ ನಡೆ​ಸಿ​ದ್ದರು. ಮೊದಲು ಬಿಡದಿ ಪ್ರದೇಶ ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರದ (ಬಿ.ಎಂ.ಆರ್‌.ಡಿ.ಎ) ವ್ಯಾಪ್ತಿಯಲ್ಲಿತ್ತು. 2015ರಲ್ಲಿ ಬಿಡದಿ ಗ್ರಾಮ ಪಂಚಾ​ಯಿ​ತಿ​ ಉನ್ನ​ತೀ​ಕ​ರಣ​ಗೊಂಡು ಪುರ​ಸ​ಭೆಯಾಯಿತು.

ಆನಂತರ ರಾಜ್ಯ ಸರ್ಕಾರ 2016ರ ಅಕ್ಟೋ​ಬರ್‌ 21ರಂದು ಕರ್ನಾ​ಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961ರ ಕಲಂ 4(ಎ​)​(1)ರ​ನ್ವಯ ರಾಮ​ನ​ಗರ ಜಿಲ್ಲೆಯ ಬಿಡದಿ ಮತ್ತು ಸುತ್ತ​ಮು​ತ್ತ​ಲಿನ 38 ಗ್ರಾಮ​ಗ​ಳನ್ನು ಒಳ​ಗೊಂಡಂತೆ ಗ್ರೇಟರ್‌ ಬೆಂಗ​ಳೂರು- ಬಿಡದಿ ಸ್ಮಾರ್ಟ್‌ ಸಿಟಿ ಸ್ಥಳೀಯ ಯೋಜನಾ ಪ್ರದೇ​ಶ​ವನ್ನು ಘೋಷಿ​ಸಿತು.

ಮಗನ ಮದುವೆ ಪ್ಲಾನ್ ಬಗ್ಗೆ ಹೇಳಿದ್ರು ಶಾಸಕಿ ಅನಿತಾ ಕುಮಾರಸ್ವಾಮಿ...

ರಾಮ​ನ​ಗರ ತಾಲೂ​ಕಿನ ಕಸಬಾ ಹೋಬ​ಳಿಯ 8 ಗ್ರಾಮ​, ಬಿಡದಿ ಹೋಬ​ಳಿಯ 26 ಗ್ರಾಮ, ಕೈಲಾಂಚ ಹೋಬ​ಳಿಯ 3 ಹಾಗೂ ಕನ​ಕ​ಪುರ ತಾಲೂ​ಕು ಹಾರೋ​ಹಳ್ಳಿ ಹೋಬ​ಳಿಯ 1 ಗ್ರಾಮ ಸೇರಿ​ದಂತೆ ಒಟ್ಟಾರೆ 38 ಗ್ರಾಮ​ಗಳ 14153.97 ಹೆಕ್ಟೇರ್‌ ವಿಸ್ತೀರ್ಣವನ್ನು ಯೋಜ​ನಾ ಪ್ರದೇ​ಶದ ವ್ಯಾಪ್ತಿಗೆ ತರ​ಲಾ​ಯಿ​ತು.

ಈ ಪ್ರದೇ​ಶ​ದ ವ್ಯಾಪ್ತಿ​ಯ​ಲ್ಲಿನ ಅಭಿ​ವೃ​ದ್ಧಿ​ಗ​ಳನ್ನು ನಿಯಂತ್ರಿ​ಸಲು ಮತ್ತು ಮಹಾ​ಯೋ​ಜನೆ ತಯಾ​ರಿ​ಸಲು ಕರ್ನಾ​ಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961ರ ಕಲಂ 4 (ಸಿ​)​(1)ರ​ ಅಡಿ​ಯಲ್ಲಿ ಪ್ರದ​ತ್ತ​ವಾದ ಅಧಿ​ಕಾ​ರ​ವನ್ನು ಚಲಾ​ಯಿಸಿ ಗ್ರೇಟರ್‌ ಬೆಂಗಳೂರು- ಬಿಡದಿ ಸ್ಮಾರ್ಟ್‌ ಸಿಟಿ ಯೋಜನಾ ಪ್ರಾಧಿ​ಕಾ​ರ​ವನ್ನು ರಚಿಸಿ ಆದೇ​ಶಿ​ಸ​ಲಾ​ಗಿತ್ತು.

ಜೋಡೆತ್ತುಗಳ ಕೋಟೆಯಲ್ಲಿ ಯೋಗೇಶ್ವರ್ ತಂತ್ರ !...

ಪ್ರಾಧಿ​ಕಾ​ರಕ್ಕೆ ಕಾಯ್ದೆ 1961ರ ಕಲಂ 4(ಸಿ​)(3)(ಐ​)​ರ​ನ್ವಯ ಮಹಾ​ನ​ಗರ ಆಯು​ಕ್ತ​ರನ್ನು ಅಧ್ಯ​ಕ್ಷ​ರ​ನ್ನಾಗಿ ಮತ್ತು ಮಹಾ​ನ​ಗರ ಯೋಜ​ಕ​ರನ್ನು ಸದಸ್ಯ ಕಾರ್ಯ​ದ​ರ್ಶಿ​ಯ​ನ್ನಾಗಿ ನೇಮಕ ಮಾಡ​ಲಾಗತ್ತಿ​ತ್ತು. ಆದ​ರೀಗ ರಾಜ್ಯ ಸರ್ಕಾರ ಅದೇ ಅಧಿ​ಕಾ​ರ ಚಲಾ​ಯಿಸಿ ಅಧ್ಯ​ಕ್ಷರು ಮತ್ತು ಸದ​ಸ್ಯ​ರನ್ನು ನೇಮಿ​ಸಿದೆ.

ಮಹಾ ಯೋಜ​ನೆ​ಯಲ್ಲಿ ಮೀಸ​ಲಿಟ್ಟಉದ್ದೇ​ಶ​ವನ್ನು ಹೊರತು ಪಡಿಸಿ ಅನ್ಯ ಉದ್ದೇ​ಶಕ್ಕೆ ತಮ್ಮ ಜಮೀ​ನನ್ನು ಅಭಿ​ವೃದ್ಧಿ ಪಡಿ​ಸಲು ಇಚ್ಛಿ​ಸುವ ಭೂ ಮಾಲೀ​ಕರು ಅಥವಾ ಜಮೀ​ನಿನ ಕಾನೂನು ಬದ್ಧ ಮಾಲೀ​ಕರು ಸಂಬಂಧ​ಪಟ್ಟದಾಖ​ಲಾ​ತಿ​ಗ​ಳೊಂದಿಗೆ ಪ್ರಾಧಿ​ಕಾ​ರದ ಅನು​ಮೋ​ದನೆ ಕೋರಿ ಅರ್ಜಿ ಸಲ್ಲಿ​ಸ​ಬೇಕು.

ಪ್ರಾಧಿ​ಕಾ​ರದ ಸಭೆ​ಯಲ್ಲಿ ಪರಿ​ಗ​ಣಿ​ಸ​ಲಾದ ಭೂ ಉಪ​ಯೋಗ ಬದ​ಲಾ​ವಣೆ ಪ್ರಸ್ತಾ​ವ​ನೆ​ಗ​ಳನ್ನು ಬೆಂಗ​ಳೂರು ಮಹಾ​ನ​ಗರ ಪ್ರದೇ​ಶಾ​ಭಿ​ವೃದ್ಧಿ ಪ್ರಾಧಿ​ಕಾ​ರದ ಮೂಲಕ ಸರ್ಕಾ​ರದ ಅನು​ಮೋ​ದ​ನೆ​ಗಾಗಿ ಸಲ್ಲಿ​ಸ​ಲಾ​ಗು​ತ್ತದೆ. ಪ್ರಾಧಿ​ಕಾ​ರದ ತಾಂತ್ರಿಕ ಅಭಿ​ಪ್ರಾ​ಯದ ಹಿನ್ನೆ​ಲೆ​ಯ​ಲ್ಲಿ ಸರ್ಕಾ​ರವು ಪರಿ​ಶೀ​ಲಿಸಿ ಪ್ರಸ್ತಾ​ವ​ನೆ​ಯನ್ನು ಅನು​ಮೋ​ದಿಸುವ ಅಥವಾ ತಿರ​ಸ್ಕ​ರಿ​ಸುವ ಆದೇಶ ಹೊರ​ಡಿ​ಸು​ತ್ತದೆ.

ಬಿಡದಿ ವ್ಯಾಪ್ತಿಯಲ್ಲಿನ ಪ್ರದೇ​ಶದ ಅಭಿ​ವೃ​ದ್ಧಿ​ಯ ಉದ್ದೇ​ಶ​ದಿಂದ ಪ್ರಾಧಿ​ಕಾ​ರಕ್ಕೆ ಅಧ್ಯಕ್ಷ ಮತ್ತು ಸದ​ಸ್ಯ​ರನ್ನು ನೇಮಿ​ಸಿರುವ ರಾಜ್ಯ ಸರ್ಕಾ​ರ ಪ್ರಾಧಿ​ಕಾ​ರಕ್ಕೆ ಆರ್ಥಿಕ ಶಕ್ತಿ ತುಂಬಲು ಅನು​ದಾನ ನೀಡುವ ಮೂಲಕ ಅಭಿ​ವೃ​ದ್ಧಿಗೆ ಒತ್ತು ನೀಡು​ತ್ತದೆಯೇ ಎಂಬು​ದನ್ನು ಕಾದು ನೋಡ​ಬೇ​ಕಿ​ದೆ.

ಯೋಜನಾ ಪ್ರದೇ​ಶ​ದಲ್ಲಿ ಸೇರಿ​ಸ​ಲ್ಪಟ್ಟಹೋಬಳಿ ಮತ್ತು ಗ್ರಾಮ​ಗಳ ವಿವರ :

1. ರಾಮ​ನ​ಗರ ತಾಲೂಕು ಕಸಬಾ ಹೋಬ​ಳಿಯ ಹಾಗ​ಲ​ಹಳ್ಳಿ, ಬಳ​ಗುಳಿ, ಧಾರಾ​ಪುರ, ಕೆಂಪ​ನ​ಹಳ್ಳಿ, ಕೇತೋ​ಹಳ್ಳಿ, ಮಾದಾ​ಪುರ, ಮಾಯ​ಗಾ​ನ​ಹಳ್ಳಿ, ಬಸ​ವ​ನ​ಪು​ರ.

2. ರಾಮ​ನಗರ ತಾಲೂಕು ಬಿಡದಿ ಹೋಬ​ಳಿಯ ಅಬ್ಬ​ನ​ಕುಪ್ಪೆ, ಅಳ್ಳಾ​ಳ​ಸಂದ್ರ, ​ಬ​ನ್ನಿ​ಗೆರೆ, ಬಿಡದಿ, ಬಲೆ​ವೀ​ರ​ನ​ಹಳ್ಳಿ, ಬೋರೆ​ಹಳ್ಳಿ, ಬೈರ​ಮಂಗಲ, ಗಾಣ​ಕಲ್ಲು, ಗೊಲ್ಲ​ರ​ಪಾ​ಳ್ಯ, ​ಗೋ​ಪ​ಹಳ್ಳಿ, ಹೆಜ್ಜಾ​ಲ, ​ಹೊ​ಸೂರು, ಹುಲ್ತೂರು ರಾಜ್ಯ ಅರಣ್ಯ ವಲಯ, ಇಟ್ಟ​ಮಡು, ಕಾಕ​ರಾ​ಮ​ನ​ಹಳ್ಳಿ, ಕಲ್ಲು​ಗೋ​ಪ​ನ​ಹಳ್ಳಿ, ಕಂಚು​ಗಾ​ರ​ನ​ಹಳ್ಳಿ, ಕಂಚು​ಗಾ​ರ​ನ​ಹಳ್ಳಿ ಕಾವಲ್‌, ಕೆಂಪ​ದ್ಯಾ​ಪ​ನ​ಹಳ್ಳಿ, ಕೆಂಪ​ಯ್ಯ​ನ​ಪಾಳ್ಯ, ಕೆಂಚ​ನ​ಕುಪ್ಪೆ, ಮಂಡ​ಲ​ಹಳ್ಳಿ, ಮುದ್ದಾ​ಪು​ರ​ಕ​ರೇ​ನ​ಹಳ್ಳಿ, ರಾಮ​ನ​ಹಳ್ಳಿ, ಐವಾ​ಗಿ​ಲು,​ಯೆ​ರೆ​ಪಾಳ್ಯ.

3. ರಾ​ಮ​ನ​ಗರ ತಾಲೂಕು ಕೈಲಾಂಚ ಹೋಬ​ಳಿಯ ಅಣ್ಣ​ಹಳ್ಳಿ, ಬೆಣ್ಣ​ಹಳ್ಳಿ, ಮಂಚೇ​ಗೌ​ಡ​ನ​ಪಾಳ್ಯ.

4. ಕ​ನ​ಕ​ಪುರ ತಾಲೂಕು ಹಾರೋ​ಹಳ್ಳಿ ಹೋಬ​ಳಿಯ ವಡೇ​ರ​ಹಳ್ಳಿ (ಭಾ​ಗ​ಶಃ).

ಗ್ರೇಟರ್‌ ಬೆಂಗಳೂರು -ಬಿಡದಿ ಸ್ಮಾರ್ಟ್‌ ಸಿಟಿ ಯೋಜನಾ ಪ್ರಾಧಿ​ಕಾ​ರ​ದ ಮೊದಲ ಅಧ್ಯ​ಕ್ಷ​ನ​ನ್ನಾಗಿ ರಾಜ್ಯ ಸರ್ಕಾರ ನೇಮಕ ಮಾಡಿ​ರು​ವುದು ಖುಷಿ ತಂದಿದೆ. ಹಿರಿಯರ ಮಾರ್ಗ​ದ​ರ್ಶ​ನ​ ಹಾಗೂ ಅಧಿ​ಕಾ​ರಿ​ಗಳ ಸಹ​ಕಾ​ರ​ದೊಂದಿಗೆ ಬಿಡದಿಯ ಸಮಗ್ರ ಅಭಿ​ವೃ​ದ್ಧಿಗೆ ಪೂರ​ಕ​ವಾದ ಕಾರ್ಯ​ಕ್ರಮ ರೂಪಿ​ಸ​ಲಾ​ಗು​ವುದು.

- ವರ​ದ​ರಾ​ಜು​ಗೌಡ, ಅಧ್ಯ​ಕ್ಷ, ಗ್ರೇಟರ್‌ ಬೆಂಗ​ಳೂರು-ಬಿಡದಿ ಸ್ಮಾರ್ಟ್‌ ಸಿಟಿ ಯೋಜನಾ ಪ್ರಾಧಿ​ಕಾರ.

Follow Us:
Download App:
  • android
  • ios