ಜಾಗತಿಕ ಮಟ್ಟದಲ್ಲಿ ಪ್ರಕಟಿತ ಸಂಶೋಧನಾ ಲೇಖನಗಳ ಆಧಾರದ ಮೇಲೆ, ಪ್ರತಿಷ್ಠಿತ ಸ್ಟ್ಯಾನ್‌ಫೋರ್ಡ್‌ ವಿಶ್ವವಿದ್ಯಾನಿಲಯವು ಅಕ್ಟೋಬರ್‌ ತಿಂಗಳಲ್ಲಿ ಪ್ರಕಟಿಸಿರುವ ಈ ವರ್ಷದ ಪಟ್ಟಿಯ ಪ್ರಕಾರ, ಭಾರತದ ಶ್ರೇಷ್ಠ 2 ಸಾವಿರ ವಿಜ್ಞಾನಿಗಳಲ್ಲಿ ಹರ್ಷ ಸಹ ಒಬ್ಬರು. ಶ್ರೇಷ್ಠ 20 ನೇತ್ರ ತಜ್ಞರಲ್ಲಿ ಒಬ್ಬರಾಗಿದ್ದಾರೆ ಹಾಗೂ ಗ್ಲೂಕೋಮಾ ತಜ್ಞರಲ್ಲಿ ಭಾರತದಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಬೆಂಗಳೂರು(ಅ.15): ಭಾರತದ ಗ್ಲೂಕೋಮಾ ತಜ್ಞರ ಪೈಕಿ ಬನ್ನೇರುಘಟ್ಟ ರಸ್ತೆಯಲ್ಲಿರುವ ನಾರಾಯಣ ನೇತ್ರಾಲಯದ ಸಂಶೋಧಕ ವೈದ್ಯ ಡಾ.ಬಿ.ಎಲ್‌. ಹರ್ಷ ಅವರು ಅಗ್ರಸ್ಥಾನದಲ್ಲಿದ್ದಾರೆ ಎಂದು ಅಮೆರಿಕಾದ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾನಿಲಯವು ಪ್ರಕಟಿಸಿದೆ.

Add Asianetnews Kannada as a Preferred SourcegooglePreferred

ಹಿರಿಯ ಕವಿ ಬಿ.ಆರ್‌.ಲಕ್ಷ್ಮಣರಾವ್‌ ಅವರ ಹಿರಿಯ ಪುತ್ರರಾಗಿರುವ ಡಾ.ಬಿ.ಎಲ್‌.ಹರ್ಷ ಅವರು, ನೇತ್ರ ತಜ್ಞರಾಗಿದ್ದು, ಗ್ಲೂಕೋಮಾ ಕ್ಷೇತ್ರದಲ್ಲಿ ವಿಶೇಷ ತಜ್ಞರಾಗಿದ್ದಾರೆ. ಜಾಗತಿಕ ಮಟ್ಟದಲ್ಲಿ ಪ್ರಕಟಿತ ಸಂಶೋಧನಾ ಲೇಖನಗಳ ಆಧಾರದ ಮೇಲೆ, ಪ್ರತಿಷ್ಠಿತ ಸ್ಟ್ಯಾನ್‌ಫೋರ್ಡ್‌ ವಿಶ್ವವಿದ್ಯಾನಿಲಯವು ಅಕ್ಟೋಬರ್‌ ತಿಂಗಳಲ್ಲಿ ಪ್ರಕಟಿಸಿರುವ ಈ ವರ್ಷದ ಪಟ್ಟಿಯ ಪ್ರಕಾರ, ಭಾರತದ ಶ್ರೇಷ್ಠ 2 ಸಾವಿರ ವಿಜ್ಞಾನಿಗಳಲ್ಲಿ ಹರ್ಷ ಸಹ ಒಬ್ಬರು. ಶ್ರೇಷ್ಠ 20 ನೇತ್ರ ತಜ್ಞರಲ್ಲಿ ಒಬ್ಬರಾಗಿದ್ದಾರೆ ಹಾಗೂ ಗ್ಲೂಕೋಮಾ ತಜ್ಞರಲ್ಲಿ ಭಾರತದಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ನಿಮ್ಮ ಬ್ಲಡ್ ಗ್ರೂಪಿಗೆ ತಕ್ಕಂತೆ ಡಯಟ್ ಮಾಡಿ, ಆರೋಗ್ಯ ಹೇಗೆ ಇಂಪ್ರೂವ್ ಆಗುತ್ತೆ ನೋಡಿ!

ಈ ಮಾಹಿತಿಯನ್ನು ಕನ್ನಡಪ್ರಭದೊಂದಿಗೆ ಹಂಚಿಕೊಂಡಿರುವ ಲಕ್ಷ್ಮಣರಾವ್ ಅವರು, ತಮ್ಮ ಪುತ್ರನ ಸಾಧನೆಗೆ ಸಂತಸ ವ್ಯಕ್ತಪಡಿಸಿದ್ದು, ಅಭಿನಂದಿಸಿದ್ದಾರೆ.