* ಕನ್ನಡ ಬಾವುಟ ಹಾರಿಸಿದ ಕನ್ನಡ ಅಭಿಮಾನಿಗಳು * ಇತ್ತೀಚೆಗೆ ಗಾಳಿ, ಮಳೆಯಿಂದ ಹರಿದಿದ್ದ ಕನ್ನಡ ಬಾವುಟ * ಧ್ವಜಸ್ತಂಭದ ಸುತ್ತ ಬಿಗಿ ಪೊಲೀಸ್‌ ಬಂದೋಬಸ್ತ್‌

ಬೆಳಗಾವಿ(ಜು.14): ಇಲ್ಲಿನ ಮಹಾನಗರ ಪಾಲಿಕೆ ಕಚೇರಿ ಎದುರು ಮತ್ತೆ ಹೊಸ ಕನ್ನಡ ಬಾವುಟ ಹಾರಾಡಿದೆ. ಹರಿದ ಕನ್ನಡ ಬಾವುಟವನ್ನು ಬದಲಿಸಿ, ಹೊಸ ಬಾವುಟ ಹಾರಿಸುವಂತೆ ನಾನಾ ಕನ್ನಡಪರ ಸಂಘಟನೆಗಳು ಹೋರಾಟ ಮಾಡುತ್ತಿದ್ದರೂ ಜಿಲ್ಲಾಡಳಿತ, ಪಾಲಿಕೆ ಕ್ರಮಕೈಗೊಂಡಿರಲಿಲ್ಲ. 

Add Asianetnews Kannada as a Preferred SourcegooglePreferred

ಕನ್ನಡ ಅಭಿಮಾನಿಗಳು ಮಂಗಳವಾರ ಬೆಳಗಿನ ಜಾವ ಹರಿದ ಕನ್ನಡ ಬಾವುಟ ತೆರವುಗೊಳಿಸಿ, ಮತ್ತೆ ಹೊಸದಾಗಿ ಕನ್ನಡ ಬಾವುಟವನ್ನು ಹಾರಿಸಿದ್ದಾರೆ.

ಮಾಸಿ, ಹರಿದು ಹೋದ ಕನ್ನಡ ಧ್ವಜ ಬದಲಿಸಲು ಹೋದವರನ್ನ ವಶಕ್ಕೆ ಪಡೆದ ಪೊಲೀಸ್ರು: ಕರ್ನಾಟಕದ ಸ್ಥಿತಿ

ವಿವಿಧ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಹೋರಾಟ ನಡೆಸಿ, ಧ್ವಜಸ್ತಂಭ ನಿರ್ಮಿಸಿ, ಕನ್ನಡ ಬಾವುಟ ಹಾರಿಸಿದ್ದರು. ಇತ್ತೀಚೆಗೆ ಗಾಳಿ, ಮಳೆಯಿಂದ ಕನ್ನಡ ಬಾವುಟ ಹರಿದಿತ್ತು. ಧ್ವಜಸ್ತಂಭದ ಸುತ್ತ ಬಿಗಿ ಪೊಲೀಸ್‌ ಕಾವಲಿದ್ದರೂ ಅವರ ಕಣ್ತಪ್ಪಿಸಿ ಹೊಸ ಬಾವುಟ ಅಳವಡಿಸಿದ್ದಾರೆ.