Asianet Suvarna News Asianet Suvarna News

ಮುನಿಸು ಸರಿಮಾಡಲು ಪತಿ ಜೊತೆ ಹೋದ ಅನಿತಾ ವಿರುದ್ಧವೇ ಅಸಮಾಧಾನ

ಮುನಿಸು ಸರಿಪಡಿಸಲೆಂದು ಪತಿ ಜೊತೆಗೆ ತೆರಳಿದ್ದ ಅನಿತಾ ಕುಮಾರಸ್ವಾಮಿ ವಿರುದ್ಧವೇ ಅಸಮಾಧಾನ ತಿರುಗಿ ಬಿದ್ದಿದೆ. 

JDS Workers unhappy over Anitha kumaraswamy snr
Author
Bengaluru, First Published Oct 15, 2020, 3:14 PM IST

ರಾಮ​ನ​ಗ​ರ (ಅ.15): ಬಿಡ​ದಿಯ ಕೇತ​ಗಾ​ನ​ಹ​ಳ್ಳಿಯ ತೋಟದ ಮನೆ​ಯಲ್ಲಿ ಮಾಜಿ ಸಿಎಂ ಕುಮಾ​ರ​ಸ್ವಾಮಿ ಅವರು ನಡೆ​ಸಿದ ಸಭೆ​ಯಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯ​ಕ​ರ್ತರು ಶಾಸಕಿ ಅನಿತಾ ಕುಮಾರಸ್ವಾಮಿ ಕ್ಷೇತ್ರಕ್ಕೆ ಭೇಟಿ ನೀಡ​ದಿ​ರುವ ವಿಚಾ​ರ​ವನ್ನು ಪ್ರಸ್ತಾ​ಪಿಸಿ ಬೇಸರ ವ್ಯಕ್ತ​ಪ​ಡಿ​ಸಿ​ದರು ಎಂದು ತಿಳಿದು ಬಂದಿದೆ.

ಸಭೆ​ಯಲ್ಲಿ ಅನೇ​ಕರು ಶಾಸಕಿ ಅನಿತಾ ಅವರ ಕಾರ್ಯ​ವೈ​ಖರಿ ಬಗ್ಗೆ ಅಸ​ಮಾ​ಧಾ​ನದ ಮಾತು​ಗ​ಳ​ನ್ನಾ​ಡಿ​ದರು ಎಂದು ವಿಶ್ವಾ​ಸ​ನೀಯ ಮೂಲ​ಗ​ಳಿಂದ ಗೊತ್ತಾ​ಗಿ​ದೆ. ರಾಮ​ನ​ಗರ ಶಾಸಕಿ ಅನಿ​ತಾ ಅ​ವರು ಕ್ಷೇತ್ರಕ್ಕೆ ಬರದ ಕಾರಣ ಜನರ ಆಕ್ರೋಶ ಹೆಚ್ಚಾ​ಗು​ತ್ತಿದೆ. ಶಾಸ​ಕರ ಗೈರು, ವಿರೋಧ ಪಕ್ಷ​ಗಳ ನಾಯ​ಕರ ಹೆಚ್ಚಿದ ಓಡಾ​ಟ​ಗಳ ಬಗ್ಗೆ ಕಾರ್ಯ​ಕ​ರ್ತರು ನೋವು ತೋಡಿ​ಕೊಂಡಿ​ದ್ದಾರೆ.

ಮುನಿಸು ಸರಿ ಮಾಡಲು ಪತ್ನಿ ಜೊತೆಗೆ ದಿಢೀರ್ ತೆರಳಿದ್ರು ಎಚ್‌ಡಿಕೆ ...

ರಾಮ​ನ​ಗ​ರ​ದಲ್ಲಿ ಶಾಸಕರ ಪಿಎ ಯಾರು ಅಂತಲೇ ಗೊತ್ತಾ​ಗು​ತ್ತಿಲ್ಲ. ತಮ್ಮ ವ್ಯಾಪ್ತಿಯ ಅಭಿ​ವೃದ್ಧಿ ಸಮ​ಸ್ಯೆ​ಗ​ಳನ್ನು ಹೇಳಿ​ಕೊ​ಳ್ಳಲು ಸರಿ​ಯಾದ ವ್ಯಕ್ತಿ​ಯನ್ನು ಗುರು​ತಿಸಿ ಕೊಡಿ ಎಂದು ಕಾರ್ಯ​ಕ​ರ್ತರು ಮನವಿ ಮಾಡಿ​ಕೊಂಡರು ಎಂದು ಗೊತ್ತಾ​ಗಿ​ದೆ.

ಕೈಲಾಂಚ ಹೋಬಳಿ ಮುಖಂಡರು - ಕಾರ್ಯ​ಕ​ರ್ತರ ಸಭೆಗೆ ಶಾಸಕಿ ಅನಿತಾ ಕುಮಾ​ರ​ಸ್ವಾಮಿ ಗೈರಾ​ಗಿ​ದ್ದರು. ಕುಮಾ​ರ​ಸ್ವಾಮಿ ಅವರೇ ಪ್ರತಿ​ಯೊಬ್ಬ ಮುಖಂಡ ಮತ್ತು ಕಾರ್ಯ​ಕ​ರ್ತನ ಅಹ​ವಾಲು ಆಲಿಸಿ, ಪರಿ​ಹಾರ ಕಲ್ಪಿ​ಸುವ ಭರ​ವಸೆ ನೀಡಿ​ದ​ರು.

Follow Us:
Download App:
  • android
  • ios