Asianet Suvarna News Asianet Suvarna News

ಡಿಕೆಸು ಏನೇ ಮಾತನಾಡಿದರೂ ​ಆ​ಶೀರ್ವಾದ : ಜೆಡಿಎಸ್ ಶಾಸಕ

ಹಿರಿಯರಾದ ಡಿಕೆ ಸುರೇಶ್ ಏನು ಮಾಡಿದರು ಅದು ನಮಗೆ ಆಶೀರ್ವಾದ ಎಂದ ಜೆಡಿಎಸ್ ಶಾಸಕ ಹೇಳಿದ್ದಾರೆ. ಅವರು ತೋರಿಸಿದ ಮಾರ್ಗದಲ್ಲಿ ನಡೆಯುವುದಾಗಿ ಹೇಳಿದರು. 

JDS MLA Manjunath praises DK Suresh snr
Author
Bengaluru, First Published Dec 1, 2020, 2:19 PM IST


ಮಾಗಡಿ (ನ.01): ಸಂಸದ ಡಿ.ಕೆ.ಸುರೇಶ್‌ ಬಗ್ಗೆ ಮಾತನಾಡುವಷ್ಟುನಾನು ದೊಡ್ಡವನಲ್ಲ. ಅವರು ಏನೇ ಮಾತ​ನಾ​ಡಿ​ದರೂ ಅದೆ​ಲ್ಲ​ವನ್ನು ಆಶೀ​ರ್ವಾ​ದ​ವಾಗಿ ಸ್ವೀಕ​ರಿ​ಸು​ತ್ತೇ​ನೆ ಎಂದು ಶಾಸಕ ಎ.ಮಂಜುನಾಥ್‌ ಹೇಳಿದರು.

ತಾಲೂಕಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಸಂಸದ ಡಿ.ಕೆ.ಸುರೇಶ್‌ ನಮಗೆ ಹಿರಿಯರಿದ್ದು, ಯಾವ ರೀತಿ ಮಾರ್ಗದರ್ಶನ, ದಾರಿ ತೋರಿಸುತ್ತಾರೆ. ಆ ರೀತಿಯಲ್ಲಿ ನಡೆಯುವ ಇಚ್ಛೆ ಹೊಂದಿ​ದ್ದೇನೆ. ಅವರ ವಿಚಾರದಲ್ಲಿ ನಾನು ಏನನ್ನೂ ಪ್ರತಿಕ್ರಿಯಿಸುವುದಿಲ್ಲ. ನನ್ನ ಮತ್ತು ಸಂಸದ ಡಿ.ಕೆ.ಸುರೇಶ್‌ ಅವರ ಸಂಬಂಧವನ್ನು ಯಾರೂ ಸಹ ಅಳಿಸಲು ಸಾಧ್ಯವಿಲ್ಲ. ಅದನ್ನು ಬ್ರೇಕ್‌ ಮಾಡುತ್ತೀನಿ ಎನ್ನುವುದು ಮೂರ್ಖತನದ ಪರಮಾವಧಿ ಎಂ​ದರು.

ಅವರು ನಂಗೆ ಬುದ್ದಿ ಹೇಳೋದು ಬೇಡ : ಅದನ್ನ ಹೇಳೋಕೆ ರೇವಣ್ಣ ಇದ್ದಾರೆ ...

ಮೈತ್ರಿ ಸರ್ಕಾ​ರ​ದಲ್ಲಿ ಎಚ್‌.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಹಲವಾರು ಗ್ರಾಮಗಳಲ್ಲಿ ಆಗಬೇಕಿರುವ ಕಾಮಗಾರಿಗಳ ಪಟ್ಟಿಯನ್ನು ಕೊಟ್ಟಿದ ಹಿನ್ನಲೆಯಲ್ಲಿ ಅನುದಾನವನ್ನು ಮಂಜೂರು ಮಾಡಿಸಿದ್ದರು. ಬಿಜೆಪಿ ಸರ್ಕಾರ ಬಂದ ನಂತರ ಸ್ವಲ್ಪ ತಡ​ವಾ​ಗಿತ್ತು. ಉಪ ಮುಖ್ಯಮಂತ್ರಿ ಸಿ.ಎನ್‌.ಅಶ್ವತ್ಥ ನಾರಾ​ಯಣ ಅವರ ಸಹಕಾರದಿಂದ ಸರ್ಕಾ​ರದ ಮೇಲೆ ಒತ್ತಡ ತಂದು ಅನುದಾನವನ್ನು ಬಿಡುಗಡೆ ಮಾಡಿಸಿ ಶಂಕು ಸ್ಥಾಪನೆ ಮಾಡಲಾಗುತ್ತಿದೆ ಎಂದು ಹೇಳಿದರು.

ಜಿಪಂ ಸದಸ್ಯೆ ದಿವ್ಯ, ತಾಪಂ ಸದಸ್ಯ ಶಿವರಾಜ್, ಜೆಡಿಎಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಕೃಷ್ಣಮೂರ್ತಿ, ತಾಲೂಕು ಅಧ್ಯಕ್ಷ ರಾಮಣ್ಣ, ಯುವ ಘಟಕದ ಅಧ್ಯಕ್ಷ ವಿಜಯ್‌ ಕುಮಾರ್‌ , ಅರುಂಧತಿ ಚಿಕ್ಕಣ್ಣ, ಶಿವರಾಮ್ಯ, ಉಮೇಶ್‌, ಬಿಜೆಪಿ ಮುಖಂಡ ಶ್ರೀ​ಧರ್‌ ಹಾಜ​ರಿ​ದ್ದರು.

Follow Us:
Download App:
  • android
  • ios