'ಜಮೀರ್ ಅಹಮದ್ ಖಾನ್ ಉಲ್ಟಾ, ಪಲ್ಟಿ ಗಿರಾಕಿ'
* ರಾಜ್ಯದಲ್ಲಿ ಡಾ.ರಾಜ್ಕುಮಾರ್ ಬಿಟ್ಟರೆ ಅಣ್ಣ ಎಂದು ಕರೆಯುವುದು ಕುಮಾರಣ್ಣನನ್ನು ಮಾತ್ರ
* ನಿಮ್ಮಿಂದ ಕಲಿಯುವುದು ಏನೂ ಇಲ್ಲ ಎಂದು ತಿರುಗೇಟು ನೀಡಿದ ಸುರೇಶ್ಗೌಡ
* ನಿಮಗೆ ಯಾವ ರೀತಿ ಸ್ವಾಗತಿಸಬೇಕು ಎನ್ನುವುದನ್ನು ಜನರೇ ತೀರ್ಮಾನಿಸುತ್ತಾರೆ
ಮಂಡ್ಯ(ಜೂ.11): ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಉಲ್ಟಾ ಮತ್ತು ಪಲ್ಟಿ ಗಿರಾಕಿ ಎಂದು ನಾಗಮಂಗಲ ಕ್ಷೇತ್ರದ ಶಾಸಕ ಕೆ.ಸುರೇಶ್ಗೌಡ ಟೀಕಿಸಿದ್ದಾರೆ.
ನಾಲಿಗೆ ಕುಲವನ್ನು ಹೇಳುತ್ತದೆ. ಅವರು ಯಾವ ಸಂಸ್ಕೃತಿಯಿಂದ ಇವರೆಲ್ಲಾ ಬಂದರು, ಯಾರಿಂದ ಬಂದರು ಎನ್ನುವುದನ್ನು ಸ್ವಲ್ಪ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ನಾಗಮಂಗಲದಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಹಾಲಿಗೆ ನೀರು ಪ್ರಕರಣ : ಮನ್ ಮುಲ್ ಡೈರಿಗೆ ಸಚಿವ ಸೋಮಶೇಖರ್ ಭೇಟಿ
ರಾಜ್ಯದಲ್ಲಿ ಡಾ.ರಾಜ್ಕುಮಾರ್ ಬಿಟ್ಟರೆ ಅಣ್ಣ ಎಂದು ಕರೆಯುವುದು ಕುಮಾರಣ್ಣನನ್ನು ಮಾತ್ರ. ಅವರು ನಿಮ್ಮಿಂದ ಕಲಿಯುವುದು ಏನೂ ಇಲ್ಲ ಎಂದು ತಿರುಗೇಟು ನೀಡಿದರು. ನಿಮ್ಮ ವರ್ತನೆ ಇದೇ ರೀತಿ ಮುಂದುವರೆದರೆ ನೀವು ಹೋದ ಕಡೆಗಳಲ್ಲಿ ನಿಮಗೆ ಯಾವ ರೀತಿ ಗೌರವ ಕೊಡಬೇಕು, ಯಾವ ರೀತಿ ಸ್ವಾಗತಿಸಬೇಕು ಎನ್ನುವುದನ್ನು ಜನರೇ ತೀರ್ಮಾನಿಸುತ್ತಾರೆ ಎಂದು ಕಟಕಿಯಾಡಿದರು.