Asianet Suvarna News Asianet Suvarna News

Karnataka Politics : ಡಿಕೆ ಸಹೋ​ದ​ರರ ಕೋಟೆ​ಯಲ್ಲಿ ಎಚ್ಡಿಕೆ ಹವಾ

ಕೆಪಿ​ಸಿಸಿ ಅಧ್ಯಕ್ಷ ಡಿ.ಕೆ.​ಶಿ​ವ​ಕು​ಮಾರ್‌ ಹಾಗೂ ಸಂಸದ ಡಿ.ಕೆ.​ಸು​ರೇಶ್‌ ಸಹೋ​ದ​ರರ ಸ್ವಕ್ಷೇತ್ರ ಕನ​ಕ​ಪು​ರ​ದಲ್ಲಿ ಮಾಜಿ ಮುಖ್ಯ​ಮಂತ್ರಿ ಕುಮಾ​ರ​ಸ್ವಾಮಿ ಭಾನು​ವಾರ ಪಂಚ​ರ​ತ್ನ ರಥ​ಯಾತ್ರೆ ಮೂಲಕ ಅಬ್ಬ​ರಿ​ಸಿ​ದರು.

JDS Enter Kanakapur for Pancharatna Rath Yatra snr
Author
First Published Dec 19, 2022, 6:24 AM IST

 ಹಾರೋ​ಹ​ಳ್ಳಿ /ಕನಕಪುರ: (ಡಿ. 19):  ಕೆಪಿ​ಸಿಸಿ ಅಧ್ಯಕ್ಷ ಡಿ.ಕೆ.​ಶಿ​ವ​ಕು​ಮಾರ್‌ ಹಾಗೂ ಸಂಸದ ಡಿ.ಕೆ.​ಸು​ರೇಶ್‌ ಸಹೋ​ದ​ರರ ಸ್ವಕ್ಷೇತ್ರ ಕನ​ಕ​ಪು​ರ​ದಲ್ಲಿ ಮಾಜಿ ಮುಖ್ಯ​ಮಂತ್ರಿ ಕುಮಾ​ರ​ಸ್ವಾಮಿ ಭಾನು​ವಾರ ಪಂಚ​ರ​ತ್ನ ರಥ​ಯಾತ್ರೆ ಮೂಲಕ ಅಬ್ಬ​ರಿ​ಸಿ​ದರು.

ರಾಮ​ನ​ಗರ (Ramanagar)  ಕ್ಷೇತ್ರ ವ್ಯಾಪ್ತಿಯ ಹಾರೋ​ಹ​ಳ್ಳಿ - ಮರ​ಳ​ವಾ​ಡಿಯಲ್ಲಿ ಬಹಿ​ರಂಗ ಸಭೆ ಮುಗಿಸಿ ತೊಪ್ಪ​ಗ​ನ​ಹಳ್ಳಿ ಮೂಲಕ ಕನ​ಕ​ಪುರ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟ ಕುಮಾ​ರ​ಸ್ವಾಮಿ (HD Kumaraswamy)  ಅವ​ರಿಗೆ ಪಕ್ಷದ ಕಾರ್ಯ​ಕ​ರ್ತರು ಹಾಗೂ ಅಭಿ​ಮಾ​ನಿ​ಗಳು ಬೃಹತ್‌ ಗಾತ್ರದ ಹೂವಿನ ಹಾರ ಹಾಕುವ ಮೂಲಕ ಅದ್ಧೂರಿಯಾಗಿ ಬರಮಾಡಿ​ಕೊಂಡರು.

ನೂರಾರು ಯುವಕರ ಗುಂಪಿನೊಂದಿಗೆ ಬೈಕ್‌ ಜಾಥಾದೊಂದಿಗೆ ತೊಪ್ಪಗನಹಳ್ಳಿ ಬಳಿಯಿಂದ ಹೊರಟ ರಥಯಾತ್ರೆಗೆ ತುಂಗಣಿ, ಛತ್ರ, ಬೂದಿಗುಪ್ಪೆ ಗೇಟ್‌ ಹಾಗೂ ಕನ​ಕ​ಪುರ ನಗರದ ಅಯ್ಯಪ್ಪಸ್ವಾಮಿ ದೇವಾಲಯದ ಬಳಿ ಮಹಿಳೆಯರು ಆರತಿ ಬೆಳಗುವ ಮೂಲಕ ಶುಭ ಕೋರಿದರು.

ನಗರದ ಮುಖ್ಯರಸ್ತೆಯಲ್ಲಿ ಪೂರ್ಣ ಕುಂಭ ಕಳಶ ಹೊತ್ತ ಮಹಿಳೆಯರೊಂದಿಗೆ ಜಾನಪದ ಕಲಾಮೇಳಗಳ ಜೊತೆ ಸಾಗಿದ ಬೃಹತ್‌ ಮೆರವಣಿಗೆಯಲ್ಲಿ ಪಂಚರತ್ನ ಯೋಜನೆಯ ಉದ್ದೇಶ ಸಾರುವ ಟ್ಯಾಬ್ಲೋಗಳು ಸಂಚ​ರಿ​ಸಿ​ದವು. ಕಲಾ​ವಿ​ದರು ಪೂಜಾ​ಕು​ಣಿ​ತ​ದಲ್ಲಿ ಕುಮಾ​ರ​ಸ್ವಾಮಿ ಭಾವ​ಚಿತ್ರ ಹೊತ್ತು ಅಭಿ​ಮಾ​ನ​ದಿಂದ ಕುಣಿ​ದರು. ಮಾರ್ಗ​ದುದ್ದಕ್ಕೂ ಮಾಜಿ ಪ್ರಧಾನಿ ದೇವೇಗೌಡ, ಕುಮಾರಸ್ವಾಮಿ ಹಾಗೂ ಯುವ ಮುಖಂಡ ನಿಖಿಲ… ಕುಮಾರಸ್ವಾಮಿಯವರ ಬೃಹತ್‌ ಕಟೌಚ್‌ಗಳು ರಾರಾ​ಜಿ​ಸು​ತ್ತಿದ್ದವು. ಹೆಜ್ಜೆ ಹೆಜ್ಜೆಗೂ ಕಾರ್ಯ​ಕ​ರ್ತರು ಪಟಾಕಿ ಸಿಡಿಸಿ ಜಯಘೋಷ ಮೊಳಗಿಸುತ್ತಿ​ದ್ದರು.

ಚನ್ನಬಸಪ್ಪ ವೃತ್ತದ ವರೆಗೂ ಬೃಹತ್‌ ಮೆರವಣಿಗೆಯ ಮೂಲಕ ಆಗ​ಮಿ​ಸಿ​ದ ಕುಮಾರಸ್ವಾಮಿ ಹಾಗೂ ಮುಖಂಡರಿಗೆ ಅಭಿಮಾನಿಗಳು ಬೃಹತ್‌ ರೇಷ್ಮೆ ಹಾಗೂ ಬಾಳೆ ಹಣ್ಣಿನ ಹಾರವನ್ನು ಹಾಕಿ ಅಭಿಮಾನ ಮೆರೆ​ದರು. ಬಿ.ಎಸ್‌.ದೊ​ಡ್ಡಿಯ ಚಿಕ್ಕಣ್ಣ ಎಂಬು​ವರು ಪಕ್ಷ ಸಂಘ​ಟ​ನೆ​ಗಾಗಿ 5 ಸಾವಿರ ಕಾಣಿಕೆ ನೀಡಿ​ದರು. ಟಿ.ಬೇಕುಪ್ಪೆ ವೃತ್ತದ ಮೂಲಕ ಕೋಡಿಹಳ್ಳಿ ನಂತರ ಹೂಕುಂದ ಮಾರ್ಗವಾಗಿ ಡಿ.ಕೆ.ಶಿವಕುಮಾರ್‌ ರವ​ರ ಹುಟ್ಟೂರು ದೊಡ್ಡಾಲಹಳ್ಳಿ ತಲುಪಿದರು.

ಇಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಕುಮಾ​ರ​ಸ್ವಾಮಿ, ಹಿಂದಿನಿಂದಲೂ ತಾಲೂಕಿನಲ್ಲಿ ನಮ್ಮ ಪಕ್ಷಕ್ಕೆ ನಿಷ್ಠಾವಂತ ಕಾರ್ಯಕರ್ತರನ್ನು ಒಳಗೊಂಡ ದೊಡ್ಡ ಶಕ್ತಿಯೇ ಇದ್ದು , ತನ್ನದೇ ಆದ ಮತ ಬ್ಯಾಂಕ್‌ ಹೊಂದಿದೆ. ಈ ಬಾರಿ ಕ್ಷೇತ್ರದ ಜನತೆ ಬದಲಾವಣೆ ತರುವ ಮೂಲಕ ತಾಲೂಕಿನ ಹಾಗೂ ರಾಜ್ಯದ ಅಭಿವೃದ್ಧಿಗೆ ಬುನಾದಿ ಹಾಕುವಂತೆ ಕರೆ ನೀಡಿದರು.

ದೊಡ್ಡ ಆಲಹಳ್ಳಿಯಿಂದ ಹೊರಟ ರಥಯಾತ್ರೆಯು ರಾತ್ರಿ ವೇಳೆಗೆ ಸಾತನೂರು ತಲುಪಿ ಸಂತೆ ವೃತ್ತದಲ್ಲಿ ಆಯೋಜಿಸಿದ್ದ ಬೃಹತ್‌ ಸಭೆಯನ್ನು ಉದ್ದೇಶಿಸಿ ಮಾತನಾಡಿ ಕಾರ್ಯಕರ್ತರಿಗೆ ಹುಮ್ಮಸ್ಸು ತುಂಬಿದರು. ಅಲ್ಲಿಂದ ಹೊರಟ ರಥಯಾತ್ರೆ ತಾಲೂಕಿನ ಗಡಿಭಾಗ ಶಕ್ತಿ ದೇವತೆ ಕಬ್ಬಾಳಮ್ಮನ ಸನ್ನಿಧಿಗೆ ತಡರಾತ್ರಿ ವೇಳೆಗೆ ತಲುಪಿತು.

ಇದಕ್ಕೂ ಮುನ್ನ ಬೆಳಗ್ಗೆ ಹಾರೋ​ಹಳ್ಳಿ ಭಾಗದ ಚೀಲೂರು ಗ್ರಾಮ​ದಲ್ಲಿ ರಥ​ಯಾ​ತ್ರೆಗೆ ಗ್ರಾಮ​ಸ್ಥರು ಭವ್ಯ ಸ್ವಾಗತ ಕೋರಿ​ದರು. ಮರಿ​ಯ​ಪ್ಪ​ನ​ದೊಡ್ಡಿ, ಟಿ.ಹೊ​ಸ​ಹ​ಳ್ಳಿ​ಯಲ್ಲಿ ಯುವ​ಕರು ಜೆಸಿಬಿ ಮೂಲಕ ಹೂಮಳೆ ಸುರಿ​ಸಿ​ದರೆ, ಗ್ರಾಮ​ಸ್ಥರು ಹೂವಿನ ಹಾರ ಹಾಕಿ​ದರು.

ಅಗರ ಹಾಗೂ ಮಲ್ಲಿ​ಗೆ​ಮೆ​ಟ್ಟಿಲು ರಥ​ಯಾತ್ರೆ ಆಗ​ಮಿ​ಸಿ​ದಾಗ ಜನರು ಆನ್‌ಲೈನ್‌ ಕ್ರಿಕೆಟ್‌ ಬೆಟ್ಟಿಂಗ್‌ ನಿಂದ ಯುವ​ಕರು ದಾರಿ ತಪ್ಪು​ತ್ತಿ​ದ್ದಾರೆ. ಆನ್‌ಲೈನ್‌ ಕ್ರಿಕೆಟ್‌ ಬ್ಯಾನ್‌ ಮಾಡ​ಬೇಕು. ಗ್ರಾಮ​ದಲ್ಲಿ ಬಸ್‌ ನಿಲ್ದಾ​ಣ​ದಲ್ಲಿ ಬಸ್‌ ಶೆಲ್ಟರ್‌ ನಿರ್ಮಾಣ ಮಾಡ​ಬೇ​ಕೆಂದು ಮಾಡಿದ ಮನ​ವಿಗೆ ಕುಮಾ​ರ​ಸ್ವಾಮಿ ಸ್ಪಂದಿ​ಸುವ ಭರ​ವಸೆ ನೀಡಿ​ದರು. ಮರ​ಳ​ವಾ​ಡಿ​ಯಲ್ಲಿ ಕ್ರೇನ್‌ ಮೂಲಕ ಬೃಹತ್‌ ಹಾರ ಹಾಕಿ ಸ್ವಾಗ​ತ ಕೋರಿ​ದರೆ, ಇದೇ ಸಮ​ಯ​ದಲ್ಲಿ ಕೆಲ ಅಲ್ಪ​ಸಂಖ್ಯಾತ ಯುವ​ಕರು ಜೆಡಿ​ಎಸ್‌ ಸೇರ್ಪ​ಡೆ​ಯಾ​ದರು. ಹಾರೋ​ಹ​ಳ್ಳಿ​ಯಲ್ಲಿ ಜೆಸಿ​ಬಿ​ಯಲ್ಲಿ ಪುಷ್ಪ ವೃಷ್ಟಿಮಾಡಿ​ದರು.

ಜೆಡಿಎಸ್‌ ತಾಲೂಕು ಅಧ್ಯಕ್ಷ ಬಿ.ನಾಗರಾಜು, ಬಿಡಿಸಿಸಿ ಬ್ಯಾಂಕ್‌ ಮಾಜಿ ಅಧ್ಯಕ್ಷ ನಾರಾಯಣ ಗೌಡ, ತಾಪಂ ಮಾಜಿ ಅಧ್ಯಕ್ಷ ಬಾಲನರಸಿಂಹಯ್ಯ, ಮುಖಂಡರಾದ ಸಿದ್ಧಮರೀಗೌಡ, ಚಿನ್ನಸ್ವಾಮಿ, ಗೇರಹಳ್ಳಿ ಸಣ್ಣಪ್ಪ, ಪುಟ್ಟರಾಜು,ನಗರಸಭಾ ಸದಸ್ಯರಾದ ಜಯರಾಮ…, ಸ್ಟೂಡಿಯೋ ಚಂದ್ರು, ತಾಪಂ ಮಾಜಿ ಸದ​ಸ್ಯ​ರಾದ ಧನಂಜಯ್ಯ, ಚಂದ್ರಶೇಖರ್‌, ಕಬ್ಬಾಳೇಗೌಡ, ಲೋಕೇಶ್‌, ಸರ್ದಾರ್‌, ಯುವ ಮುಖಂಡ ಮುಳ್ಳಹಳ್ಳಿ ಮಹೇಶ್‌, ಭರತ್‌, ಬಾಲನರಸಿಂಹಯ್ಯ, ಮೋಹನ್‌, ಮಂಜು ಕುಮಾರ್‌ ಮತ್ತಿ​ತ​ರರು ಭಾಗಿಯಾಗಿದ್ದರು.

ಕಾರ್ಯ​ಕ​ರ್ತರ ಮೇಲಿನ ದೌರ್ಜ​ನ್ಯಕ್ಕೆ ಅಂತ್ಯ​ವಾ​ಡುವ ಕಾಲ ಸನ್ನಿ​ಹಿತ: ಕುಮಾ​ರ​ಸ್ವಾ​ಮಿ

ಕನ​ಕ​ಪುರ ಕ್ಷೇತ್ರದಲ್ಲಿ ನಮ್ಮ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಅನುಭವಿಸುತ್ತಿರುವ ನೋವು, ದಬ್ಬಾಳಿಕೆ, ದೌರ್ಜನ್ಯಗಳಿಗೆ ಅಂತ್ಯವಾಡುವ ಕಾಲ ಸನಿಹಿತವಾಗಿದೆ ಎಂದು ಮಾಜಿ ಮುಖ್ಯ​ಮಂತ್ರಿ ಕುಮಾ​ರ​ಸ್ವಾಮಿ ಹೇಳಿ​ದರು.

ಪಂಚ​ರತ್ನ ರಥ​ಯಾ​ತ್ರೆ​ಯಲ್ಲಿ ಬಹಿ​ರಂಗ ಸಭೆ ಉದ್ದೇ​ಶಿಸಿ ಮಾತ​ನಾ​ಡಿದ ಅವರು, ಎದು​ರಾ​ಳಿ​ಗಳ ಬೆದ​ರಿಕೆ, ದೌರ್ಜ​ನ್ಯಕ್ಕೆ ನಾನಾ​ಗಲಿ ಅಥವಾ ನಮ್ಮ ಕಾರ್ಯ​ಕ​ರ್ತ​ರಾ​ಗಲಿ ಹೆದರುವ ಪ್ರಶ್ನೆಯೇ ಇಲ್ಲ. ದೇವರ ಅನುಗ್ರಹದ ಜೊತೆಗೆ ನಿಷ್ಠಾವಂತ ಕಾರ್ಯಕರ್ತರ ಶಕ್ತಿ ನನಗೆ ಹಾಗೂ ನಮ್ಮ ಪಕ್ಷಕ್ಕೆ ಇರುವರೆಗೂ ಯಾರು ಏನು ಮಾಡಲು ಸಾಧ್ಯವಿಲ್ಲ ಎಂದರು.

ದೇವೇ​ಗೌಡ ಮತ್ತು ನನಗೆ ಈ ಕ್ಷೇತ್ರದ ಜನರು ಆಶೀ​ರ್ವಾದ ಮಾಡಿ​ದ್ದಾರೆ. ನನ್ನ ನಿಜ ದೇವ​ರು​ ಕನ​ಕ​ಪು​ರದ ಜನರು. ಯಾವುದೊ ಒತ್ತ​ಡಕ್ಕೆ ಒಳ​ಪಟ್ಟು ಕಳೆದ ಬಾರಿ ಕ್ಷೇತ್ರ​ದಲ್ಲಿ ತಲೆ ಬಾಗಿದೆ. ನಿಮ್ಮಲ್ಲಿ ಆತ್ಮ​ಸ್ಥೈರ್ಯ ತುಂಬಲು ಹೊಂದಾ​ಣಿಕೆ ಮಾಡಿ​ದ್ದೇನೆ ಹೊರತು ಬೇರೆ ಏನಿಲ್ಲ. ಇನ್ನು ಮುಂದೆ ನಿಮಗೆ ನೋವು ಕೊಡು​ವು​ದಿಲ್ಲ. ನಿಮ್ಮೊಂದಿಗೆ ಪಕ್ಷ ಸಂಘ​ಟನೆ ಮಾಡಲು ನಾನು ಇರು​ತ್ತೇನೆ. ಮುಂದೆ ಜೆಡಿ​ಎಸ್‌ ಅಭ್ಯ​ರ್ಥಿಗೆ ಆಶೀ​ರ್ವಾದ ಮಾಡಿ ಎಂದು ತಿಳಿ​ಸಿ​ದ​ರು.

ರಾಜ್ಯ ಸಮಗ್ರವಾಗಿ ಅಭಿವೃದ್ಧಿ ಹೊಂದಬೇಕಾದರೆ ಪ್ರಾದೇಶಿಕ ಪಕ್ಷವಾದ ಜೆಡಿಎಸ್‌ ಅನ್ನು ಅಧಿಕಾರಕ್ಕೆ ತರಬೇಕೆಂದು ನಿಶ್ಚಿಯಿ​ಸಿ​ದ್ದಾರೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ನಾಡಿನ ಜನರಿಗೆ ವಸತಿ,ಶಿಕ್ಷಣ,ರೈತರಿಗೆ ಶಕ್ತಿ ಹಾಗೂ ಮಹಿಳಾ ಸಬಲೀಕರಣ ಸೇರಿದಂತೆ ಸಮಗ್ರ ನೀರಾವರಿ ಅಭಿವೃದ್ಧಿಗೆ ಬದ್ದವಾಗಿದೆ. ಈ ಬಾರಿ ಕ್ಷೇತ್ರದ ಜನತೆ ಬದಲಾವಣೆ ಬಯಸಿದ್ದು , ಈ ಕ್ಷೇತ್ರದ ಫಲಿತಾಂಶ ರಾಜ್ಯ ರಾಜಕಾರಣದ ದಿಕ್ಕನ್ನೇ ಬದಲಿಸಲಿದೆ ಎಂದು ಹೇಳಿದರು.

ನಾನು ಅಧಿಕಾರದಲ್ಲಿದ್ದಾಗ ಯಾವುದೇ ಪ್ರತಿಫಲವನ್ನು ಅಪೇಕ್ಷಿಸದೆ ರಾಜ್ಯದ ಬಡವರ,ರೈತರ,ಮಹಿಳೆಯರ ಸಬಲೀಕರಣಕ್ಕಾಗಿ ಶ್ರಮಿಸಿ ರೈತರ ಸಾಲ 25000 ಸಾವಿರದ ವರೆಗೂ ಮನ್ನಾ ಮಾಡಿದ ತೃಪ್ತಿ ಇದೆ. ಆದರೆ, ಆಡಳಿತದಲ್ಲಿನ ಕೆಲವು ಗೊಂದಲ ಹಾಗೂ ಹಲವು ಮಹಾನ್‌ ನಾಯಕರುಗಳ ಚಿತಾವಣೆ ಯಿಂದ ಅಧಿಕಾರ ಕಳೆದುಕೊಳ್ಳಬೇಕಾಯಿತು ಎಂದು ಕುಮಾ​ರ​ಸ್ವಾಮಿ ಬೇಸರ ವ್ಯಕ್ತಪಡಿಸಿದರು.

Follow Us:
Download App:
  • android
  • ios