Asianet Suvarna News Asianet Suvarna News

ಬೆಂಗಳೂರಿನ ಒಂದು ವಿದ್ಯುತ್ ಚಿತಾಗಾರ ಸ್ಥಗಿತ

ಬೆಂಗಳೂರಿನ ಒಂದು ವಿದ್ಯುತ್ ಚಿತಾಗಾರ ಸ್ಥಗಿತ ಮಾಡಲಾಗಿದೆ. ಕೆಲ ದಿನಗಳ ಕಾಲ ಚಿತಾಗಾರ ಸ್ಥಗಿತಗೊಳ್ಳಲಿದೆ. 

Jagajeevana ram nagar crematorium Stop Due To Development Work
Author
Bengaluru, First Published Aug 21, 2019, 8:31 AM IST

ಬೆಂಗಳೂರು [ಆ.21]: ನಗರದ ಮೈಸೂರು ರಸ್ತೆ ಜಗಜೀವನ್‌ರಾಮ್‌ ನಗರದಲ್ಲಿ ಇರುವ ಬಿಬಿಎಂಪಿಯ ವಿದ್ಯುತ್‌ ಚಿತಾಗಾರವನ್ನು ಮೇಲ್ದರ್ಜೆಗೇರಿಸುವ ಉದ್ದೇಶದಿಂದ ನಾಲ್ಕು ತಿಂಗಳು ಸ್ಥಗಿತಗೊಳಿಸಲಾಗುತ್ತಿದೆ. 

ಚಿತಾಗಾರದ ಕಾಮಗಾರಿಗೆ 120 ದಿನ ಅವಶ್ಯಕತೆ ಇದೆ. ಹಾಗಾಗಿ, ಚಿತಾಗಾರದ ವ್ಯಾಪ್ತಿಯಲ್ಲಿರುವ ಸಾರ್ವಜನಿಕರು ಸಹಕರಿಸಬೇಕೆಂದು ಬಿಬಿಎಂಪಿಯ ಪಶ್ಚಿಮ ವಲಯದ ಕಾರ್ಯಪಾಲ ಎಂಜಿನಿಯರ್‌ ಮನವಿ ಮಾಡಿದ್ದಾರೆ.

ಮೇಲ್ದರ್ಜೆಗೆ ಏರಿಸಿದ ಅಭಿವೃದ್ಧಿ ಕಾರ್ಯಗಳು ಪೂರ್ಣಗೊಳಿಸಿ ಶೀಘ್ರವೇ ಆರಂಭವಾಗಲಿದೆ ಎಂದು ಹೇಳಿದ್ದಾರೆ. 

Follow Us:
Download App:
  • android
  • ios