Asianet Suvarna News Asianet Suvarna News

ಉತ್ತರ ಕನ್ನಡ: ಯಲ್ಲಾಪುರದಲ್ಲಿ ಕುತೂಹಲ ಮೂಡಿಸಿದ ಹ್ಯಾಲಿಕಾಪ್ಟರ್ ಹಾರಾಟ..!

ಕೃಷಿ ಮತ್ತು ಅರಣ್ಯ ಪ್ರದೇಶದ ಮೇಲ್ಭಾಗದಲ್ಲಿ ಹೆಲಿಕ್ಯಾಪ್ಟರ್ ಹಾರಾಟ ನಡೆಸಿದ್ದು, ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗದ ಸಮೀಕ್ಷೆಗಾಗಿ ಈ ಹಾರಾಟ ನಡೆದಿದೆಯೇನೋ ಎಂಬ ಊಹೆ ಮಾಡಲಾಗಿದೆ.

Interesting Helicopter Fly at Yellapur in Uttara Kannada grg
Author
First Published Dec 2, 2023, 3:00 AM IST

ಯಲ್ಲಾಪುರ(ಡಿ.02): ತಾಲೂಕಿನ ವಜ್ರಳ್ಳಿಯ ಸುತ್ತಮುತ್ತಿನ ಪ್ರದೇಶದಲ್ಲಿ ಶುಕ್ರವಾರ ಬೆಳಗ್ಗೆ ಕಂದು ಬಣ್ಣದ ಹೆಲಿಕಾಪ್ಟರ್ ಹಾರಾಟ ನಡೆಸಿದ್ದು, ಈ ಕುರಿತು ಸ್ಥಳೀಯರಲ್ಲಿ ತೀವ್ರ ಆಸಕ್ತಿ ಮತ್ತು ಕುತೂಹಲ ಗರಿಗೆದರಿದೆ. ಕೃಷಿ ಮತ್ತು ಅರಣ್ಯ ಪ್ರದೇಶದ ಮೇಲ್ಭಾಗದಲ್ಲಿ ಹೆಲಿಕ್ಯಾಪ್ಟರ್ ಹಾರಾಟ ನಡೆಸಿದ್ದು, ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗದ ಸಮೀಕ್ಷೆಗಾಗಿ ಈ ಹಾರಾಟ ನಡೆದಿದೆಯೇನೋ ಎಂಬ ಊಹೆ ಮಾಡಲಾಗಿದೆ.

ವಜ್ರಳ್ಳಿ, ಹೊನ್ನಗದ್ದೆ, ಕೊಡ್ಲಗದ್ದೆ ಗ್ರಾಮದ ಮೇಲ್ಗಡೆ ಈ ಹಾರಾಟ ನಡೆದಿದ್ದು, ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ಐದಾರು ಕಿಮೀ ವ್ಯಾಪ್ತಿಯಲ್ಲಿ ವೃತ್ತಾಕಾರವಾಗಿ ಹಾಗೂ ಪೂರ್ವದಿಂದ ಪಶ್ಚಿಮಾಭಿಮುಖವಾಗಿ ತನ್ನ ಹಾರಾಟ ನಡೆಸಿದ ಈ ಹೆಲಿಕಾಪ್ಟರ್ ಗುರುವಾರವೂ ಎರಡು ಬಾರಿ ಹಾರಾಟ ನಡೆಸಿತ್ತು.

ಉತ್ತರಕನ್ನಡ: ಹೊನ್ನಾವರದ ಇಡಗುಂಜಿ ದೇವಸ್ಥಾನದಲ್ಲಿ ಪಂಕ್ತಿಬೇಧ...?

ಸಮೀಪದಲ್ಲಿ ಕೈಗಾ ಅಣು ಸ್ಥಾವರ, ಕಾಳಿ ನದಿಯ ಕೊಡಸಳ್ಳಿ, ಕದ್ರಾ ಜಲಾಶಯ, ದೂರದಲ್ಲಿ ಸೀಬರ್ಡ್ ನೌಕಾನೆಲೆ ಇರುವುದರಿಂದ ಇಂತಹ ಸಮೀಕ್ಷೆ ಕಾರ್ಯದ ಕುರಿತು ಸಾರ್ವಜನಿಕವಾಗಿ ಸ್ಥಳೀಯ ಆಡಳಿತಕ್ಕೆ ಮಾಹಿತಿ ಇಲ್ಲದಿರುವುದು ಅಚ್ಚರಿಗೂ ಕಾರಣವಾಗಿದೆ.

Latest Videos
Follow Us:
Download App:
  • android
  • ios