ತಾಯತ ಮಾರುವವನ ಬಳಿ ಸಿಕ್ಕಿದ್ದು ಅತ್ಯಮೂಲ್ಯ ವಸ್ತುಗಳು
ಸಮುದ್ರದ ಅಳಿವಿನಂಚಿನ ಪ್ರಭೇದವೆಂದೆ ಹೆಸರುವಾಸಿಯಾದ ಇಂದ್ರಧನುಷ್ ಎಂಬ 130 ಪ್ರಭೇದಗಳನ್ನು ಉತ್ತರ ಪ್ರದೇಶದ ಮಧುಕುಮಾರ್ ಎಂಬಾತ ಯಶವಂತಪುರದ ಆರ್ ಎಂಸಿ ಯಾರ್ಡ್ ಬಳಿ ಸಂಗ್ರಹಿಸಿ ಮಾರಾಟ ಮಾಡುತ್ತಿದ್ದ.
ಬೆಂಗಳೂರು[ಆ.10]: ತಾಯತ ಮಾರುತ್ತಿದ್ದ ವ್ಯಾಪಾರಿಯೊಬ್ಬನ ಬಳಿ ಸಮುದ್ರದ ಅಳಿವಿನಂಚಿನಲ್ಲಿರುವ 130 ಇಂದ್ರಧನುಷ್ ಪ್ರಭೇದಗಳನ್ನು ಬೆಂಗಳೂರು ಆರ್ ಎಂಸಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮಧು ಕುಮಾರ್ ಬಂಧಿತ ಆರೋಪಿ. ಬಂಧಿತನು ಉತ್ತರ ಪ್ರದೇಶದ ಮಥುರಾದ ವ್ಯಾಪಾರಿಯೊಬ್ಬನಿಗೆ ಮಾರಾಟ ಮಾಡಲು ಇಂದ್ರಧನುಷ್ ಪ್ರಭೇದಗಳನ್ನು ಸಂಗ್ರಹಿಸಿಕೊಂಡಿದ್ದ.
ಸಮುದ್ರದಲ್ಲಿ ದೊರಕುವ ಈ ಪ್ರಭೇದಗಳು ಅಳಿವಿನಂಚಿನಲ್ಲಿದ್ದು ಶ್ವೇತ ಹಾಗೂ ಕೆಂಪು ಬಣ್ಣದಲ್ಲಿರುತ್ತವೆ. ಮೃತಪಟ್ಟ ನಂತರ ಹಸಿರು ಬಣ್ಣಕ್ಕೆ ತಿರುಗುತ್ತವೆ. ಬಂಧಿತನ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯಿದೆಯಡಿ ದೂರು ದಾಖಲಿಸಲಾಗಿದೆ.
ಇಂಗ್ಲಿಷ್ ನಲ್ಲಿ ಈ ಸುದ್ದಿ ಓದಲು ಕ್ಲಿಕ್ಕಿಸಿ : Indradhanush sold illegally: Amulet seller caught trading in endangered species