Asianet Suvarna News Asianet Suvarna News

ತಾಯತ ಮಾರುವವನ ಬಳಿ ಸಿಕ್ಕಿದ್ದು ಅತ್ಯಮೂಲ್ಯ ವಸ್ತುಗಳು

ಸಮುದ್ರದ ಅಳಿವಿನಂಚಿನ ಪ್ರಭೇದವೆಂದೆ ಹೆಸರುವಾಸಿಯಾದ ಇಂದ್ರಧನುಷ್ ಎಂಬ 130  ಪ್ರಭೇದಗಳನ್ನು ಉತ್ತರ ಪ್ರದೇಶದ ಮಧುಕುಮಾರ್ ಎಂಬಾತ ಯಶವಂತಪುರದ ಆರ್ ಎಂಸಿ ಯಾರ್ಡ್ ಬಳಿ ಸಂಗ್ರಹಿಸಿ ಮಾರಾಟ ಮಾಡುತ್ತಿದ್ದ. 

Indradhanush sold illegally: Amulet seller caught trading in endangered species
Author
Bengaluru, First Published Aug 10, 2018, 12:20 PM IST

ಬೆಂಗಳೂರು[ಆ.10]:  ತಾಯತ ಮಾರುತ್ತಿದ್ದ ವ್ಯಾಪಾರಿಯೊಬ್ಬನ ಬಳಿ ಸಮುದ್ರದ ಅಳಿವಿನಂಚಿನಲ್ಲಿರುವ 130 ಇಂದ್ರಧನುಷ್ ಪ್ರಭೇದಗಳನ್ನು ಬೆಂಗಳೂರು ಆರ್ ಎಂಸಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. 

ಮಧು ಕುಮಾರ್ ಬಂಧಿತ ಆರೋಪಿ. ಬಂಧಿತನು ಉತ್ತರ ಪ್ರದೇಶದ ಮಥುರಾದ ವ್ಯಾಪಾರಿಯೊಬ್ಬನಿಗೆ ಮಾರಾಟ ಮಾಡಲು ಇಂದ್ರಧನುಷ್ ಪ್ರಭೇದಗಳನ್ನು ಸಂಗ್ರಹಿಸಿಕೊಂಡಿದ್ದ.

ಸಮುದ್ರದಲ್ಲಿ ದೊರಕುವ ಈ ಪ್ರಭೇದಗಳು ಅಳಿವಿನಂಚಿನಲ್ಲಿದ್ದು ಶ್ವೇತ ಹಾಗೂ ಕೆಂಪು ಬಣ್ಣದಲ್ಲಿರುತ್ತವೆ. ಮೃತಪಟ್ಟ ನಂತರ ಹಸಿರು ಬಣ್ಣಕ್ಕೆ ತಿರುಗುತ್ತವೆ. ಬಂಧಿತನ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯಿದೆಯಡಿ ದೂರು ದಾಖಲಿಸಲಾಗಿದೆ. 

ಇಂಗ್ಲಿಷ್ ನಲ್ಲಿ ಈ ಸುದ್ದಿ ಓದಲು ಕ್ಲಿಕ್ಕಿಸಿ : Indradhanush sold illegally: Amulet seller caught trading in endangered species 

Follow Us:
Download App:
  • android
  • ios