ಸಮುದ್ರದ ಅಳಿವಿನಂಚಿನ ಪ್ರಭೇದವೆಂದೆ ಹೆಸರುವಾಸಿಯಾದ ಇಂದ್ರಧನುಷ್ ಎಂಬ 130 ಪ್ರಭೇದಗಳನ್ನು ಉತ್ತರ ಪ್ರದೇಶದ ಮಧುಕುಮಾರ್ ಎಂಬಾತ ಯಶವಂತಪುರದ ಆರ್ ಎಂಸಿ ಯಾರ್ಡ್ ಬಳಿ ಸಂಗ್ರಹಿಸಿ ಮಾರಾಟ ಮಾಡುತ್ತಿದ್ದ.
ಬೆಂಗಳೂರು[ಆ.10]: ತಾಯತ ಮಾರುತ್ತಿದ್ದ ವ್ಯಾಪಾರಿಯೊಬ್ಬನ ಬಳಿ ಸಮುದ್ರದ ಅಳಿವಿನಂಚಿನಲ್ಲಿರುವ 130 ಇಂದ್ರಧನುಷ್ ಪ್ರಭೇದಗಳನ್ನು ಬೆಂಗಳೂರು ಆರ್ ಎಂಸಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಮಧು ಕುಮಾರ್ ಬಂಧಿತ ಆರೋಪಿ. ಬಂಧಿತನು ಉತ್ತರ ಪ್ರದೇಶದ ಮಥುರಾದ ವ್ಯಾಪಾರಿಯೊಬ್ಬನಿಗೆ ಮಾರಾಟ ಮಾಡಲು ಇಂದ್ರಧನುಷ್ ಪ್ರಭೇದಗಳನ್ನು ಸಂಗ್ರಹಿಸಿಕೊಂಡಿದ್ದ.
ಸಮುದ್ರದಲ್ಲಿ ದೊರಕುವ ಈ ಪ್ರಭೇದಗಳು ಅಳಿವಿನಂಚಿನಲ್ಲಿದ್ದು ಶ್ವೇತ ಹಾಗೂ ಕೆಂಪು ಬಣ್ಣದಲ್ಲಿರುತ್ತವೆ. ಮೃತಪಟ್ಟ ನಂತರ ಹಸಿರು ಬಣ್ಣಕ್ಕೆ ತಿರುಗುತ್ತವೆ. ಬಂಧಿತನ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯಿದೆಯಡಿ ದೂರು ದಾಖಲಿಸಲಾಗಿದೆ.
ಇಂಗ್ಲಿಷ್ ನಲ್ಲಿ ಈ ಸುದ್ದಿ ಓದಲು ಕ್ಲಿಕ್ಕಿಸಿ : Indradhanush sold illegally: Amulet seller caught trading in endangered species
