ದನಗಳನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಚಿಕ್ಕಮಗಳೂರಿನ ಕೊಪ್ಪದಲ್ಲಿ ಮಹೀಂದ್ರ ಗೂಡ್ಸ್ ವಾಹನದಲ್ಲಿ ದನಗಳನ್ನು ಸಾಗಿಸಲಾಗುತ್ತಿತ್ತು. ವಾಹನವನ್ನು ತಡೆದ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ಚಿಕ್ಕಮಗಳೂರು (ಆ.23): ಮಹೀಂದ್ರ ಗೂಡ್ಸ್ ವಾಹನದಲ್ಲಿ ಆಕ್ರಮವಾಗಿ ಐದು ದನಗಳನ್ನು ಸಾಗಿಸುತ್ತಿದ್ದ ಇಬ್ಬರನ್ನು ಕೊಪ್ಪ ಪೊಲೀಸರು ವಶಕ್ಕೆ ಪಡೆದು, ದನಗಳನ್ನು ರಕ್ಷಿಸಿದ್ದಾರೆ.
Add Asianetnews Kannada as a Preferred Source

ಮಂಗಳವಾರ ರಾತ್ರಿ ತುಳುವಿನಕೊಪ್ಪ ಗ್ರಾಪಂ ವ್ಯಾಪ್ತಿಯ ತೆಂಗಿನಮನೆಯ ನಿವಾಸಿ ಸತೀಶ್ ಎಂಬುವವರಿಂದ ಎರಡು ಎತ್ತು, ಎರಡು ಹಸು, ಒಂದು ಕರುವನ್ನು ಖರೀದಿ ಮಾಡಿದ ರಾಜು, ಜಯರಾಂ ಎಂಬುವವರು ಎನ್.ಆರ್. ಪುರಕ್ಕೆ ಮಹೇಂದ್ರ ವಾಹನದಲ್ಲಿ ಐದು ದನಗಳನ್ನು ಸಾಗಿಸುತ್ತಿದ್ದರು.
ಚಿಕ್ಕಮಗಳೂರು: ಅತಿವೃಷ್ಟಿ, ಕಾಫಿಗೆ ಕವಡೆ ಕಾಸಿನ ಪರಿಹಾರ
ಪೊಲೀಸರು ಕಾಚ್ಗಲ್ನ ಗಬ್ಬಾನೆ ಬಳಿ ಅಡ್ಡಗಟ್ಟಿವಾಹನ ಹಾಗೂ ಕೃತ್ಯದಲ್ಲಿ ಭಾಗಿಯಾದ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 11/1ಎ ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
