Asianet Suvarna News Asianet Suvarna News

ಜಾರಕಿಹೊಳಿ ಕೇಸ್ ಕೈಬಿಟ್ಟ ಕಲ್ಲಹಳ್ಳಿ ಎಚ್‌​ಡಿಕೆ ವಿರುದ್ಧ ತಿರುಗಿದರು

ರಮೇಶ್ ಜಾರಕಿಹೊಳಿ ರಾಸಲೀಲೆ ಪ್ರಕರಣದ ಬಗ್ಗೆ ಹೋರಾಟ ನಡೆಸುತ್ತಿದ್ದ ದಿನೇಶ್ ಕಲ್ಲಹಳ್ಳಿ ಇದೀಗ ತಮ್ಮ ಕೇಸ್ ವಾಪಸ್ ಪಡೆದಿದ್ದು ಎಚ್‌ಡಿಕೆ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. 

I will Fight Against HD Kumaraswamy Allegation says Activist Dinesh Kallahalli  snr
Author
Bengaluru, First Published Mar 8, 2021, 10:45 AM IST

ರಾಮ​ನ​ಗರ (ಮಾ.08): ಮಾಜಿ ಸಚಿವರ ಸಿ.ಡಿ. ಪ್ರಕ​ರ​ಣ​ದಲ್ಲಿ ನನ್ನ ಧ್ವನಿ ಅಡ​ಗಿ​ಸಲು ಮಾಜಿ ಮುಖ್ಯ​ಮಂತ್ರಿ ಎಚ್‌.​ಡಿ.ಕುಮಾ​ರ​ಸ್ವಾ​ಮಿ ಮಾಡಿ​ರುವ 5 ಕೋಟಿ ರು. ಡೀಲ್‌ ಆರೋ​ಪದ ವಿರುದ್ಧ ಕಾನೂನು ಹೋರಾಟ ನಡೆ​ಸು​ವುದಾಗಿ ಸಾಮಾ​ಜಿಕ ಹೋರಾ​ಟ​ಗಾರ ದಿನೇಶ್‌ ಕಲ್ಲ​ಹಳ್ಳಿ ಹೇಳಿ​ದ​ರು.

ನಗ​ರ​ದಲ್ಲಿ  ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿದ ಅವರು, ಕುಮಾ​ರ​ಸ್ವಾಮಿ ಅವ​ರಿಗೆ ಸಿ.ಡಿ. ಡೀಲ್‌ನ ಸತ್ಯಾಂಶ ಗೊತ್ತಿ​ದ್ದರೆ ಏಕೆ ಬಹಿ​ರಂಗಪಡಿ​ಸು​ತ್ತಿಲ್ಲ. ಆಧಾರ ರಹಿತ ಆರೋಪ ಮಾಡುವ ಮೂಲಕ ನನ್ನ ಹೋರಾ​ಟಕ್ಕೆ ಹಿನ್ನಡೆ ಉಂಟು ಮಾಡಿ​ದ್ದಾರೆ. ಈ ಸಂಬಂಧ ಕಾನೂನು ತಜ್ಞರ ಜತೆ ಚರ್ಚಿಸಿ ಕಾನೂನು ಹೋರಾಟ ನಡೆ​ಸುತ್ತೇನೆ ಎಂದ​ರು.

ಕೋಟಿ ಕೋಟಿ ಡೀಲ್‌... ದೂರು ವಾಪಸ್ ಪಡೆದ ಗುಟ್ಟು ಹೇಳಿದ ದಿನೇಶ್; ವಿಡಿಯೋ

‘ನಾನು ದೂರು ವಾಪಸ್‌ ಪಡೆ​ದಾ​ಕ್ಷಣ ತನಿ​ಖೆಗೆ ಅಡ್ಡಿ​ಯಾ​ಗು​ವು​ದಿಲ್ಲ. ದೂರಿಗೆ ಪೂರ​ಕ​ವಾಗಿ ಏನೆಲ್ಲ ಮಾಹಿತಿ ಅಗ​ತ್ಯ​ವಿದೆಯೋ ಅದನ್ನು ತನಿ​ಖಾ​ಧಿ​ಕಾ​ರಿ​ಗ​ಳಿಗೆ ನೀಡಿ​ದ್ದೇ​ನೆ. ಹೋರಾಟ ನಡೆ​ಸುವವ​ರಿಗೂ ನೈತಿ​ಕತೆ ಇರ​ಬೇಕು. 

ಆರೋಪ ಹೊತ್ತುಕೊಂಡು ಹೋರಾಟ ನಡೆ​ಸು​ವು​ದ​ರ​ಲ್ಲಿ ಅರ್ಥ​ವಿಲ್ಲ. ಸಂತ್ರಸ್ತ ಮಹಿ​ಳೆ ಕುಟುಂಬಕ್ಕೆ ನ್ಯಾಯ ಒದ​ಗಿ​ಸಲು ನನ್ನ ಕೈಲಾದ ಸಹಾಯ ಮಾಡಿ​ದ್ದೇನೆ. ವೈಯ​ಕ್ತಿಕ ಮಾನ​ಹಾನಿ ಸಹಿ​ಸಲು ಸಾಧ್ಯ​ವಾ​ಗು​ತ್ತಿಲ್ಲ. ಕುಮಾ​ರ​ಸ್ವಾಮಿ ಅವ​ರು ಮಾಡಿ​ರುವ ಡೀಲ್‌ ಆರೋ​ಪ​ದಿಂದ ಮುಕ್ತ​ನಾಗಿ ಬಂದು ಹೋರಾಟ ಮುಂದು​ವ​ರೆ​ಸು​ತ್ತೇನೆ’ ಎಂದು ದಿನೇಶ್‌ ಪ್ರಶ್ನೆ​ಯೊಂದಕ್ಕೆ ಉತ್ತ​ರಿ​ಸಿ​ದರು.

Follow Us:
Download App:
  • android
  • ios