Asianet Suvarna News Asianet Suvarna News

ಕಾರ್ಮಿಕರ ಏಳಿಗೆಗೆ ಸದಾ ನನ್ನ ಬೆಂಬಲವಿದೆ: ಶಾಸಕ ಎಚ್‌.ವಿ. ವೆಂಕಟೇಶ್‌

ಮನೆ ಮಂಜೂರಾತಿ, ಸಾಲ ಸೌಲಭ್ಯ ಸೇರಿದಂತೆ ಸಮಸ್ಯೆ ಗಂಭೀರವಾಗಿ ಪರಿಗಣಿಸಿ ವಿವಿಧ ಯೋಜನೆ ಅಡಿಯ ಸರ್ಕಾರದ ಸೌಲಭ್ಯ ಕಲ್ಪಿಸಿಕೊಡುವುದಾಗಿ ಶಾಸಕ ಎಚ್‌.ವಿ. ವೆಂಕಟೇಶ್‌ ಇಲ್ಲಿನ ವಿವಿಧ ವಾಹನಗಳ ಮೆಕ್ಯಾನಿಕ್‌ ವೆಲ್ಪೇರ್‌ ಕಾರ್ಮಿಕರಿಗೆ ಭರವಸೆ ನೀಡಿದರು.

I always support the welfare of workers: MLA snr
Author
First Published Dec 22, 2023, 10:15 AM IST

  ಪಾವಗಡ: ಮನೆ ಮಂಜೂರಾತಿ, ಸಾಲ ಸೌಲಭ್ಯ ಸೇರಿದಂತೆ ಸಮಸ್ಯೆ ಗಂಭೀರವಾಗಿ ಪರಿಗಣಿಸಿ ವಿವಿಧ ಯೋಜನೆ ಅಡಿಯ ಸರ್ಕಾರದ ಸೌಲಭ್ಯ ಕಲ್ಪಿಸಿಕೊಡುವುದಾಗಿ ಶಾಸಕ ಎಚ್‌.ವಿ. ವೆಂಕಟೇಶ್‌ ಇಲ್ಲಿನ ವಿವಿಧ ವಾಹನಗಳ ಮೆಕ್ಯಾನಿಕ್‌ ವೆಲ್ಪೇರ್‌ ಕಾರ್ಮಿಕರಿಗೆ ಭರವಸೆ ನೀಡಿದರು.

ಟ್ರಾಕ್ಟರ್‌ ಹಾಗೂ ಇತರೆ ವಾಹನ ಮೆಕ್ಯಾನಿಕ್‌ ವೆಲ್ಪೇರ್‌ ಆಸೋಷಿಯೇಷನ್‌ ವತಿಯಿಂದ ಪಟ್ಟಣದ ಅಧ್ಯಕ್ಷ ಶಂಕರಪ್ಪ ಗ್ಯಾರೇಜ್ ಆವರಣದಲ್ಲಿ ಹಮ್ಮಿಕೊಂಡಿದ್ದ ಶಾಸಕರ ಅಭಿನಂದನಾ ಕಾರ್ಯಕ್ರಮದ ಉದ್ಘಾಟನೆ ನೆರೆವೇರಿಸಿದ ಬಳಿಕ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ರೈತರು ಹಾಗೂ ಆಟೋ, ಕಾರು, ಟ್ರಾಕ್ಟರ್‌, ಲಾರಿ ಹಾಗೂ ಇತರೆ ವಿವಿಧ ವಲಯಗಳ ಕಾರ್ಮಿಕ ಮತ್ತು ಮೆಕ್ಯಾನಿಕ್‌ ಕೆಲಸಗಾರರ ಬಗ್ಗೆ ಅಪಾರ ಗೌರವವಿದೆ. ದುಡಿಮೆ ಕ್ಷೇತ್ರದಲ್ಲಿ ಕೆಲಸ ಮಾಡುವ ಕೈಗಳ ಪರ ನನ್ನ ನಿಲುವು ಹೊಂದಿದ್ದು, ಅವರ ಸಾಮಾಜಿಕ ಮತ್ತು ಅರ್ಥಿಕ ಪ್ರಗತಿಗೆ ಸದಾ ಸಹಕಾರವಿರುತ್ತದೆ. ಸರ್ಕಾರದ ವಿವಿಧ ಯೋಜನೆ ಅಡಿ ಸೌಲಭ್ಯ ಕಲ್ಪಿಸುವ ಮೂಲಕ ನಿಮ್ಮ ಸಮಸ್ಯೆಗೆ ಸ್ಪಂಧಿಸುವುದಾಗಿ ಭರವಸೆ ನೀಡಿದರು.

ಈ ವೇಳೆ ಮಾಜಿ ಪುರಸಭೆ ಅಧ್ಯಕ್ಷ ಎ. ಶಂಕರರೆಡ್ಡಿ, ಶ್ರೀ ಸಿದ್ಧಾರ್ಥ ಟ್ರಸ್ಟ್‌ನ ಕಾರ್ಯದರ್ಶಿ ಹಾಗೂ ಮುಖಂಡರಾದ ಬತ್ತಿನೇನಿ ನಾಗೇಂದ್ರರಾವ್‌ ಪುರಸಭಾ ಸದಸ್ಯ ಮೊಹಮ್ಮದ್ ಇಮ್ರಾನ್, ಮುಖಂಡರಾದ ರೊಪ್ಪ ಗ್ರಾಪಂ ಮಾಜಿ ಅಧ್ಯಕ್ಷ ತಿಪ್ಪೇಸ್ವಾಮಿ, ಖಾಲೀದ್ ಅಹಮದ್‌, ಅನಿಲ್‌ ಎಚ್‌ಕೆಜಿಎನ್‌ ಸೆಂಟರ್‌ ಮಾಲೀಕ ಇದಾಯತ್, ಯೂನಸ್, ಬಾಲು, ಮಂಜುನಾಥ್, ಸಂಜೀವ್ ರೆಡ್ಡಿ ಹಾಗೂ ಇತರೆ ಆನೇಕ ಮಂದಿ ಅನೇಕ ಮುಖಂಡರು ಇದ್ದರು.

ಕಾರ್ಮಿಕನ ಮಗನ ಯಶೋಗಾಥೆ

Business Desk: ಸ್ವಂತ ಪರಿಶ್ರಮದಿಂದ ಮೇಲೇರಿದವರ ಕಥೆಗಳು ಯಾವಾಗಲೂ ವಿಶೇಷವಾಗಿರುವ ಜೊತೆಗೆ ಪ್ರೇರಣೆ ಕೂಡ ನೀಡುತ್ತವೆ. ಇಂಥ ವ್ಯಕ್ತಿಗಳು ಬದುಕಿನಲ್ಲಿ ಸಾಕಷ್ಟು ಏರಿಳಿತಗಳನ್ನು ಅನುಭವಿಸಿರುತ್ತಾರೆ. ಆದರೆ, ಏನಾದರೂ ಸಾಧಿಸಬೇಕೆಂಬ ಛಲವನ್ನು ಮಾತ್ರ ಇವರು ಬಿಡೋದಿಲ್ಲ. ಕೊನೆಗೆ ಇವರ ಇದೇ ನಿಲುವು ಯಶಸ್ಸನ್ನು ಧಕ್ಕಿಸಿಕೊಡುತ್ತದೆ. ಹೀಗೆ ಬಾಲ್ಯದಿಂದಲೇ ಹಣಕಾಸಿನ ಸಮಸ್ಯೆಗಳನ್ನು ಎದುರಿಸುತ್ತ ಅದಕ್ಕೊಂದು ಪರಿಹಾರ ಕಂಡುಕೊಳ್ಳುತ್ತ ಇಂದು ಯಶಸ್ಸಿನ ಹಾದಿಯಲ್ಲಿ ಮುನ್ನಡೆಯುತ್ತಿರೋರಲ್ಲಿ ಐಡಿ ಫ್ರೆಶ್ ಫುಡ್  ಸಿಇಒ ಪಿ.ಸಿ.ಮುಸ್ತಫಾ ಕೂಡ ಒಬ್ಬರು. ಯಾವುದೇ ಉದ್ಯಮ ಹಿನ್ನೆಲೆಯಿಲ್ಲದೆ, ಹಣಕಾಸಿನ ಬೆಂಬಲವೂ ಇಲ್ಲದೆ ಇಂದು  3,000 ಕೋಟಿ ರೂ. ಮೌಲ್ಯದ ಕಂಪನಿಯನ್ನು ಮುಸ್ತಫಾಕಟ್ಟಿದ್ದಾರೆ. ಕೇರಳದ ವೈನಾಡಿನ ಬಡ ಕುಟುಂಬದಲ್ಲಿ ಜನಿಸಿ ಇಂದು ಕೋಟ್ಯಾಧಿಪತಿಯಾಗಿರುವ ಬೆಳೆದಿರುವ ಮುಸ್ತಫಾ ಅವರ ಕಥೆ ಯುವಜನರಿಗೆ ನಿಜಕ್ಕೂ ಪ್ರೇರಣೆ ನೀಡುವಂಥದ್ದು.

ದಿನಕ್ಕೆ 10ರೂ. ಸಂಪಾದಿಸುತ್ತಿದ್ದ ತಂದೆ
ಕೇರಳದ ವೈನಾಡಿನ ಬಡ ಕುಟುಂಬದಲ್ಲಿ ಜನಿಸಿದ ಮುಸ್ತಫಾಗೆ, ಬಾಲ್ಯದಲ್ಲಿ ಒಂದು ಹೊತ್ತಿನ ಊಟಕ್ಕೂ ಪರದಾಡುವಂತಹ ಪರಿಸ್ಥಿತಿಯಿತ್ತು. ಅವರ ತಂದೆ ಶುಂಠಿ ತೋಟದಲ್ಲಿ ದಿನಗೂಲಿ ನೌಕರರಾಗಿದ್ದರು. ಅವರ ಕೂಲಿ ದಿನಕ್ಕೆ ಕೇವಲ 10ರೂ. ಈ ಹಣದಲ್ಲೇ ಇಡೀ ಕುಟುಂಬದ ನಿರ್ವಹಣೆ ಮಾಡಬೇಕಿತ್ತು. ಹೀಗಾಗಿ ಮುಸ್ತಫಾ ಹಾಗೂ ಅವರ ಸಹೋದರರು ಕೂಡ ಕಟ್ಟಿಗೆ ಮಾರಾಟ ಸೇರಿದಂತೆ ಸಣ್ಣಪುಟ್ಟ ಕೆಲಸಗಳನ್ನು ಮಾಡೋದು ಅನಿವಾರ್ಯವಾಗಿತ್ತು. ಮುಸ್ತಫಾಕೂಡ ಶಾಲೆಯ ಅವಧಿ ಮುಗಿದ ಬಳಿಕ ಇಂಥ ಸಣ್ಣಪುಟ್ಟ ಕೆಲಸಗಳನ್ನು ಮಾಡಿ ಕುಟುಂಬಕ್ಕೆ ನೆರವಾಗುತ್ತಿದ್ದರು. ಅಲ್ಲದೆ, ದುಡಿದ ಹಣದಲ್ಲಿ ಸ್ವಲ್ಪ ಮೊತ್ತವನ್ನು ಉಳಿತಾಯ ಮಾಡುತ್ತಿದ್ದರು. ಹೀಗೆ ಉಳಿತಾಯ ಮಾಡಿದ ಹಣದಲ್ಲಿ ಮುಸ್ತಫಾ ಒಂದು ಮೇಕೆ ಖರೀದಿಸಿದರು. ಇದು ಅವರ ಕುಟುಂಬದ ಮೊದಲ ಆಸ್ತಿಯಾಗಿತ್ತು. ಆ ಬಳಿಕ ಮೇಕೆ ಮಾರಿ ಹಸುವನ್ನು ಖರೀದಿಸಿದರು. ಈ ಹಸುವಿನ ಹಾಲನ್ನು ಮಾರಿ ಬಂದ ಹಣದಿಂದ ಅವರ ಕುಟುಂಬ ಮೂರು ಹೊತ್ತು ಹೊಟ್ಟೆ ತುಂಬಾ ಊಟ ಮಾಡಲು ಸಾಧ್ಯವಾಯಿತು. 

ಕೇವಲ 50 ರೂ. ಇಟ್ಕೊಂಡು ಭಾರತ ತೊರೆದ ವ್ಯಕ್ತಿಯೀಗ 15,000 ಕೋಟಿಯ ಮಾಲೀಕ!

ಎನ್ ಐಟಿಯಲ್ಲಿ ಪದವಿ
ಪಾರ್ಟ್ ಟೈಂ ಉದ್ಯೋಗ ಕೂಡ ಮಾಡಿಕೊಂಡೇ ವಿದ್ಯಾಭ್ಯಾಸ ಮುಂದುವರಿಸಿದ್ದ ಮುಸ್ತಫಾ, ಒಂದಿಷ್ಟು ಹಣವನ್ನು ಉಳಿತಾಯ ಹಾಗೂ ಸಣ್ಣ ಹೂಡಿಕೆ ಮಾಡಿದ್ದರು. ಈ ಹಣವೇ ಅವರಿಗೆ ರಾಷ್ಟ್ರೀಯ ತಾಂತ್ರಿಕ ವಿದ್ಯಾಲಯದಲ್ಲಿ (ಎನ್ ಐಟಿ) ಕಂಪ್ಯೂಟರ್ ಸೈನ್ಸ್ ನಲ್ಲಿ ಪದವಿ ಪಡೆಯಲು ನೆರವು ನೀಡಿತು. ಪದವಿ ಬಳಿಕ  ಮುಸ್ತಫಾ ಮೋಟೋರೋಲಾದಲ್ಲಿ ಐಟಿ ಉದ್ಯೋಗ ಗಿಟ್ಟಿಸಿಕೊಂಡರು. ನಂತರ ದುಬೈನಲ್ಲಿ ಸಿಟಿಬ್ಯಾಂಕ್ ನಲ್ಲಿ ಉದ್ಯೋಗ ದೊರಕಿತು

ಉದ್ಯೋಗ ತೊರೆದು ಐಐಎಂನಲ್ಲಿ ಎಂಬಿಎ
ದುಬೈನಲ್ಲಿನ ಉದ್ಯೋಗ ತೊರೆದು ಭಾರತಕ್ಕೆ ಹಿಂತಿರುಗಿದ ಮುಸ್ತಫಾ, ಬೆಂಗಳೂರು ಐಐಎಂನಲ್ಲಿ ಎಂಬಿಎ ಪದವಿ ಪಡೆಯುತ್ತಾರೆ. ಎಂಬಿಎ ಮಾಡುತ್ತಿರುವ ಸಂದರ್ಭದಲ್ಲೇ ಸಹೋದರ ಸಂಬಂಧಿಗಳ ಜೊತೆಗೆ ಸೇರಿ ದೋಸೆ ಹಾಗೂ ಇಡ್ಲಿ ಹಿಟ್ಟು ಉತ್ಪಾದಿಸುವ ಉದ್ಯಮಕ್ಕೆ ಕೈಹಾಕುತ್ತಾರೆ.

14ನೇ ವಯಸ್ಸಿಗೆ ಕಂಪನಿ ಸ್ಥಾಪನೆ,17ಕ್ಕೆ ವಿಶ್ವದ ಅತೀ ಕಿರಿಯ ಸಿಇಒ ಪಟ್ಟ;ಬೆಂಗಳೂರಿನ ಈ ಹುಡುಗ ಹಲವರಿಗೆ ಪ್ರೇರಣೆ

ಬ್ರೇಕ್ ಫಾಸ್ಟ್ ಫುಡ್ ಕಂಪನಿ
ಸಂಬಂಧಿಗಳ ಜೊತೆಗೆ ಸೇರಿ ರೆಡಿ-ಟು-ಈಟ್ ಪ್ಯಾಕೇಜ್ಡ್ ಫುಡ್ ಗಳನ್ನು ಪೂರೈಕೆ ಮಾಡುವ 'ಐಡಿ ಫ್ರೆಶ್ ಫುಡ್ಸ್' ಎಂಬ ಬ್ರೇಕ್ ಫಾಸ್ಟ್ ಫುಡ್ ಕಂಪನಿ ಪ್ರಾರಂಭಿಸುತ್ತಾರೆ. ಈ ಕಂಪನಿಯನ್ನು ಕೇವಲ 50 ಸಾವಿರ ರೂ. ಬಂಡವಾಳದೊಂದಿಗೆ ಪ್ರಾರಂಭಿಸುತ್ತಾರೆ. ಆ ಬಳಿಕ ಇಡ್ಲಿ ಹಾಗೂ ದೋಸೆ ಹಿಟ್ಟನ್ನು ಕೂಡ ಈ ಕಂಪನಿ ಪೂರೈಕೆ ಮಾಡಲು ಪ್ರಾರಂಭಿಸುತ್ತದೆ. ಪ್ರಾರಂಭದಲ್ಲಿ ಈ ಪ್ಯಾಕ್ಡ್ ಫುಡ್ ತಿನಿಸುಗಳಿಗೆ ಉತ್ತಮ ಮಾರುಕಟ್ಟೆ ದೊರೆಯಲಿಲ್ಲ. ಪ್ಯಾಕ್ ನಲ್ಲಿರುವ ಆಹಾರ ಆರೋಗ್ಯಕರವಲ್ಲ ಎಂಬ ಭಾವನೆ ಭಾರತೀಯರಲ್ಲಿ ಹೆಚ್ಚಾಗಿರುವ ಕಾರಣ ಯಾರೂ ಕೂಡ ಅದನ್ನು ಖರೀದಿಸುತ್ತಿರಲಿಲ್ಲ. ಮಾರುಕಟ್ಟೆಗೆ 10 ಪ್ಯಾಕೇಟ್ ಕಳುಹಿಸಿದರೆ, 90 ಹಿಂತಿರುಗಿ ಬರುತ್ತಿತ್ತು ಎನ್ನುತ್ತಾರೆ ಮುಸ್ತಫಾ. 

Latest Videos
Follow Us:
Download App:
  • android
  • ios