Asianet Suvarna News Asianet Suvarna News

ಹೋಮ-ಹವನ ನಡೆಯುವ ಸ್ಥಳದಲ್ಲಿ ನಾನ್ ವೆಜ್, ವಿವಾದ ಕಿಡಿಹೊತ್ತಿಸಿದ ಬಿರಿಯಾನಿ

* ಮುಸ್ಲಿಂರಿಂದ ಗೋರಿ ಪೂಜೆ, ಹಿಂದೂ ಗಳು ನಡೆಸುವ ಸ್ಥಳದಲ್ಲಿ ಬಿರಿಯಾನಿ 
* ಚಿಕ್ಕಮಗಳೂರಿನ ವಿವಾದಿತ ಕೇಂದ್ರ ದತ್ತಪೀಠದಲ್ಲಿ ಕಾನೂನು ಗಾಳಿಗೆ 
* ಪೀಠದ ಆವರಣದಲ್ಲಿ ಮಾಂಸ ಭಕ್ಷಣೆ ಖಂಡಿಸಿ ಪ್ರತಿಭಟನೆ 
* ಕೋರ್ಟ್ ಆದೇಶ ಗಾಳಿ ತೋರಿದ ಅಧಿಕಾರಿಗಳು

Hindus Protest Against Muslim Over non veg prepared in pooja place at dattapeetha rbj
Author
Bengaluru, First Published May 16, 2022, 6:27 PM IST

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು 

ಚಿಕ್ಕಮಗಳೂರು, (ಮೇ.16):
ಹಿಂದೂ ಮುಸ್ಲಿಮರ ವಿವಾದಿತ ಕೇಂದ್ರವಾದ ಚಿಕ್ಕಮಗಳೂರಿನ  ಇನಾಂ ದತ್ತಾತ್ರೇಯ ಪೀಠದಲ್ಲಿ ಕೋರ್ಟ್ ಆದೇಶವನ್ನು ಅಧಿಕಾರಿಗಳು ಗಾಳಿಗೆ ತೂರಿದ್ದಾರೆ. ವಿವಾದಿತ ಜಾಗದಲ್ಲಿ ಕೋರ್ಟ್ ಆದೇಶ ಉಲ್ಲಂಘನೆ ಮಾಡಿ  ಗೋರಿಗಳಿಗೆ ಪೂಜೆ ಪುನಸ್ಕಾರ ಮಾಡಲಾಗಿದೆ.  ಮುಸ್ಲಿಂ ಭಕ್ತರಿಗೆ ಗೋರಿಗಳಿಗೆ ಪೂಜೆ  ಸಲ್ಲಿಸಲು ಅವಕಾಶ ನೀಡುವುದು ಆಕ್ರೋಶಕ್ಕೆ ಕಾರಣವಾಗಿದೆ.  ಹೋಮ ಹವನ ನಡೆಯುವ ಸ್ಥಳದಲ್ಲಿ ಬಿರಿಯಾನಿ ಭಕ್ಷಣೆ ಮಾಡಿರುವುದು ಇದೀಗ ವಿವಾದ ಕಿಡಿಹೊತ್ತಿಸಿದೆ....

 ಮಾಂಸದ ಹೊಗೆ
ದತ್ತಪೀಠದಲ್ಲಿ ದತ್ತಜಯಂತಿಯ ಸಮಯದಲ್ಲಿ  ಹೋಮ ನಡೆಸೋ ತಾತ್ಕಾಲಿಕ ಶೆಡ್ ನಲ್ಲಿ ನಾನ್ ವೆಜ್ ಊಟ ಮಾಡ್ತಾ ಇರೋ ವಿಡಿಯೋ ವೈರಲ್ ಅಗಿದೆ..ವೈರಲ್ ಅಗ್ತಾ ಇದ್ದಂತೆ ಹಿಂದೂ ಪರಸಂಘಟನೆಗಳ ತೀವ್ರ ಆಕ್ರೋಶವನ್ನು ಹೊರಹಾಕಿದ್ದಾರೆ. ದೇಶದ ವಿವಾದಿತ ಕೇಂದ್ರವಾಗಿರೋ ಇನಾಂ ದತ್ತಾತ್ರೇಯ ಪೀಠದಲ್ಲಿ ರಸ್ತೆಯಲ್ಲಿ ನಾನ್ ವೆಜ್  ಅಡುಗೆ ಮಾಡಿ ಪೀಠದಲ್ಲಿರೋ ಹೋಮಮಂಟಪದಲ್ಲಿ ನಾನ್ ವೆಜ್ ಊಟ ಮಾಡ್ತಾ ಇರೋ ವಿಡಿಯೋ ವೈರಲ್ ಅಗಿದೆ..ವೈರಲ್ ಅಗ್ತಾ ಇದ್ದಂತೆ ಹಿಂದೂ ಪರಸಂಘಟನೆಗಳು ಅಕ್ರೋಶ ವ್ಯಕ್ತಪಡಿಸಿ ದತ್ತಪೀಠದಲ್ಲಿಯೇ ಪ್ರತಿಭಟನೆ ನಡೆಸಿದ್ವು..ಮಾಂಸಹಾರ ಊಟಕ್ಕೆ ಅವಕಾಶ ನೀಡಿದ್ದಾರೆ ಅಂತಾ ಮುಜಾರಾಯಿ ಇಲಾಖೆಯ ವಿರುದ್ದವೇ ಹರಿಹಾಯ್ದರು. 

ಪೀಠದ ಆವರಣ, ತಾತ್ಕಲಿಕ ಶೆಡ್ ನಲ್ಲಿ ಮಾಂಸ ಬೇಯಿಸುವ ಮೂಲಕ ದತ್ತಪೀಠವನ್ನು  ಅಪವಿತ್ರಗೊಳಿಸಿದ್ದಾರೆ.  ದತ್ತ ಜಯಂತಿ ಸಮಯದಲ್ಲಿ ಹೋಮದ ಹೊಗೆ, ಬೇರೆ ಸಮಯದಲ್ಲಿ ಮಾಂಸದ ಹೊಗೆ ಬರುತ್ತೆ ಎಂದು ಬಜರಂಗದಳದ ಮುಖಂಡರು ಕಿಡಿಕಾರಿದ್ದಾರೆ. ಮುಂದಿನ ದತ್ತ ಜಯಂತಿಯ ಹೋಮವನ್ನು ತಾತ್ಕಾಲಿಕ ಶೆಡ್ ನಲ್ಲಿ ಮಾಡುವುದಿಲ್ಲ ಗುಹೆ ಸಮೀಪದ ತುಳಸಿಕಟ್ಟೆ ಬಳಿ ಹೋಮ ಮಾಡುತ್ತೇವೆ ಎಂದು ಭಜರಂಗದಳದ ಪ್ರಾಂತ್ಯ ಸಂಚಾಲಕ ರಘು ಸಕಲೇಶಪುರ ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ತಿಳಿಸಿದ್ದಾರೆ. 

ದತ್ತಪೀಠದಲ್ಲಿ ವಿವಾದಿತ ಗೋರಿಗಳಿಗೆ ಪೂಜೆ 
ಇನ್ನೂ ಮಾಂಸದೂಟ ಮಾಡಿರೋದನ್ನು ಖಂಡಿಸಿರೋ ಹಿಂದೂ ಪರಸಂಘಟನೆಗಳು ಮುಂದಿನ ದತ್ತಜಯಂತಿಯಲ್ಲಿ ತಾತ್ಕಲಿಕ ಶೆಡ್ ನಲ್ಲಿ ಹೋಮ ನಡೆಸೋದಿಲ್ಲ ಗುಹೆಯ ಪಕ್ಕದಲ್ಲಿರೋ ತುಳಸಿಕಟ್ಟೆಯಲ್ಲಿ ಹೋಮ ನಡೆಸುವ ಎಚ್ಚರಿಕೆಯನ್ನು ನೀಡಿದ್ದಾರೆ..ಕೋರ್ಟ್ ಸೂಚನೆಯಿದ್ರು ನಾನ್ ವೆಜ್ ಮಾಡೋಕೆ ಅನುಮತಿ ನೀಡಿದ್ದೋರಿಗೂ ಅಲ್ಲಿ ಮಾಂಸದೂಟ ಮಾಡಿದ್ದೋರಿಗೂ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿಗೂ ಮನವಿ ಸಲ್ಲಿಸಿದ್ದಾರೆ. ಇದ್ರ ನಡುವೆ ಶ್ರೀರಾಮಸೇನೆಯಿಂದ ಗೋಮೂತ್ರದಲ್ಲಿ ದತ್ತಪೀಠ ಸ್ವಚ್ಚತೆ ಮಾಡೋದಕ್ಕೆ ಮುಂದಾಗಿದೆ..ಅಲ್ಲದೆ ವಿವಾದಿತ ದತ್ತಪೀಠದಲ್ಲಿ ಇರುವ ಗೋರಿಗಳಿಗೆ ಪೂಜೆ ಪುನಸ್ಕಾರ ಅವಕಾಶ ಮಾಡಿಕೊಟ್ಟಿರುವ ಕ್ರಮವನ್ನು ಹಿಂದೂಪರ ಸಂಘಟನೆಯ ಮುಖಂಡರು ಖಂಡಿಸಿದ್ದಾರೆ. ವಿವಾದಿತ ಸ್ಥಳದಲ್ಲಿ  ಮುಸ್ಲಿಂ ಭಕ್ತರಿಗೆ ಗೋರಿಗಳಿಗೆ ಪೂಜೆ  ಸಲ್ಲಿಸಲು ಅವಕಾಶ ನೀಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 

200ಮೀಟರ್ ಸುತ್ತಮುತ್ತ ಮಾಂಸಾಹಾರ ನಿಷೇಧ
1999ರಲ್ಲಿ ಮುಜರಾಯಿ ಕಮಿಷನ್ ನ ಕೋರ್ಟ್ ತೀರ್ಪು ನ ಪ್ರಕಾರವೇ ದತ್ತಪೀಠದಲ್ಲಿ ಪೂಜಾ ವಿಧಿವಿಧಾನ ನಡೆಯಬೇಕು, ಸರ್ಕಾರ, ಜಿಲ್ಲಾಡಳಿತದಿಂದ ನೇಮಿಸಲ್ಪಟ್ಟ ವ್ಯಕ್ತಿಯಿಂದ ಮಾತ್ರ ಪೂಜೆಗೆ ಅವಕಾಶವಿದ್ದು ಮುಜರಾಯಿ ಕಮಿಷನ್ ನೀಡಿದ ತೀರ್ಪಯೇ ಹೈಕೋರ್ಟ್ ತೀರ್ಪಿನಲ್ಲಿ ಉಲ್ಲೇಖವಾಗಿದೆ. 2010ರಲ್ಲಿ ಸುಪ್ರೀಂ ಕೋರ್ಟ್ ಕೂಡ 1999ರ ಪೂಜಾ ಪದ್ದತಿ ಪಾಲನೆಗೆ ಸೂಚನೆ ನೀಡಲಾಗಿದೆ. ಸರ್ಕಾರ ಜಿಲ್ಲಾಡಳಿತದಿಂದ ನೇಮಿಸಲ್ಪಟ್ಟ ಮುಜಾವರ್  ಅವರಿಂದ ಮಾತ್ರ ದತ್ತಗುಹೆ, ಗೋರಿಗಳಿಗೆ ಪೂಜೆಗೆ ಅವಕಾಶವಿದ್ದು ಮುಜಾವರ್ ಪಾದುಕೆ, ಗೋರಿಗಳಿಗೆ ಪೂಜೆ ಸಲ್ಲಿಸುತ್ತಾರೆ. ಅನ್ಯ ವ್ಯಕ್ತಿಗಳಿಗೆ ಪೂಜಾ ಪುನಸ್ಕಾರಕ್ಕೆ ಅವಕಾಶವಿಲ್ಲ ಜೊತೆಗೆ ದತ್ತಜಯಂತಿ ಸಮಯದಲ್ಲಿ ಸ್ವಾಮೀಜಿಗಳಿಂದ ದತ್ತಪಾದುಕೆ ಪೂಜೆಗೆ ಅವಕಾಶಕ್ಕೆ ನೀಡುವಂತೆ  ಒತ್ತಾಯಿಸಿ ಹಲವು ಬಾರಿ ಪ್ರತಿಭಟನೆ ನಡೆಸಿರುವ ನಿದೇರ್ಶನವೂ ಇದೆ. ಇದರ ಜೊತೆಗೆ ದತ್ತಪೀಠದಲ್ಲಿ ಮುಜರಾಯಿ ಇಲಾಖೆಯ ನಿಯಮದಂತೆ 200ಮೀಟರ್ ಸುತ್ತಮುತ್ತ ಯಾವುದೇ ಮಾಂಸಾಹಾರ ಮಾಡುವುದು ನಿಷೇಧವೂ ಜಾರಿಯಲ್ಲೂ ಇದ್ದರೂ ಬಿರಿಯಾನಿ ಭೀಕ್ಷಣೆ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ. 

ತಾತ್ಕಾಲಿಕ್ ಶೆಡ್ ನ್ನು ಸ್ವಚ್ಚಗೊಳಿಸಿದ ಜಿಲ್ಲಾಡಳಿತ 
ವಿವಾದಿತ ಸ್ಥಳದಲ್ಲಿ ಗೋರಿಗಳಿಗೆ ಪೂಜೆ,ಮಾಂಸದೂಟ ಪ್ರಕರಣದಲ್ಲಿ ಕೊನೆಗೂ ಜಿಲ್ಲಾಡಳಿತ  ಎಚ್ಚೇತುಗೊಂಡಿದೆ. ದತ್ತಜಯಂತಿ ಸಮಯದಲ್ಲಿ ಹೋಮ ಹವನ ನಡೆಯುವ ಸ್ಥಳದಲ್ಲಿ ಬಿರಿಯಾನಿ ಭೀಕ್ಷಣೆ ಯಿಂದ ಅಪವಿತ್ರಗೊಂಡಿದ್ದ ಜಾಗವನ್ನು ಜಿಲ್ಲಾಡಳಿತ ಕ್ಲೀನ್ ಮಾಡಿದೆ. ಬ್ಲೀಚಿಂಗ್ ಪೌಡರ್ ಸ್ವಚ್ಚಗೊಳಿಸಿರುವ ಸಿಬ್ಬಂದಿಗಳಿಗೆ ಈಗ ಆ ಸ್ಥಳದಲ್ಲಿ ಯಾರಿಗೂ ಅವಕಾಶವನ್ನು ನೀಡುತ್ತಿಲ್ಲ, ಏಷ್ಯಾನೆಟ್ ಸುವರ್ಣ ನ್ಯೂಸ್ ನಲ್ಲಿ ಸುದ್ದಿ ಪ್ರಸಾವಾದ ಬಳಿಕ ಸ್ಥಳವನ್ನು ಜಿಲ್ಲಾಡಳಿತ ಸ್ವಚ್ಛಗೊಳಿಸಿದೆ. ಅಲ್ಲದೆ ಪ್ರಕರಣವನ್ನು ಖಂಡಿಸಿ ವಿಶ್ವಹಿಂದೂ ಪರಿಷತ್ ಬಜರಂಗದಳದ ಕಾರ್ಯಕರ್ತರು ದತ್ತಪೀಠದಲ್ಲಿ ಕೆಲ ಕಾಲ ಪ್ರತಿಭಟನೆ ನಡೆಸಿ ಸೂಕ್ತ ಕ್ರಮಕ್ಕೆ ಒತ್ತಾಯಿಸಿದರು. 

ಒಟ್ಟಾರೆ ಮಾಂಸದೂಟದ ವಿಡಿಯೋ ವೈರಲ್ ಅಗ್ತಾ ಇದ್ದಂತೆ ರಾಜ್ಯಾದ್ಯಂತ ಹಿಂದೂ ಪರಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ..ಜಿಲ್ಲಾಧಿಕಾರಿಗೂ ಮನವಿ ಸಲ್ಲಿಸಲಾಗಿದ್ದು ಕ್ರಮಕೈಗೊಳ್ಳುವಂತೆ ಅಗ್ರಹಿಸಲಾಗಿದೆ..ಈ ಪ್ರಕರಣ ಇಲ್ಲಿಗೆ ನಿಲ್ಲುತ್ತೋ ಇಲ್ವೋ ಮತ್ತೆ ವಿವಾದಕ್ಕೆ ಕಾರಣವಾಗುತ್ತಾ ಅನ್ನೋದನ್ನ ಕಾದುನೋಡಬೇಕಾಗಿದೆ..

Follow Us:
Download App:
  • android
  • ios