ಸವದತ್ತಿ ಎಲ್ಲಮ್ಮನ ಸನ್ನಿಧಾನದಲ್ಲಿ ಧಾರಾಕಾರ ಮಳೆ ಸುರಿದಿದೆ. ಮಳೆಯಿಂದ ಸಂಪೂರ್ಣ ಪ್ರದೇಶ ಜಲಾವೃತವಾದಂತಾಗಿದೆ.

ಬೆಳಗಾವಿ [ಜೂ.20] : ಬೆಳಗಾವಿ ಜಿಲ್ಲೆಯಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗಿದೆ. ಇಷ್ಟು ದಿನಗಳ ಬಿಸಿಲ ಬೇಗೆಯಿಂದ ಕಂಗೆಟ್ಟಿದ್ದ ಸವದತ್ತಿಯ ಜನತೆಗೆ ವರ್ಷಧಾರೆ ತಂಪೆರೆದಿದೆ.

Add Asianetnews Kannada as a Preferred SourcegooglePreferred

ಸವದತ್ತಿ ಯಲ್ಲಮ್ಮ‌‌ ಸನ್ನಿದಿಯಲ್ಲಿ ಧಾರಾಕಾರ ಮಳೆಯಾಗಿದೆ. ಅತೀ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿದ ಪರಿಣಾಮ ಎಲ್ಲೆಡೆ ನದಿಯಂತೆ ನೀರಿನ ಹರಿವು ಹೆಚ್ಚಳವಾಗಿದೆ.

ಕೊಡಗಿನಲ್ಲಿ ಮಳೆಗಾಲದಲ್ಲಿ ಈ ವಾಹನಗಳಿಗೆ ನಿಷೇಧ

ಬೇಸಿಗೆಯಿಂದ ಕುಡಿಯುವ ನೀರಿಗೂ ಪರದಾಡುವ ಸ್ಥಿತಿ ಈ ಪ್ರದೇಶಗಳಲ್ಲಿ ಎದುರಾಗಿದ್ದು, ಆದರೆ ಇದೀಗ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಭಾರೀ ಮಳೆಯಿಂದಾಗಿ ಯಲ್ಲಮ್ಮ ದೇವಾಲಯದ ಕೋಡಿ ತುಂಬಿ ಹರಿದಿದೆ.

ಮಾನ್ಸೂನ್ ಶುರುವಾಗ್ತಿದೆ , ಆರೋಗ್ಯ ಹೇಗ್ ನೋಡ್ಕೊಬೇಕು?