Asianet Suvarna News Asianet Suvarna News

ಕಾಲಕಾಲಕ್ಕೆ ಬದಲಾವಣೆ ಅನಿವಾರ್ಯ : HD ರೇವಣ್ಣ

ಕಾಲ ಕಾಲಕ್ಕೆ ಬದಲಾವಣೆ ಅನಿವಾರ್ಯವಾಗಿದ್ದು, ನಮ್ಮ ಕಾರ್ಯಕರ್ತರನ್ನು ಹೇಗೆ ರಕ್ಷಣೆ ಮಾಡಬೇಕು ಎನ್ನುವುದು ನಮಗೆ ತಿಳಿದಿದೆ ಎಂದು ಜೆಡಿಎಸ್ ಮುಖಂಡ ಎಚ್.ಡಿ.ರೇವಣ್ಣ ಹೇಳಿದ್ದಾರೆ. 

HD Kumaraswamy Development Works Should Reach People Says HD Revanna
Author
Bengaluru, First Published Sep 6, 2019, 2:34 PM IST

ಬೇಲೂರು [ಸೆ.06]: ರಾಜ್ಯದಲ್ಲಿ ಜೆಡಿಎಸ್‌ಗೆ ಅಧಿಕಾರ ಇಲ್ಲ ಎಂದು ಕಾರ್ಯಕರ್ತರು ಧೃತಿಗೆಡಬಾರದು. ರಾಜ್ಯದಲ್ಲಿ ನಮ್ಮ ಜೆಡಿಎಸ್ ಪಕ್ಷದ ಕಾರ್ಯಕರ್ತರನ್ನು ಹೇಗೆ ರಕ್ಷಣೆ ಮಾಡಬೇಕು ಎಂಬುದು ನಮಗೆ ಗೊತ್ತು ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಹೇಳಿದರು.

ಕಾಲಕಾಲಕ್ಕೆ ಸಂಘಟನೆ ಮಾಡುವ ವೈಖರಿ ಗಳು ಬದಲಾವಣೆಯಾಗುತ್ತಾ ಹೋಗಬೇಕು. ಈಗಾಗಲೇ ತಾಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಬದಲಾವಣೆಗಳಿಗೆ ಮುಂದಾಗಿದೆ. ಕುಮಾರಸ್ವಾಮಿ ಅವರ ಅಧಿಕಾರ ಅವಧಿಯಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳನ್ನು ಜನತೆಗೆ ಮನವರಿಕೆ ಮಾಡುವಲ್ಲಿ ಮುಂದಾಗಬೇಕು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ರೈತರ ಸಾಲಮನ್ನಾ ಋಣಮುಕ್ತ ಕಾಯಿದೆ, ಬಡವರ ಬಂಧು ವಿನಂತಹ ಯೋಜನೆಗಳು ಮನೆಮನೆಗೆ ತಲುಪುವಂತಾಗಬೇಕು. ಆಗ ಮಾತ್ರ ಮುಂದಿನ ಚುನಾವಣೆಯಲ್ಲಿ ನೂರು ಸೀಟುಗಳನ್ನು ಗೆಲ್ಲುವ ಅವಕಾಶ ಬಂದೇ ಬರುತ್ತದೆ ಎಂದು ರೇವಣ್ಣ ವಿಶ್ವಾಸ ವ್ಯಕ್ತಪಡಿಸಿದರು.

Follow Us:
Download App:
  • android
  • ios