Asianet Suvarna News Asianet Suvarna News

ಜಾರಕಿಹೊಳಿ ರಾಸಲೀಲೆ ಬೆನ್ನಲ್ಲೇ ಎಚ್‌ಡಿಕೆಯಿಂದಲೂ ಸಿಡಿ ಮ್ಯಾಟರ್ ಸವಾಲು

ಇತ್ತ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ವಿಡಿಯೋ ಎಲ್ಲೆಡೆ ಸಾಕಷ್ಟು ಸದ್ದಾಗುತ್ತಿರುವ ಬೆನ್ನಲ್ಲೇ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಸಿಡಿ ಮ್ಯಾಟರ್ ಸವಾಲು ಹಾಕಿದ್ದಾರೆ. 

HD Kumaraswamy Challenge To Minister CP Yogeshwar snr
Author
Bengaluru, First Published Mar 3, 2021, 10:27 AM IST

ರಾಮ​ನ​ಗರ (ಮಾ.03): ಪ್ರವಾ​ಸೋ​ದ್ಯಮ ಸಚಿವ ಸಿ.ಪಿ.​ಯೋ​ಗೇ​ಶ್ವರ್‌ ​ಸಿ​ಡಿ ಕಿಂಗ್‌ ಅಂತಾ ಗೊತ್ತಿದೆ. ಅವರ ಬಳಿ ಇ​ರುವ ನನ್ನ ​ಸಿ​ಡಿ​ಯನ್ನು ನಾಳೆ ಬೆಳ​ಗ್ಗೆಯೇ ಬಿಡು​ಗಡೆ ಮಾಡಿ ತೋರಿ​ಸಲಿ ಎಂದು ಮಾಜಿ ಮುಖ್ಯ​ಮಂತ್ರಿ ಎಚ್‌.ಡಿ.​ಕು​ಮಾ​ರ​ಸ್ವಾಮಿ ಸವಾ​ಲು ಹಾಕಿ​ದರು.

ನಗರದಲ್ಲಿ ಮಂಗಳವಾರ ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿ​ದ ಅವರು, ನನ್ನ ​ಸಿಡಿ ಬಿಡು​ಗಡೆ ಮಾಡಲು ಸೂಕ್ತ ಸಂದ​ರ್ಭ​ಕ್ಕಾಗಿ ಕಾಯು​ವುದು ಬೇಡ. ನಾಳೆ ಬೆಳಗ್ಗೆಯೇ ಬಿಡು​ಗಡೆ ಮಾಡಲಿ. ಅದೆ​ಲ್ಲ​ವನ್ನು ಎದು​ರಿ​ಸುವ ಶಕ್ತಿ​ಯನ್ನು ರಾಮ​ನ​ಗ​ರದ ಜನರು ನೀಡಿ​ದ್ದಾರೆ. ನನ್ನ ಹತ್ತಿರ ಅವ​ರ ಆಟ​ಗಳು ನಡೆ​ಯು​ವು​ದಿಲ್ಲ ಎಂದು ಕಿಡಿ​ಕಾ​ರಿ​ದರು.

'ಜೆಡಿಎಸ್‌ನವರು ಬಿಜೆಪಿಗರ ಮನೆ ಬಾಗಿಲಿಗೆ ಬರ್ತಿದ್ದಾರೆ : ಸಿಎಂರಿಂದ ಸಪೋರ್ಟ್'

ಚನ್ನ​ಪ​ಟ್ಟಣ ಮಾತ್ರ​ವಲ್ಲ ರಾಜ್ಯದ ಯಾವುದೇ ಮೂಲೆ​ಯ​ಲ್ಲಾ​ದರೂ ಯೋಗೇ​ಶ್ವರ್‌ ರಾಜ​ಕಾ​ರ​ಣಕ್ಕೆ ಬರಲಿ, ಅವರ ಸವಾ​ಲನ್ನು ಸ್ವೀಕ​ರಿಸಿ ಎದು​ರಿ​ಸಲು ನಾನಲ್ಲ, ನನ್ನ ಕಾರ್ಯ​ಕರ್ತರೇ ಸಾಕು. ಕಳೆದ ಚನ್ನ​ಪ​ಟ್ಟಣ ವಿಧಾ​ನ​ಸಭಾ ಕ್ಷೇತ್ರ​ದಿಂದ ಸ್ಪರ್ಧಿ​ಸಿ​ದ್ದ ನಾನು ಚುನಾ​ವ​ಣೆ​ಯನ್ನೇ ನಡೆ​ಸ​ಲಿಲ್ಲ. ಕೇವಲ ನಾಮ​ಪತ್ರ ಸಲ್ಲಿಸಿ ಹೋಗಿದ್ದೆ. ಒಂದು ದಿನವೂ ಬಂದು ಕ್ಷೇತ್ರ​ದಲ್ಲಿ ಪ್ರಚಾರ ಮಾಡಲಿಲ್ಲ. ನನ್ನ ಕಾರ್ಯ​ಕ​ರ್ತರೇ ಚುನಾ​ವಣೆ ನಡೆ​ಸಿ​ದರು. ಇದನ್ನು ಯೋಗೇ​ಶ್ವರ್‌ ಬಹು​ಶಃ ಮರೆ​ತಿ​ರ​ಬೇಕು ಎಂದು ಹೇಳಿ​ದರು.

ಯೋಗೇ​ಶ್ವರ್‌ ಬಗ್ಗೆ ಚರ್ಚೆ ನಡೆ​ಸು​ವುದೇ ಅನ​ವ​ಶ್ಯಕ. ಪದೇ ಪದೇ ಚರ್ಚಿಸಿ ಅವರ ಮಟ್ಟಕ್ಕೆ ಇಳಿ​ಯಲು ನನಗೆ ಇಷ್ಟ​ವಿಲ್ಲ. ರಾಜ​ಕಾ​ರಣ ಮಾಡುವ ಸಂದ​ರ್ಭ​ದಲ್ಲಿ ರಾಜ​ಕಾ​ರಣ ಮಾಡು​ತ್ತೇನೆ. ಅವ​ರಿಗೆ ಇರುವ ಕೆಲಸ ನೋಡಿ​ಕೊ​ಳ್ಳಲಿ ಎಂದು ಹೇಳಿದರು.

Follow Us:
Download App:
  • android
  • ios