ಸರ್ವರೂ ಸಂಪಲೇ, ನಾಡು ತಂಪಲೇ ಪರಾಕ್ ಎಂದು ಭವಿಷ್ಯ ನುಡಿದಿದ್ದಾರೆ. ಈ ಭವಿಷ್ಯದ ಪ್ರಕಾರ ಮಳೆ ಬೆಳೆ ಸಮೃದ್ಧಿ ಆಗಿರಲಿದ್ದು, ಎಲ್ಲರೂ ನೆಮ್ಮದಿಯಿಂದ ಇರಲಿದ್ದಾರೆ ಎಂಬುದು ಕಾರ್ಣಿಕರ ವಿಶ್ಲೇಷಣೆ.
ಹಾವೇರಿ[ಅ.18]: ಜಿಲ್ಲೆ ರಾಣೇಬೆನ್ನೂರು ತಾಲೂಕಿನ ದೇವರಗುಡ್ಡದಲ್ಲಿ ಮಾಲತೇಶ ದೇವರ ಕಾರ್ಣಿಕ ನಾಗಪ್ಪ ಗೊರವಯ್ಯ ಭವಿಷ್ಯ ನುಡಿದಿದ್ದಾರೆ.
Add Asianetnews Kannada as a Preferred Source

ಸರ್ವರೂ ಸಂಪಲೇ, ನಾಡು ತಂಪಲೇ ಪರಾಕ್ ಎಂದು ಭವಿಷ್ಯ ನುಡಿದಿದ್ದಾರೆ. ಈ ಭವಿಷ್ಯದ ಪ್ರಕಾರ ಮಳೆ ಬೆಳೆ ಸಮೃದ್ಧಿ ಆಗಿರಲಿದ್ದು, ಎಲ್ಲರೂ ನೆಮ್ಮದಿಯಿಂದ ಇರಲಿದ್ದಾರೆ ಎಂಬುದು ಕಾರ್ಣಿಕರ ವಿಶ್ಲೇಷಣೆ. ಕಾರ್ಣಿಕರ ಮಾತನ್ನು ದೇವಸ್ಥಾನದ ಅರ್ಚಕರಾದ ಸಂತೋಷ ಪೂಜಾರ ವಿಶ್ಲೇಷಿಸಿದ್ದಾರೆ.
ತಾಲೂಕಿನ ರೈತರು ಮಾಲತೇಶ ದೇವರ ಕಾರ್ಣಿಕದ ಆಧಾರದ ಮೇಲೆ ವರ್ಷದ ಮಳೆ, ಬೆಳೆ ನಿರ್ಧರಿಸುತ್ತಾರೆ. ಗೊರವಯ್ಯ ಇಪ್ಪತ್ತು ಅಡಿ ಎತ್ತರದ ಬಿಲ್ಲನೇರಿ ಕಾರ್ಣಿಕ ನುಡಿಯುತ್ತಾರೆ.
