ಬರೇ ಅಕ್ಕಿಯಿಂದ ಸಿಕ್ಕಿತು 17 ಲಕ್ಷ ರು ಲಾಭ.. ಏನಿದು .. ಲಕ್ಷ್ಮಿಗೆ  ಲಾಕ್‌ಡೌನ್‌ನಿಂದ ಮತ್ತಷ್ಟು ವರಮಾನ ಸಿಕ್ಕಿದೆ. 

ಹೊಳವನಹಳ್ಳಿ (ಅ.14): ಲಕ್ಷಾಂತರ ಭಕ್ತರ ಕಾಣಿಕೆ ಮತ್ತು ನೆರವಿನಿಂದ ಮಹಾಲಕ್ಷ್ಮಿ ದೇವಾಲಯದ ಉಗ್ರಾಣದಲ್ಲಿ ಕಳೆದ 8 ತಿಂಗಳಿಂದ ಸಂಗ್ರಹವಾಗಿದ್ದ ಹಂಸ ಅಕ್ಕಿ, ಮೀಡಿಯಂ ಅಕ್ಕಿ, ಬೆಲ್ಲ, ಕೊಬ್ಬರಿಯ ಬಹಿರಂಗ ಹರಾಜು ಕೊರಟಗೆರೆ ತಹಶೀಲ್ದಾರ್‌ ಗೋವಿಂದರಾಜು ಸಮ್ಮುಖದಲ್ಲಿ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಲ್ಪತರು ನಾಡಿನ ಸುಪ್ರಸಿದ್ಧ ಪುಣ್ಯಕ್ಷೇತ್ರ ಕೊರಟಗೆರೆ ತಾಲೂಕಿನ ಗೊರವನಹಳ್ಳಿ ಮಹಾಲಕ್ಷ್ಮೀ ಸನ್ನಿಧಾನದಲ್ಲಿ ಕಳೆದ 8 ತಿಂಗಳಿಂದ ದಾಸೋಹ ಸ್ಥಗಿತವಾಗಿ ಶೇಖರಣೆ ಮೀಡಿಯಂ ಅಕ್ಕಿ 730 ಕ್ವಿಂಟಲ್‌ ಮೀಡಿಯಂ ಅಕ್ಕಿಯ ಪ್ರತಿಕ್ವಿಂಟಲ್‌ಗೆ 2030 ರು. ನಂತೆ 14 ಲಕ್ಷದ 80 ಸಾವಿರ, 120 ಕ್ವಿಂಟಲ್‌ ಹಂಸ ಅಕ್ಕಿಯ ಪ್ರತಿಕ್ವಿಂಟಲ್‌ಗೆ 2050 ರು. ನಂತೆ 2 ಲಕ್ಷದ 40 ಸಾವಿರಕ್ಕೆ ಬಹಿರಂಗ ಹರಾಜು ಪ್ರಕ್ರಿಯೆ ಪೂರ್ಣಗೊಂಡಿದೆ.

ಮತ್ತೆ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ : ಆತಂಕಗೊಂಡ ಜನ .

ಉಳಿದಂತೆ 12 ಕ್ವಿಂಟಲ್‌ ಬೆಲ್ಲದ ಪ್ರತಿಕ್ವಿಂಟಲ್‌ಗೆ 5 ಸಾವಿರದಂತೆ 60 ಸಾವಿರ ಮತ್ತು 2 ಕ್ವಿಂಟಲ್‌ ಕೊಬ್ಬರಿಗೆ ಪ್ರತಿಕ್ವಿಂಟಲ್‌ಗೆ 1250 ರು. ನಂತೆ 2500ಹಣ ದೇವಾಲಯದ ಖಜಾನೆಗೆ ಬಂದಿದೆ. ಹರಾಜು ಪ್ರಕ್ರಿಯೆ ಸಂದರ್ಭದಲ್ಲಿ ಮಧುಸೂದನ್‌, ರಮೇಶ್‌ ಸೇರಿದಂತೆ ಇತರರು ಇದ್ದರು.