ಬೆಂಗಳೂರಿನಲ್ಲಿ ಬಾರ್, ಪಬ್ ಬಂದ್ : 1 ದಿನ ಎಣ್ಣೆ ಸಿಗಲ್ಲ..!
ಬೆಂಗಳೂರಿನ ಉತ್ತರ ಬಾಗದಲ್ಲಿರುವ ಬಾರ್, ವೈನ್ ಶಾಪ್ ಬಂದ್ ಮಾಡುವಂತೆ ನಗರ ಪೊಲೀಸ್ ಕಮಿಷನರ್ ಆದೇಶಿಸಿದ್ದಾರೆ. ಎಷ್ಟು ದಿನ ಬಾರ್ ಬಂದ್? ಕಾರಣವೇನು? ಈ ಕೆಳಗಿನಂತಿದೆ ಮಾಹಿತಿ.
ಬೆಂಗಳೂರು (ಸೆ.03): ಗಣೇಶ ಮೂರ್ತಿಗಳ ವಿಸರ್ಜನೆ ಹಿನ್ನೆಲೆಯಲ್ಲಿ ಸೆ. 7ರಂದು ಬೆಂಗಳೂರಿನ ಉತ್ತರ ಭಾಗದ ಏರಿಯಾಗಳಲ್ಲಿ ಬಾರ್ ಬಂದ್ ಮಾಡುವಂತೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಆದೇಶ ಹೊರಡಿಸಿದ್ದಾರೆ.
ಗಣೇಶ ಮೂರ್ತಿಗಳ ಮೆರವಣಿಗೆ ಹಾಗೂ ವಿಸರ್ಜನೆ ಇರುವ ಹಿನ್ನೆಲೆ ಈ ಆದೇಶವನ್ನು ಹೊರಡಿಸಲಾಗಿದೆ. ಸೆ.7ರಂದು 57 ಗಣೇಶ ಮೂರ್ತಿ ವಿಸರ್ಜನಾ ಕಾರ್ಯಕ್ರಮ ನಡೆಯಲಿದೆ. ಈ ವೇಳೆ ಐದು ಸಾವಿರ ಜನ ಪಾಲ್ಗೊಳ್ಳುವ ಸಾಧ್ಯತೆ ಇದೆ.
ಮದ್ಯ ಖರೀದಿಗೆ ಕರ್ನಾಟಕದಲ್ಲಿ ಆಧಾರ್ ಕಡ್ಡಾಯ? ಕುಡುಕರ ರಕ್ಷಣೆಗೆ 6 ಸಲಹೆ
ಅಷ್ಟೇ ಅಲ್ಲದೇ ಅಹಿತಕರ ಘಟನೆ ಸಾಧ್ಯತೆ ಎಂದು ಗುಪ್ತಚರ ಮೂಲಗಳ ಮಾಹಿತಿ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತವಾಗಿ ನಗರ ಪೊಲೀಸ್ ಈ ಕ್ರಮಕೈಗೊಂಡಿದೆ.
ಬೆಂಗಳೂರಿನ ಪ್ರಮುಖ ಏರಿಯಾಗಳಾದ ಆರ್ ಟಿ ನಗರ , ಸಂಜಯ್ ನಗರ , ಜೆ ಸಿ ನಗರ , ಹೆಬ್ಬಾಳ , ಡಿಜೆ ಹಳ್ಳಿ ,ಪುಲಿಕೇಶಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬಾರ್, ವೈನ್ ಶಾಪ್ ಹಾಗು ಪಂಬ್ ಬಂದ್ ಮಾಡುವಂತೆ ಭಾಸ್ಕರ್ ರಾವ್ ಅವರು ಇಂದು [ಮಂಗಳವಾರ] ಆದೇಶ ಹೊರಡಿಸಿದ್ದಾರೆ.
ಮೇಲೆ ಹೇಳಲಾಗಿರುವ ಏರಿಯಾಗಳಲ್ಲಿ ಸೆ.7 ಬೆಳಗ್ಗೆ 6ರಿಂದ ಸೆ.8 ಬೆಳಗ್ಗೆ 9ರ ವರೆಗೆ ಮದ್ಯ ಮರಾಟವನ್ನು ನಿಷೇಧಿಸಲಾಗಿದೆ.